ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಹಿಂದೆಯೂ ಇವರಿಬ್ಬರು ಬಂದು ಹೋದ ಕೆಲವೇ ದಿನಗಳ ಬಳಿಕ ಗುತ್ತಿಗೆದಾರರ ಮನೆಗಳಲ್ಲಿ ₹102 ಕೋಟಿ ಸಿಕ್ಕಿತ್ತು. ಅದು ಕಾಂಗ್ರೆಸ್ ಪಕ್ಷವೇ ಸಂಗ್ರಹಿಸಿದ ಹಣ ಆಗಿತ್ತು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರ ಪಾತ್ರ ಅದರಲ್ಲಿದೆ ಎಂದು ಆರೋಪಿಸಿದರು.