ಬೆಂಗಳೂರು: ‘ವಿಧಾನಪರಿಷತ್ತಿನಲ್ಲಿ ಉಪಸಭಾಪತಿ ಮೇಲೆ ಎರಗಿ ಕೊರಳು ಪಟ್ಟಿಗೆ ಕೈಹಾಕಿ ಎಳೆದುಹಾಕಿದ ಕಾಂಗ್ರೆಸ್
ಸಚೇತಕ ನಾರಾಯಣಸ್ವಾಮಿ, ಸದಸ್ಯರಾದ ನಜೀರ್ ಅಹ್ಮದ್, ಶ್ರೀನಿವಾಸಮಾನೆ, ಪ್ರಕಾಶ್ ರಾಥೋಡ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಬಿಜೆಪಿಯ ಆಯನೂರು ಮಂಜುನಾಥ್ ಅವರು ಸಭಾಪತಿ ಪ್ರತಾಪಚಂದ್ರ ಶೆಟ್ಟಿಯವರಿಗೆ ದೂರು ನೀಡಿದ್ದಾರೆ.