‘ಪ್ರತಿಮೆಯನ್ನು ಯಾವ ಜಾಗದಲ್ಲಿ ಸ್ಥಾಪಿಸಬೇಕು, ಅದರ ವೆಚ್ಚ ಎಷ್ಟು ಎಂಬುದರ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ. ಬಸವಣ್ಣನವರು ವಚನ ಬರೆಯುತ್ತಿರುವ ರೀತಿಯ ಪ್ರತಿಮೆ ಸ್ಥಾಪಿಸುವುದು ಸೂಕ್ತ ಎಂಬ ಅಭಿಪ್ರಾಯ ಸಂಪುಟ ಸಭೆಯಲ್ಲಿ ವ್ಯಕ್ತವಾಯಿತು’ ಎಂದು ಬೊಮ್ಮಾಯಿ ಹೇಳಿದರು. ಚಾಲುಕ್ಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆ ಇರುವಾಗ ಮತ್ತೊಂದು ಪ್ರತಿಮೆ ಔಚಿತ್ಯವಿದೆಯೇ ಎಂಬ ಚರ್ಚೆಯೂ ಶುರುವಾಗಿದೆ.