<p><strong>ಬೆಂಗಳೂರು: </strong>ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬೇಸರ ನೀಗಲು ಭಜನೆ ಮತ್ತು ಹರಟೆಯಲ್ಲಿ ತೊಡಗಿದ್ದರು.</p>.<p>ಮೊಗಸಾಲೆಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಸರ್ಕಾರ ಚರ್ಚೆಗೆ ಅವಕಾಶ ನೀಡದ ಕಾರಣ ಸಭಾಧ್ಯಕ್ಷರ ಊಟವನ್ನು ನಿರಾಕರಿಸಿದ ಬಿಜೆಪಿ ಸದಸ್ಯರು, ತಾವೇ ಊಟದ ವ್ಯವಸ್ಥೆಯನ್ನು ಮಾಡಿಕೊಂಡರು. ರಾತ್ರಿ ಮಲಗಲು ದಿಂಬು ಮತ್ತು ಹೊದಿಕೆಗಳನ್ನು ತರಿಸಿಕೊಂಡರು.</p>.<p><strong>ಮಾತಿನ ಚಕಮಕಿ:</strong></p>.<p>ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮತ್ತು ಪೊಲೀಸ್ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.</p>.<p>ಧರಣಿ ವೇಳೆ ವಿಧಾನಸಭೆಯಿಂದ ಹೊರಹೋಗಿದ್ದ ಧೀರಜ್ ಮುನಿರಾಜು ಅವರು ಟಿ–ಶರ್ಟ್ ಧರಿಸಿ ವಾಪಸಾಗಿದ್ದರು. ಆದರೆ ಅವರು ಶಾಸಕ ಎಂಬುದನ್ನು ಗುರುತಿಸದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ, ಹೊರ ಹೋಗುವಂತೆ ಏಕವಚನದಲ್ಲಿ ಸೂಚಿಸಿದರು ಎನ್ನಲಾಗಿದೆ.</p>.<p>ಡಿಸಿಪಿ ಅವರ ನಡೆಗೆ ಧೀರಜ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ಆನಂತರ ಧೀರಜ್ ಅವರು ಶಾಸಕ ಎಂಬುದು ಗೊತ್ತಾದ ನಂತರ, ಡಿಸಿಪಿ ಕರಿಬಸವನಗೌಡ ಅವರು ಕ್ಷಮೆ ಕೇಳಿದರು ಎನ್ನಲಾಗಿದೆ.</p>.<p>ಪೊಲೀಸ್ ಅಧಿಕಾರಿ ವರ್ತನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರನ್ನು ಬಿಡುತ್ತೀರಿ. ಆದರೆ, ಶಾಸಕರನ್ನು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಪ್ರತಿಭಟನಾನಿರತ ಶಾಸಕರನ್ನು ಭೇಟಿಮಾಡಿ, ಯೋಗಕ್ಷೇಮ ವಿಚಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಬೇಸರ ನೀಗಲು ಭಜನೆ ಮತ್ತು ಹರಟೆಯಲ್ಲಿ ತೊಡಗಿದ್ದರು.</p>.<p>ಮೊಗಸಾಲೆಯಲ್ಲಿ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಸರ್ಕಾರ ಚರ್ಚೆಗೆ ಅವಕಾಶ ನೀಡದ ಕಾರಣ ಸಭಾಧ್ಯಕ್ಷರ ಊಟವನ್ನು ನಿರಾಕರಿಸಿದ ಬಿಜೆಪಿ ಸದಸ್ಯರು, ತಾವೇ ಊಟದ ವ್ಯವಸ್ಥೆಯನ್ನು ಮಾಡಿಕೊಂಡರು. ರಾತ್ರಿ ಮಲಗಲು ದಿಂಬು ಮತ್ತು ಹೊದಿಕೆಗಳನ್ನು ತರಿಸಿಕೊಂಡರು.</p>.<p><strong>ಮಾತಿನ ಚಕಮಕಿ:</strong></p>.<p>ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮತ್ತು ಪೊಲೀಸ್ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.</p>.<p>ಧರಣಿ ವೇಳೆ ವಿಧಾನಸಭೆಯಿಂದ ಹೊರಹೋಗಿದ್ದ ಧೀರಜ್ ಮುನಿರಾಜು ಅವರು ಟಿ–ಶರ್ಟ್ ಧರಿಸಿ ವಾಪಸಾಗಿದ್ದರು. ಆದರೆ ಅವರು ಶಾಸಕ ಎಂಬುದನ್ನು ಗುರುತಿಸದ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡ, ಹೊರ ಹೋಗುವಂತೆ ಏಕವಚನದಲ್ಲಿ ಸೂಚಿಸಿದರು ಎನ್ನಲಾಗಿದೆ.</p>.<p>ಡಿಸಿಪಿ ಅವರ ನಡೆಗೆ ಧೀರಜ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆಯಿತು. ಆನಂತರ ಧೀರಜ್ ಅವರು ಶಾಸಕ ಎಂಬುದು ಗೊತ್ತಾದ ನಂತರ, ಡಿಸಿಪಿ ಕರಿಬಸವನಗೌಡ ಅವರು ಕ್ಷಮೆ ಕೇಳಿದರು ಎನ್ನಲಾಗಿದೆ.</p>.<p>ಪೊಲೀಸ್ ಅಧಿಕಾರಿ ವರ್ತನೆಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರನ್ನು ಬಿಡುತ್ತೀರಿ. ಆದರೆ, ಶಾಸಕರನ್ನು ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಪ್ರತಿಭಟನಾನಿರತ ಶಾಸಕರನ್ನು ಭೇಟಿಮಾಡಿ, ಯೋಗಕ್ಷೇಮ ವಿಚಾರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>