<p><strong>ಬೆಳಗಾವಿ:</strong> ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಬಾರಿ ಮೈ ಕೊರೆಯುವ ಚಳಿ ಮಧ್ಯೆಯೂ 118 ಪ್ರತಿಭಟನೆ ನಡೆದವು. ಪ್ರತಿಭಟನಕಾರರಿಗೆ ಎಂದಿನಂತೆ ಭರವಸೆಗಳಷ್ಟೇ ಉಳಿದವು. ಸಂಘಟನಗಳ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿಲ್ಲ, ತಾರ್ಕಿಕ ಅಂತ್ಯ ಕಾಣಲಿಲ್ಲ.</p>.<p>ಸುವರ್ಣ ವಿಧಾನಸೌಧ ಬಳಿ ಹಾಗೂ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ ಈ ಬಾರಿ ಪ್ರತಿಭಟನೆಗಳಿಗಾಗಿಯೇ ವೇದಿಕೆ ನಿರ್ಮಿಸಲಾಗಿತ್ತು. ಡಿಸೆಂಬರ್ 8 ರಿಂದ 19ರವರೆಗೆ (10 ದಿನ) ಇವೆರಡೂ ವೇದಿಕೆಗಳು ಪ್ರತಿಭಟನಕಾರರಿಂದ ಕಿಕ್ಕಿರಿದು ತುಂಬಿದ್ದವು. ನಿರಂತರ ಘೋಷಣೆಗಳು ಕಿವಿಗೆ ಬಿದ್ದವು.</p>.<p>‘ಬೆಳಗಾವಿ ಅಧಿವೇಶನ ಪ್ರತಿಭಟನೆಗೆ ಸೀಮಿತ’ ಎಂಬ ಆರೋಪವಿದೆ. ಹಾಗಾಗಿ ಅಧಿವೇಶನಕ್ಕೂ ಮೊದಲೇ ವಿವಿಧ ಸಂಘಟನೆಯವರ ಜತೆ ಸಭೆ ನಡೆಸಿ, ಪ್ರತಿಭಟನೆಗಳ ಅಬ್ಬರ ತಗ್ಗಿಸಲು ಜಿಲ್ಲಾಡಳಿತ ಯೋಜಿಸಿತ್ತು.</p>.<p>ಇದರ ಮಧ್ಯೆಯೂ, ರೈತರು, ಅಂಗವಿಕಲರು, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ನಿವೃತ್ತ ನೌಕರರು, ವಿವಿಧ ಸಮುದಾಯಗಳ ಸಂಘಟನೆಗಳವರು ಧರಣಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸಿದರು.</p>.<p>‘ಈ ಬಾರಿ 118 ಪ್ರತಿಭಟನೆ ನಡೆದಿವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದಿನಕ್ಕೆ ಒಬ್ಬರು ಅಥವಾ ಇಬ್ಬರು ಸಚಿವರು ಪ್ರತಿಭಟನಾ ವೇದಿಕೆಗಳತ್ತ ಬಂದು, ಎಲ್ಲ ಟೆಂಟುಗಳನ್ನು ಸುತ್ತಾಡಿ ಮನವಿ ಸ್ವೀಕರಿಸಿದರು. ಹೆಚ್ಚಿನ ಬೇಡಿಕೆಗಳಿಗೆ ಖಚಿತ ಸ್ಪಂದನೆ ಸಿಗಲಿಲ್ಲ.</p>.<p>‘ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಸಚಿವರು ಆಶ್ವಾಸನೆ ನೀಡಿದರು. ಇಷ್ಟಕ್ಕೆ ಪ್ರತಿಭಟನಕಾರರು ತೃಪ್ತರಾಗಬೇಕಾಯಿತು.</p>.<div><blockquote>ರಾಜ್ಯದ ವಿವಿಧೆಡೆಯ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಂಬಂಧಿತ ಸಚಿವರು ವೇದಿಕೆಗಳತ್ತ ಬರಲಿಲ್ಲ. ಕೆಲವರು ಕಾಟಾಚಾರಕ್ಕೆ ಎಂಬಂತೆ ಮನವಿ ಪಡೆದುಹೋದರು.</blockquote><span class="attribution">ಶಿವಲಿಂಗ ಟಿರಕಿ ಅಧ್ಯಕ್ಷ ಕರ್ನಾಟಕ ರಾಜ್ಯ ನೇಕಾರ ಸೇವಾಸಂಘ</span></div>.<div><blockquote>ಅಧಿವೇಶನ ವೇಳೆ ಪ್ರತಿಭಟಿಸಿದವರ ಪೈಕಿ ನಮ್ಮ ಹಂತದಲ್ಲಿ ಬಗೆಹರಿಸಬೇಕಿರುವ ಬೇಡಿಕೆ ಈಡೇರಿಸುತ್ತೇವೆ. ಉಳಿದವುಗಳನ್ನು ಆಯಾ ಇಲಾಖೆ ಸಚಿವರ ಗಮನಕ್ಕೆ ತರುತ್ತೇವೆ</blockquote><span class="attribution">ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಬಾರಿ ಮೈ ಕೊರೆಯುವ ಚಳಿ ಮಧ್ಯೆಯೂ 118 ಪ್ರತಿಭಟನೆ ನಡೆದವು. ಪ್ರತಿಭಟನಕಾರರಿಗೆ ಎಂದಿನಂತೆ ಭರವಸೆಗಳಷ್ಟೇ ಉಳಿದವು. ಸಂಘಟನಗಳ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿಲ್ಲ, ತಾರ್ಕಿಕ ಅಂತ್ಯ ಕಾಣಲಿಲ್ಲ.</p>.<p>ಸುವರ್ಣ ವಿಧಾನಸೌಧ ಬಳಿ ಹಾಗೂ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ ಈ ಬಾರಿ ಪ್ರತಿಭಟನೆಗಳಿಗಾಗಿಯೇ ವೇದಿಕೆ ನಿರ್ಮಿಸಲಾಗಿತ್ತು. ಡಿಸೆಂಬರ್ 8 ರಿಂದ 19ರವರೆಗೆ (10 ದಿನ) ಇವೆರಡೂ ವೇದಿಕೆಗಳು ಪ್ರತಿಭಟನಕಾರರಿಂದ ಕಿಕ್ಕಿರಿದು ತುಂಬಿದ್ದವು. ನಿರಂತರ ಘೋಷಣೆಗಳು ಕಿವಿಗೆ ಬಿದ್ದವು.</p>.<p>‘ಬೆಳಗಾವಿ ಅಧಿವೇಶನ ಪ್ರತಿಭಟನೆಗೆ ಸೀಮಿತ’ ಎಂಬ ಆರೋಪವಿದೆ. ಹಾಗಾಗಿ ಅಧಿವೇಶನಕ್ಕೂ ಮೊದಲೇ ವಿವಿಧ ಸಂಘಟನೆಯವರ ಜತೆ ಸಭೆ ನಡೆಸಿ, ಪ್ರತಿಭಟನೆಗಳ ಅಬ್ಬರ ತಗ್ಗಿಸಲು ಜಿಲ್ಲಾಡಳಿತ ಯೋಜಿಸಿತ್ತು.</p>.<p>ಇದರ ಮಧ್ಯೆಯೂ, ರೈತರು, ಅಂಗವಿಕಲರು, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ನಿವೃತ್ತ ನೌಕರರು, ವಿವಿಧ ಸಮುದಾಯಗಳ ಸಂಘಟನೆಗಳವರು ಧರಣಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸಿದರು.</p>.<p>‘ಈ ಬಾರಿ 118 ಪ್ರತಿಭಟನೆ ನಡೆದಿವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ದಿನಕ್ಕೆ ಒಬ್ಬರು ಅಥವಾ ಇಬ್ಬರು ಸಚಿವರು ಪ್ರತಿಭಟನಾ ವೇದಿಕೆಗಳತ್ತ ಬಂದು, ಎಲ್ಲ ಟೆಂಟುಗಳನ್ನು ಸುತ್ತಾಡಿ ಮನವಿ ಸ್ವೀಕರಿಸಿದರು. ಹೆಚ್ಚಿನ ಬೇಡಿಕೆಗಳಿಗೆ ಖಚಿತ ಸ್ಪಂದನೆ ಸಿಗಲಿಲ್ಲ.</p>.<p>‘ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಸಚಿವರು ಆಶ್ವಾಸನೆ ನೀಡಿದರು. ಇಷ್ಟಕ್ಕೆ ಪ್ರತಿಭಟನಕಾರರು ತೃಪ್ತರಾಗಬೇಕಾಯಿತು.</p>.<div><blockquote>ರಾಜ್ಯದ ವಿವಿಧೆಡೆಯ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಂಬಂಧಿತ ಸಚಿವರು ವೇದಿಕೆಗಳತ್ತ ಬರಲಿಲ್ಲ. ಕೆಲವರು ಕಾಟಾಚಾರಕ್ಕೆ ಎಂಬಂತೆ ಮನವಿ ಪಡೆದುಹೋದರು.</blockquote><span class="attribution">ಶಿವಲಿಂಗ ಟಿರಕಿ ಅಧ್ಯಕ್ಷ ಕರ್ನಾಟಕ ರಾಜ್ಯ ನೇಕಾರ ಸೇವಾಸಂಘ</span></div>.<div><blockquote>ಅಧಿವೇಶನ ವೇಳೆ ಪ್ರತಿಭಟಿಸಿದವರ ಪೈಕಿ ನಮ್ಮ ಹಂತದಲ್ಲಿ ಬಗೆಹರಿಸಬೇಕಿರುವ ಬೇಡಿಕೆ ಈಡೇರಿಸುತ್ತೇವೆ. ಉಳಿದವುಗಳನ್ನು ಆಯಾ ಇಲಾಖೆ ಸಚಿವರ ಗಮನಕ್ಕೆ ತರುತ್ತೇವೆ</blockquote><span class="attribution">ಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>