ಬೆಂಗಳೂರು: ಬಿಜೆಪಿಯೊಳಗಿನ ಸಂಘ ಪರಿವಾರ ಮತ್ತು ಜನತಾ ಪರಿವಾರಗಳ ನಡುವಿನ ಕಿತ್ತಾಟ ಮುಗಿಯದು ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, 'ವಲಸಿಗರೇ ಎಲ್ಲಾ ಅಧಿಕಾರ ಅನುಭವಿಸುತ್ತಿರುವಾಗ ಮೂಲ ಬಿಜೆಪಿಗರು ಸುಮ್ಮನಿರುವುದಾದರೂ ಹೇಗೆ' ಎಂದು ಪ್ರಶ್ನಿಸಿದೆ.
'ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಒಂದು ದಿನವೂ ನೆಮ್ಮದಿಯಿಂದ ಆಡಳಿತ ನಡೆಸಲು ಬಿಡದಂತೆ ಕಾಡುವುದು ನಿಶ್ಚಿತ. ಯಡಿಯೂರಪ್ಪ ಅವರನ್ನೇ ಬಿಡದವರು ಬೊಮ್ಮಾಯಿಯವರನ್ನು ಬಿಡುವರೇ?' ಎಂದು ಕಾಂಗ್ರೆಸ್ ಟ್ವೀಟಿಸಿದೆ.
'ಬಿಜೆಪಿಯೊಳಗಿನ ಸಂಘಪರಿವಾರ ಮತ್ತು ಜನತಾ ಪರಿವಾರಗಳ ನಡುವಿನ ಕಿತ್ತಾಟ ಮುಗಿಯದು' ಎಂದು ಕಾಂಗ್ರೆಸ್ ಹೇಳಿದೆ.