<p><strong>ಬಳ್ಳಾರಿ:</strong> ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್ನಿಂದ ಎಳೆದು ತಂದು ಒಂದೇ ಹಳ್ಳಕ್ಕೆ ಎಸೆಯುವ 1 ನಿಮಿಷ 28 ಸೆಕೆಂಡಿನ ವಿಡಿಯೊ ಜಿಲ್ಲೆಯ ವಾಟ್ಸಾಪ್ ಗುಂಪುಗಳಲ್ಲಿ ಮಂಗಳವಾರ ಹರಿದಾಡಿತ್ತು.</p>.<p>ಇದು ಬಳ್ಳಾರಿಯಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಆದರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಇದನ್ನು ಖಚಿತಪಡಿಸಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p><strong>ವಿಡಿಯೊದಲ್ಲೇನಿದೆ?: </strong>ನೀಲಿ ಕಿಟ್ ಧರಿಸಿದ ಇಬ್ಬರು ಹಾಗೂ ಬಿಳಿಯ ಕಿಟ್ ಧರಿಸಿದ ಇಬ್ಬರು ಸಿಬ್ಬಂದಿ ಹಳ್ಳದ ಬಳಿ ನಿಂತು ವ್ಯಾನ್ನೆಡೆಗೆ ಹಿಂತಿರುಗುವ ಕ್ಷಣದಿಂದ ವಿಡಿಯೋ ಶುರುವಾಗುತ್ತದೆ.</p>.<p>ಮೂರು ಶವಗಳನ್ನು ಅವರು ಎಳೆದು ತಂದು ಹಳ್ಳಕ್ಕೆ ಎಸೆಯುತ್ತಾರೆ. ಸಮೀಪದಲ್ಲೇ ಇರುವ ವ್ಯಕ್ತಿಯೊಬ್ಬರು 'ನಿಧಾನಕ್ಕೆ' ಎನ್ನುತ್ತಾರೆ.<br />ಸಿಬ್ಬಂದಿಯೊಬ್ಬರು ತಮ್ಮ ಎರಡೂ ಕೈಗಳ ನಾಲ್ಕು ಬೆರಳುಗಳನ್ನು ಪ್ರದರ್ಶಿಸಿ, 'ಎಂಟವೆ ನೋಡ್ರಪ್ಪ ಟೋಟಲ್ಲು' ಎನ್ನುತ್ತಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ 'ಹಾಕಂಗುದ್ರೆ ಒಂದ್ರಲ್ಲೇ ಹಾಕ್ಬುಡಿ ಅತ್ತ ಮುಚ್ ಬುಡೋಣ' ಎನ್ನುತ್ತಾರೆ.</p>.<p>ಶವವನ್ನು ಹಳ್ಳಕ್ಕೆ ಬಿರುಸಿನಿಂದ ಸಿಬ್ಬಂದಿ ಬೀಳಿಸಿದಾಗ 'ಏ ನಿಧಾನಕ್ ಹಾಕ್ರೋ' ಎಂಬ ಮಾತೂ ಕೇಳುತ್ತದೆ.</p>.<p>'ಜಿಲ್ಲೆಯಲ್ಲಿ ಸೋಮವಾರ ಒಂಭತ್ತು ಮಂದಿಯ ಶವಸಂಸ್ಕಾರವಾಗಿದೆ. ಅವರೆಲ್ಲ ಭಾನುವಾರ ಮತ್ತು ಸೋಮವಾರ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ನಗರದ ಗುಗ್ಗರಹಟ್ಟಿ ಪ್ರದೇಶದ ಸ್ಮಶಾನವನ್ನು ಗುರುತಿಸಲಾಗಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.</p>.<p>'ಮೃತ ದೇಹಗಳಿಗೆ ಅಗೌರವ ತೋರದೆ ಶವಸಂಸ್ಕಾರ ನಡೆಸಬೇಕು ಎಂಬುದು ನಿಯಮವಿದೆ. ವಿಡಿಯೊ ನಮ್ಮ ಜಿಲ್ಲೆಯದ್ದೇ ಎಂದು ತನಿಖೆಯಲ್ಲಿ ಸಾಬೀತಾದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಕೊರೊನ ಸೋಂಕಿನಿಂದ ಮೃತಪಟ್ಟ ಮೂವರ ಶವಗಳನ್ನು ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ವ್ಯಾನ್ನಿಂದ ಎಳೆದು ತಂದು ಒಂದೇ ಹಳ್ಳಕ್ಕೆ ಎಸೆಯುವ 1 ನಿಮಿಷ 28 ಸೆಕೆಂಡಿನ ವಿಡಿಯೊ ಜಿಲ್ಲೆಯ ವಾಟ್ಸಾಪ್ ಗುಂಪುಗಳಲ್ಲಿ ಮಂಗಳವಾರ ಹರಿದಾಡಿತ್ತು.</p>.<p>ಇದು ಬಳ್ಳಾರಿಯಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಆದರೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಇದನ್ನು ಖಚಿತಪಡಿಸಿಲ್ಲ. ಹೆಚ್ಚುವರಿ ಜಿಲ್ಲಾಧಿಕಾರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.</p>.<p><strong>ವಿಡಿಯೊದಲ್ಲೇನಿದೆ?: </strong>ನೀಲಿ ಕಿಟ್ ಧರಿಸಿದ ಇಬ್ಬರು ಹಾಗೂ ಬಿಳಿಯ ಕಿಟ್ ಧರಿಸಿದ ಇಬ್ಬರು ಸಿಬ್ಬಂದಿ ಹಳ್ಳದ ಬಳಿ ನಿಂತು ವ್ಯಾನ್ನೆಡೆಗೆ ಹಿಂತಿರುಗುವ ಕ್ಷಣದಿಂದ ವಿಡಿಯೋ ಶುರುವಾಗುತ್ತದೆ.</p>.<p>ಮೂರು ಶವಗಳನ್ನು ಅವರು ಎಳೆದು ತಂದು ಹಳ್ಳಕ್ಕೆ ಎಸೆಯುತ್ತಾರೆ. ಸಮೀಪದಲ್ಲೇ ಇರುವ ವ್ಯಕ್ತಿಯೊಬ್ಬರು 'ನಿಧಾನಕ್ಕೆ' ಎನ್ನುತ್ತಾರೆ.<br />ಸಿಬ್ಬಂದಿಯೊಬ್ಬರು ತಮ್ಮ ಎರಡೂ ಕೈಗಳ ನಾಲ್ಕು ಬೆರಳುಗಳನ್ನು ಪ್ರದರ್ಶಿಸಿ, 'ಎಂಟವೆ ನೋಡ್ರಪ್ಪ ಟೋಟಲ್ಲು' ಎನ್ನುತ್ತಾರೆ. ವಿಡಿಯೊ ಚಿತ್ರೀಕರಿಸಿದ ವ್ಯಕ್ತಿ 'ಹಾಕಂಗುದ್ರೆ ಒಂದ್ರಲ್ಲೇ ಹಾಕ್ಬುಡಿ ಅತ್ತ ಮುಚ್ ಬುಡೋಣ' ಎನ್ನುತ್ತಾರೆ.</p>.<p>ಶವವನ್ನು ಹಳ್ಳಕ್ಕೆ ಬಿರುಸಿನಿಂದ ಸಿಬ್ಬಂದಿ ಬೀಳಿಸಿದಾಗ 'ಏ ನಿಧಾನಕ್ ಹಾಕ್ರೋ' ಎಂಬ ಮಾತೂ ಕೇಳುತ್ತದೆ.</p>.<p>'ಜಿಲ್ಲೆಯಲ್ಲಿ ಸೋಮವಾರ ಒಂಭತ್ತು ಮಂದಿಯ ಶವಸಂಸ್ಕಾರವಾಗಿದೆ. ಅವರೆಲ್ಲ ಭಾನುವಾರ ಮತ್ತು ಸೋಮವಾರ ಮೃತಪಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ನಗರದ ಗುಗ್ಗರಹಟ್ಟಿ ಪ್ರದೇಶದ ಸ್ಮಶಾನವನ್ನು ಗುರುತಿಸಲಾಗಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.</p>.<p>'ಮೃತ ದೇಹಗಳಿಗೆ ಅಗೌರವ ತೋರದೆ ಶವಸಂಸ್ಕಾರ ನಡೆಸಬೇಕು ಎಂಬುದು ನಿಯಮವಿದೆ. ವಿಡಿಯೊ ನಮ್ಮ ಜಿಲ್ಲೆಯದ್ದೇ ಎಂದು ತನಿಖೆಯಲ್ಲಿ ಸಾಬೀತಾದರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>