ವಾಸ್ತವದಲ್ಲಿ ಬಾವಲಿಗಳು ಮನುಷ್ಯರಿಗೆ ಉಪಕಾರಿಯಾಗಿವೆ. ಕೀಟಗಳು, ಸೊಳ್ಳೆ, ನೊಣ, ಮತ್ತು ಬೆಳೆ ನಾಶ ಮಾಡುವ ಕೀಟಗಳನ್ನು ಭಕ್ಷಣೆ ಮಾಡುತ್ತವೆ. ಭಾರತದಲ್ಲಿ 128 ಪ್ರಬೇಧದ ಬಾವಲಿಗಳಿವೆ. ವಿನಾಶದಂಚಿನಲ್ಲಿರುವ ಕೋಲಾರ್ ಎಲೆ ಮೂಗಿನ ಬಾವಲಿ ಕೂಡ ಸೇರಿದೆ. ಬಾವಲಿಗಳನ್ನು ರಕ್ಷಿಸಲು ಸರ್ಕಾರ ಕಾನೂನು ರೂಪಿಸಬೇಕು ಎಂದು ರಾಜೇಶ್ ಪುಟ್ಟಸ್ವಾಮಯ್ಯ ಒತ್ತಾಯಿಸಿದ್ದಾರೆ.