<p><strong>ಬೆಂಗಳೂರು</strong>: ‘ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಬಿಜೆಪಿಯ ಹಣಮಂತ ನಿರಾಣಿ ಅವರನ್ನು ನಾಮನಿರ್ದೇಶನ ಮಾಡುವಂತೆ ವಿಧಾನಪರಿಷತ್ನಿಂದ ಪ್ರಸ್ತಾವ ಸಲ್ಲಿಸಿದ್ದರೂ, ಕ್ರಮಕೈಗೊಂಡಿಲ್ಲ. ಈ ಪ್ರಕರಣವನ್ನು ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಸಿದರು.</p>.<p>ಹಣಮಂತ ನಿರಾಣಿ ಮಾತನಾಡಿ, ವಿಧಾನಸಭೆ ಹಾಗೂ ವಿಧಾನಪರಿಷತ್ನಿಂದ ತಲಾ ಒಬ್ಬರನ್ನು ನಾಮನಿರ್ದೇಶನ ಮಾಡಲಾಗಿದೆ. ಕಳೆದ ಆಗಸ್ಟ್ನಲ್ಲೇ ಪ್ರಸ್ತಾವ ಸಲ್ಲಿಸಿದರೂ, ನಾಮನಿರ್ದೇಶನ ಮಾಡಿಲ್ಲ. ಹಲವು ಬಾರಿ ಅಲೆದರೂ ಆದೇಶ ನೀಡಿಲ್ಲ. ಸಭಾಪತಿ ಪೀಠಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.</p>.<p>ಅವರ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ‘ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದರು. </p>.<p>‘ಯಾಕ್ರಿ ಮಾಡಿಲ್ಲ, ಸದನಕ್ಕೆ ಗೌರವ ಕೊಡೋಕಾಗಲ್ವಾ? ಸಭಾಪತಿ ಆದೇಶ ಕೊಟ್ಟ ಮೇಲೆ ಮುಖ್ಯಮಂತ್ರಿ ಹತ್ತಿರ ಮಾತನಾಡುವುದು ಏನಿದೆ? ತಕ್ಷಣ ಆದೇಶ ಕೊಡಿ, ಇಲ್ಲ ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದರು.</p>.<h2>ಮುಖ್ಯಮಂತ್ರಿಗೆ ನೀವು ಆಪ್ತರು..</h2><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮಗೆ ಆಪ್ತರು’ ಎಂದ ಜವಳಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಕಾಂಗ್ರೆಸ್ನ ಉಮಾಶ್ರೀ ಕೋಪಗೊಂಡರು.</p><p>ವಿಧಾನಪರಿಷತ್ನಲ್ಲಿ ಮಾತನಾಡಿದ ಉಮಾಶ್ರೀ, ರೈತರು ಮತ್ತು ನೇಕಾರರು ಒಂದೇ ದೋಣಿಯ ಪಯಣಿಗರು. ರೈತರ ಆತ್ಮಹತ್ಯೆಗೆ ಪರಿಹಾರ ನೀಡುವ ಸರ್ಕಾರ, ನೇಕಾರರು ಆತ್ಮಹತ್ಯೆಗೆ ಪರಿಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.</p><p>ಅದಕ್ಕೆ ಉತ್ತರಿಸಿದ ಶಿವಾನಂದ ಪಾಟೀಲ, ‘ಪರಿಹಾರ ನೀಡಲು ನಿಯಮವಿಲ್ಲ. ಐದು ವರ್ಷಗಳಲ್ಲಿ 51 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಮೃತ 25 ನೇಕಾರರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ವಿದ್ಯುತ್ ಚಾಲಿತ ನೇಕಾರರಿಗೆ ಈ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ ಮಾಡಲು ನಿಮ್ಮನ್ನೂ ಕರೆದುಕೊಂಡು ಹೋಗುವೆ. ನೀವು ಅವರಿಗೆ ಆಪ್ತರು’ ಎಂದರು.</p><p>ಅದಕ್ಕೆ ಕೋಪಗೊಂಡ ಉಮಾಶ್ರೀ ‘ನೀವು ಎಲ್ಲವನ್ನೂ ನಮ್ಮ ಮೇಲೆ ಹಾಕುವಿರಿ, ಹಾಗೆ ಮಾತನಾಡಬೇಡಿ, ನಿಮಗಿಂತ ನಾನು ಆಪ್ತಳಲ್ಲ’ ಎಂದು ತಿರುಗೇಟು ನೀಡಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಗೆ ಬಿಜೆಪಿಯ ಹಣಮಂತ ನಿರಾಣಿ ಅವರನ್ನು ನಾಮನಿರ್ದೇಶನ ಮಾಡುವಂತೆ ವಿಧಾನಪರಿಷತ್ನಿಂದ ಪ್ರಸ್ತಾವ ಸಲ್ಲಿಸಿದ್ದರೂ, ಕ್ರಮಕೈಗೊಂಡಿಲ್ಲ. ಈ ಪ್ರಕರಣವನ್ನು ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಸಿದರು.</p>.<p>ಹಣಮಂತ ನಿರಾಣಿ ಮಾತನಾಡಿ, ವಿಧಾನಸಭೆ ಹಾಗೂ ವಿಧಾನಪರಿಷತ್ನಿಂದ ತಲಾ ಒಬ್ಬರನ್ನು ನಾಮನಿರ್ದೇಶನ ಮಾಡಲಾಗಿದೆ. ಕಳೆದ ಆಗಸ್ಟ್ನಲ್ಲೇ ಪ್ರಸ್ತಾವ ಸಲ್ಲಿಸಿದರೂ, ನಾಮನಿರ್ದೇಶನ ಮಾಡಿಲ್ಲ. ಹಲವು ಬಾರಿ ಅಲೆದರೂ ಆದೇಶ ನೀಡಿಲ್ಲ. ಸಭಾಪತಿ ಪೀಠಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು.</p>.<p>ಅವರ ಪ್ರಶ್ನೆಗೆ ಉತ್ತರಿಸಿದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ‘ಪ್ರಸ್ತಾವನೆ ಪರಿಶೀಲನೆಯಲ್ಲಿದೆ. ಮುಖ್ಯಮಂತ್ರಿ ಜತೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದರು. </p>.<p>‘ಯಾಕ್ರಿ ಮಾಡಿಲ್ಲ, ಸದನಕ್ಕೆ ಗೌರವ ಕೊಡೋಕಾಗಲ್ವಾ? ಸಭಾಪತಿ ಆದೇಶ ಕೊಟ್ಟ ಮೇಲೆ ಮುಖ್ಯಮಂತ್ರಿ ಹತ್ತಿರ ಮಾತನಾಡುವುದು ಏನಿದೆ? ತಕ್ಷಣ ಆದೇಶ ಕೊಡಿ, ಇಲ್ಲ ಹಕ್ಕುಚ್ಯುತಿಗೆ ನೀಡುತ್ತೇನೆ’ ಎಂದರು.</p>.<h2>ಮುಖ್ಯಮಂತ್ರಿಗೆ ನೀವು ಆಪ್ತರು..</h2><p>‘ಮುಖ್ಯಮಂತ್ರಿ ಸಿದ್ದರಾಮಯ್ಯ ನಿಮಗೆ ಆಪ್ತರು’ ಎಂದ ಜವಳಿ ಸಚಿವ ಶಿವಾನಂದ ಪಾಟೀಲ ವಿರುದ್ಧ ಕಾಂಗ್ರೆಸ್ನ ಉಮಾಶ್ರೀ ಕೋಪಗೊಂಡರು.</p><p>ವಿಧಾನಪರಿಷತ್ನಲ್ಲಿ ಮಾತನಾಡಿದ ಉಮಾಶ್ರೀ, ರೈತರು ಮತ್ತು ನೇಕಾರರು ಒಂದೇ ದೋಣಿಯ ಪಯಣಿಗರು. ರೈತರ ಆತ್ಮಹತ್ಯೆಗೆ ಪರಿಹಾರ ನೀಡುವ ಸರ್ಕಾರ, ನೇಕಾರರು ಆತ್ಮಹತ್ಯೆಗೆ ಪರಿಹಾರ ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.</p><p>ಅದಕ್ಕೆ ಉತ್ತರಿಸಿದ ಶಿವಾನಂದ ಪಾಟೀಲ, ‘ಪರಿಹಾರ ನೀಡಲು ನಿಯಮವಿಲ್ಲ. ಐದು ವರ್ಷಗಳಲ್ಲಿ 51 ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಮೃತ 25 ನೇಕಾರರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ವಿದ್ಯುತ್ ಚಾಲಿತ ನೇಕಾರರಿಗೆ ಈ ಸೌಲಭ್ಯ ಸಿಕ್ಕಿಲ್ಲ. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ ಮಾಡಲು ನಿಮ್ಮನ್ನೂ ಕರೆದುಕೊಂಡು ಹೋಗುವೆ. ನೀವು ಅವರಿಗೆ ಆಪ್ತರು’ ಎಂದರು.</p><p>ಅದಕ್ಕೆ ಕೋಪಗೊಂಡ ಉಮಾಶ್ರೀ ‘ನೀವು ಎಲ್ಲವನ್ನೂ ನಮ್ಮ ಮೇಲೆ ಹಾಕುವಿರಿ, ಹಾಗೆ ಮಾತನಾಡಬೇಡಿ, ನಿಮಗಿಂತ ನಾನು ಆಪ್ತಳಲ್ಲ’ ಎಂದು ತಿರುಗೇಟು ನೀಡಿದರು. </p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>