ಬೆಂಗಳೂರು–ಮೈಸೂರು ದಶಪಥ ಹೆದ್ದಾರಿ ಅಭಿವೃದ್ಧಿಯ ಸಂಕೇತ ಎಂದೇ ಹೇಳಲಾಗುತ್ತಿದೆ. ಆದರೆ, ಬೆಂಗಳೂರು–ಮೈಸೂರಿನ ಸಾಮಾನ್ಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರನ್ನೇ ನೆಚ್ಚಿಕೊಂಡು ನಡೆಯುತ್ತಿದ್ದ ಬಿಡದಿಯ ತಟ್ಟೆ ಇಡ್ಲಿ ಹೋಟೆಲ್ಗಳು ಮತ್ತು ಮದ್ದೂರಿನ ವಡೆ ಹೋಟೆಲ್ಗಳು ಈಗ ಸಂಕಷ್ಟದಲ್ಲಿವೆ. ಹೊಸದಾಗಿ ಬದುಕು ಕಟ್ಟಿಕೊಳ್ಳಲು ಮತ್ತೊಂದು ಮಾರ್ಗೋಪಾಯವನ್ನು ಹುಡುಕುವ ಸವಾಲು ಎದುರಿಸುತ್ತಿವೆ.