ಪತ್ರದ ಪ್ರಮುಖ ಅಂಶಗಳು
* ಕೂಡಲೇ ಬೆಂಗಳೂರು ನಗರದ ಶಾಸಕರಿಗೆ ಕುಡಿಯುವ ನೀರಿನ ಸರಬರಾಜಿನ ಪರಿಸ್ಥಿತಿ ಕುರಿತು ಸ್ಪಷ್ಟೀಕರಣ ನೀಡಬೇಕು. ಮುಂದಿನ ಜೂನ್ವರೆಗೆ ನಗರಕ್ಕೆ ಬೇಕಾಗುವ ಕುಡಿಯುವ ನೀರಿನ ಪ್ರಮಾಣ ಮತ್ತು ಲಭ್ಯತೆ ಇರುವ ನೀರಿನ ಪ್ರಮಾಣದ ಸ್ಪಷ್ಟೀಕರಣ ಅಗತ್ಯವಿದೆ.
*ಮುಂದಿನ ಜೂನ್ವರೆಗೂ ಕುಡಿಯುವ ನೀರು ಸರಬರಾಜು ಮಾಡಲು ಬೆಂಗಳೂರು ಜಲಮಂಡಳಿ ಹಾಕಿಕೊಂಡಿರುವ ಯೋಜನೆಗಳ ಕುರಿತು ವಿವರಣೆ ನೀಡಬೇಕು.
*ಹಿಂದೆಲ್ಲ ಮಾಡಿದಂತೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಲ್ಲಾ ಖಾಸಗಿ ಟ್ಯಾಂಕರ್ಗಳನ್ನು ಸರ್ಕಾರವೇ ತೆಗೆದುಕೊಂಡು ಆರ್ಟಿಓ ಮೂಲಕ ವಿವಿಧ ಕ್ಷೇತ್ರಗಳಿಗೆ ಹಂಚುವುದು ಅಗತ್ಯವಿದೆ.
* ವಾಣಿಜ್ಯ ಉದ್ದೇಶಗಳಿಗಾಗಿ ಉಪಯೋಗಿಸುತ್ತಿರುವ ಖಾಸಗಿ ಕೊಳವೆ ಬಾವಿಗಳನ್ನು ಬೆಂಗಳೂರು ನಾಗರಿಕರ ಉಪಯೋಗಕ್ಕಾಗಿ ಸರ್ಕಾರ ಮುಂದಿನ 9 ತಿಂಗಳ ಮಟ್ಟಿಗೆ ವಶಕ್ಕೆ ತೆಗೆದುಕೊಳ್ಳಬೇಕು. ಕೆಟ್ಟು ನಿಂತಿರುವ ಎಲ್ಲ ಕೊಳವೆ ಬಾವಿಗಳ ತುರ್ತು ದುರಸ್ತಿ ಮಾಡಬೇಕಿದೆ.
* ನೀರಿನ ದೊಡ್ಡ ಪ್ರಮಾಣದ ಸೋರುವಿಕೆಗಳನ್ನು ಕೂಡಲೇ ಪತ್ತೆ ಮಾಡಿ ಅದನ್ನೆಲ್ಲಾ ಸರಿಪಡಿಸುವ ಕಾರ್ಯ ಆಗಬೇಕು. ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಜೊತೆಗೆ ಸಮನ್ವಯ ಸಾಧಿಸಿ, ಜಲ ಮಂಡಳಿಗಳ ಪಂಪ್ ಹೌಸ್ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ರೀತಿಯ ಅಡಚಣೆ ಆಗದಂತೆ ನೋಡಿಕೊಳ್ಳಬೇಕು.