ಈ ಕುರಿತು ಪ್ರತಿಕ್ರಿಯಿಸಿದ ವಿಮಾನನಿಲ್ದಾಣ ನಿರ್ದೇಶಕ ರಾಜೇಶ್ಕುಮಾರ್ ಮೌರ್ಯ, ‘ಲಾಕ್ಡೌನ್ ಇದ್ದರೂ ವಿಮಾನನಿಲ್ದಾಣದಲ್ಲಿ ಕಾರ್ಗೊ, ಪರಿಹಾರ ಕಾರ್ಯಾಚರಣೆ ಹಾಗೂ ಇತರ ತುರ್ತು ಸೇವೆಗಳ ವಿಮಾನಗಳ ಹಾರಾಟಕ್ಕೆ ಅವಕಾಶವಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಕನಿಷ್ಠ ಮಾನವ ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಈ ಅವಧಿ ವಿಸ್ತರಿಸಿಕೊಳ್ಳಬಹುದಾಗಿದೆ. ಮಂಗಳವಾರ ಮಧ್ಯಾಹ್ನ 3ರ ನಂತರ ಬಂದಿದ್ದ ಏರ್ ಆಂಬ್ಯುಲೆನ್ಸ್ನಲ್ಲಿ ನವಜಾತ ಶಿಶು,ವೈದ್ಯರನ್ನು ಒಳಗೊಂಡ ತಂಡ ಚಿಕಿತ್ಸೆಗೆಂದು ತಂದಿತ್ತು. ಆ ವಿಮಾನಕ್ಕೆ ಡಿಜಿಸಿಎದಿಂದ ಅನುಮತಿಯೂ ದೊರೆತಿತ್ತು. ಬುಧವಾರ ಅದು ಮರಳಿದೆ. ನಾವು ಮಾನವೀಯತೆ ದೃಷ್ಟಿಯಿಂದಾಗಿ ಪೂರಕ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು.