<p><strong>ಬೆಂಗಳೂರು</strong>: ‘ಆರ್ಥಿಕ ಹಿಂಜರಿತ ಇದ್ದರೂ ಭಾವನಾತ್ಮಕ ವಿಷಯಗಳಿಂದ ಮರೆಮಾಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ವಿಧಾನ ಪರಿಷತ್ನಲ್ಲಿ ಗುರುವಾರ ಕಾಂಗ್ರೆಸ್ನ ಪಿ.ಆರ್. ರಮೇಶ್ ಟೀಕಿಸಿದರು.</p>.<p>ಬಜೆಟ್ ಕುರಿತ ಚರ್ಚೆಯಲ್ಲಿ ಅವರು, ‘ಬಿಜೆಟ್ ಸಂಪೂರ್ಣವಾಗಿ ಅಶಿಸ್ತಿನಿಂದ ಕೂಡಿದೆ. ಹಣಕಾಸಿನ ವ್ಯವಸ್ಥೆ ನಿರ್ವಹಿಸಲಾಗದ ಪರಿಸ್ಥಿತಿಯಿದೆ. ಕೇಂದ್ರದಿಂದಲೂ ರಾಜ್ಯಕ್ಕೆ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ’ ಎಂದು ದೂರಿದರು.</p>.<p>‘ಗೋವುಗಳ ರಕ್ಷಣೆ ಹೆಸರಿನಲ್ಲಿ ಮತ ಪಡೆಯುತ್ತೀರಿ. ಆದರೆ, ಬೆಂಗಳೂರಿನಲ್ಲೇ ಉತ್ತಮ ಗುಣಮಟ್ಟದ ಗೋಮಾಂಸ ಎಲ್ಲೆಡೆ ಸಿಗುತ್ತಿದೆ. ಹಾಗಾದರೆ, ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.</p>.<p>‘ಅಧಿಕಾರಿಗಳ ಮನೆಯ ಪೈಪ್, ತೊಟ್ಟಿಗಳಲ್ಲಿ ದುಡ್ಡು ಬರುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗೆ ಯಾರು ಕಾರಣ? ನಿರುದ್ಯೋಗವೂ ಹೆಚ್ಚಾಗಿದೆ. ಯುವಕರಿಗೆ ಉದ್ಯೋಗಾವಕಾಶ ಇಲ್ಲದಂತಾಗಿದೆ. ಇಡೀ ಬಜೆಟ್ ಕನ್ನಡಿಯಲ್ಲಿರುವ ಗಂಟು’ ಎಂದು ಟೀಕಿಸಿದರು.</p>.<p><strong>‘ಒಬಿಸಿಗೆ ಮೀಸಲಾತಿ ಬಳಿಕವೇ ಚುನಾವಣೆ’</strong><br />‘ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಬಳಿಕವೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು’ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.</p>.<p>‘ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿಯೇ ಇದೆ. ಮೀಸಲಾತಿ ಕಲ್ಪಿಸುವ ಬಗ್ಗೆ ಈಗಾಗಲೇ ಎರಡು–ಮೂರು ಬಾರಿ ಸಭೆಗಳನ್ನು ಮಾಡಲಾಗಿದೆ’ ಎಂದು ವಿಧಾನಪರಿಷತ್ನಲ್ಲಿ ತಿಳಿಸಿದರು.</p>.<p><strong>ಸದನದಲ್ಲಿ ಕೇಳಿದ್ದು...</strong><br />ಜಿಎಸ್ಟಿ ನಮ್ಮ ಕೂಸು. ಈ ಬಗ್ಗೆ ಹೆಮ್ಮೆ ಇದೆ. ಆದರೆ, ಇದನ್ನು ಜಾರಿಗೊಳಿಸಿದ ರೀತಿ ವಿನಾಶಕಾರಿಯಾಗಿದೆ.<br />-<em><strong>ಬಿ.ಕೆ. ಹರಿಪ್ರಸಾದ್,ವಿಧಾನಪರಿಷತ್ ವಿರೋಧ ಪಕ್ಷದ ನಾಯಕ</strong></em></p>.<p>*</p>.<p>ಕಲ್ಯಾಣ ಕರ್ನಾಟಕದಲ್ಲಿ 34 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.<br />-<em><strong>ಅರವಿಂದ ಕುಮಾರ ಅರಳಿ,ಕಾಂಗ್ರೆಸ್ ಸದಸ್ಯ</strong></em></p>.<p>*</p>.<p>ಸ್ತ್ರೀಶಕ್ತಿ ಸಂಘಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಈ ಸಂಘಗಳು ತಯಾರಿಸಿದ ವಸ್ತುಗಳನ್ನೇ ಸರ್ಕಾರ ಖರೀದಿಸಬೇಕು.<br />-<em><strong>ಭಾರತಿ ಶೆಟ್ಟಿ,ಬಿಜೆಪಿ ಸದಸ್ಯೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಆರ್ಥಿಕ ಹಿಂಜರಿತ ಇದ್ದರೂ ಭಾವನಾತ್ಮಕ ವಿಷಯಗಳಿಂದ ಮರೆಮಾಚುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ’ ಎಂದು ವಿಧಾನ ಪರಿಷತ್ನಲ್ಲಿ ಗುರುವಾರ ಕಾಂಗ್ರೆಸ್ನ ಪಿ.ಆರ್. ರಮೇಶ್ ಟೀಕಿಸಿದರು.</p>.<p>ಬಜೆಟ್ ಕುರಿತ ಚರ್ಚೆಯಲ್ಲಿ ಅವರು, ‘ಬಿಜೆಟ್ ಸಂಪೂರ್ಣವಾಗಿ ಅಶಿಸ್ತಿನಿಂದ ಕೂಡಿದೆ. ಹಣಕಾಸಿನ ವ್ಯವಸ್ಥೆ ನಿರ್ವಹಿಸಲಾಗದ ಪರಿಸ್ಥಿತಿಯಿದೆ. ಕೇಂದ್ರದಿಂದಲೂ ರಾಜ್ಯಕ್ಕೆ ದೊರೆಯಬೇಕಾದ ಪಾಲು ದೊರೆಯುತ್ತಿಲ್ಲ’ ಎಂದು ದೂರಿದರು.</p>.<p>‘ಗೋವುಗಳ ರಕ್ಷಣೆ ಹೆಸರಿನಲ್ಲಿ ಮತ ಪಡೆಯುತ್ತೀರಿ. ಆದರೆ, ಬೆಂಗಳೂರಿನಲ್ಲೇ ಉತ್ತಮ ಗುಣಮಟ್ಟದ ಗೋಮಾಂಸ ಎಲ್ಲೆಡೆ ಸಿಗುತ್ತಿದೆ. ಹಾಗಾದರೆ, ಸರ್ಕಾರ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದರು.</p>.<p>‘ಅಧಿಕಾರಿಗಳ ಮನೆಯ ಪೈಪ್, ತೊಟ್ಟಿಗಳಲ್ಲಿ ದುಡ್ಡು ಬರುತ್ತಿದೆ. ಇಂತಹ ಭ್ರಷ್ಟ ವ್ಯವಸ್ಥೆಗೆ ಯಾರು ಕಾರಣ? ನಿರುದ್ಯೋಗವೂ ಹೆಚ್ಚಾಗಿದೆ. ಯುವಕರಿಗೆ ಉದ್ಯೋಗಾವಕಾಶ ಇಲ್ಲದಂತಾಗಿದೆ. ಇಡೀ ಬಜೆಟ್ ಕನ್ನಡಿಯಲ್ಲಿರುವ ಗಂಟು’ ಎಂದು ಟೀಕಿಸಿದರು.</p>.<p><strong>‘ಒಬಿಸಿಗೆ ಮೀಸಲಾತಿ ಬಳಿಕವೇ ಚುನಾವಣೆ’</strong><br />‘ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಬಳಿಕವೇ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು’ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.</p>.<p>‘ಸರ್ಕಾರ ಹಿಂದುಳಿದ ವರ್ಗಗಳ ಪರವಾಗಿಯೇ ಇದೆ. ಮೀಸಲಾತಿ ಕಲ್ಪಿಸುವ ಬಗ್ಗೆ ಈಗಾಗಲೇ ಎರಡು–ಮೂರು ಬಾರಿ ಸಭೆಗಳನ್ನು ಮಾಡಲಾಗಿದೆ’ ಎಂದು ವಿಧಾನಪರಿಷತ್ನಲ್ಲಿ ತಿಳಿಸಿದರು.</p>.<p><strong>ಸದನದಲ್ಲಿ ಕೇಳಿದ್ದು...</strong><br />ಜಿಎಸ್ಟಿ ನಮ್ಮ ಕೂಸು. ಈ ಬಗ್ಗೆ ಹೆಮ್ಮೆ ಇದೆ. ಆದರೆ, ಇದನ್ನು ಜಾರಿಗೊಳಿಸಿದ ರೀತಿ ವಿನಾಶಕಾರಿಯಾಗಿದೆ.<br />-<em><strong>ಬಿ.ಕೆ. ಹರಿಪ್ರಸಾದ್,ವಿಧಾನಪರಿಷತ್ ವಿರೋಧ ಪಕ್ಷದ ನಾಯಕ</strong></em></p>.<p>*</p>.<p>ಕಲ್ಯಾಣ ಕರ್ನಾಟಕದಲ್ಲಿ 34 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.<br />-<em><strong>ಅರವಿಂದ ಕುಮಾರ ಅರಳಿ,ಕಾಂಗ್ರೆಸ್ ಸದಸ್ಯ</strong></em></p>.<p>*</p>.<p>ಸ್ತ್ರೀಶಕ್ತಿ ಸಂಘಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು. ಈ ಸಂಘಗಳು ತಯಾರಿಸಿದ ವಸ್ತುಗಳನ್ನೇ ಸರ್ಕಾರ ಖರೀದಿಸಬೇಕು.<br />-<em><strong>ಭಾರತಿ ಶೆಟ್ಟಿ,ಬಿಜೆಪಿ ಸದಸ್ಯೆ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>