ಹೊಸದುರ್ಗ ಶಾಖಾಮಠದಲ್ಲಿ ನಿರ್ಮಾಣಗೊಳ್ಳುತ್ತಿರುವ 32 ಅಡಿಯ ಏಕಶಿಲಾ ಕನಕ ಮೂರ್ತಿ ನಿಲ್ಲಿಸಲು ಅನುದಾನ ನೀಡಬೇಕು. ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ ಬರಬೇಕಿರುವ ಬಾಕಿ ಅನುದಾನ ಒದಗಿಸಬೇಕು ಎಂದು ಕಾಗಿನೆಲೆ ನಿರಂಜನಾನಂದ ಸ್ವಾಮೀಜಿ ಬೇಡಿಕೆ ಇಟ್ಟರು. ‘ಏಕಶಿಲಾಮೂರ್ತಿಗೆ ₹ 5 ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಘೋಷಣೆ ಮಾಡಿದ ಯಡಿಯೂರಪ್ಪ, ‘ಪ್ರಾಧಿಕಾರಕ್ಕೆ ನೀಡಲು ಬಾಕಿ ಇರುವ ₹ 30 ಕೋಟಿ ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಆಶ್ವಾಸನೆ ನೀಡಿದರು.