<p><strong>ಶನಿವಾರಸಂತೆ</strong>: ಲಾಭದ ನಿರೀಕ್ಷೆಯಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿಯ ಮಾರುಕಟ್ಟೆ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಚೈತ್ರ ಮಾಸ ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಹಸಿರುಮೆಣಸಿನಕಾಯಿ ಘಾಟು ವ್ಯಾಪಿಸುತ್ತದೆ. ರೈತರು ಬೇಸಿಗೆಯಲ್ಲಿ ಭತ್ತ ಕಟಾವಿನ ನಂತರ ಗದ್ದೆಯಲ್ಲಿ ಹಸಿಮೆಣಸಿನಕಾಯಿ ವ್ಯವಸಾಯ ಆರಂಭಿಸುತ್ತಾರೆ. ಮಳೆಗಾಲದ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಬ್ಯಾಸದ ಖರ್ಚಿಗಾಗಿಯೇ ಮೆಣಸಿನಕಾಯಿ ಕೃಷಿ ನಡೆಯುತ್ತದೆ.</p>.<p>ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೂಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳ ಬಹುತೇಕ ರೈತರು ಗದ್ದೆಯಲ್ಲಿ ಈ ವರ್ಷ ಅಧಿಕ ಇಳುವರಿ ಕೊಡುವ ‘ಬಂಗಾರಮ್ಮ’ ಹಸಿಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಇಳುವರಿ ಹೆಚ್ಚಾಗಿದ್ದರೂ ಉತ್ತಮ ದರ ಸಿಗದೆ ಹತಾಶರಾಗಿದ್ದಾರೆ. ಕೆಲ ರೈತರು ಮಾತ್ರ ಉಲ್ಕಾ ಮೆಣಸಿನಕಾಯಿ ಬೆಳೆದಿದ್ದು, ಬೆಳೆ ಕಟಾವಿಗೆ ಬಂದಿದೆ. 3 ವಾರಗಳಿಂದ ಮೆಣಸಿನಕಾಯಿ ಸಂತೆ ಆರಂಭವಾಗಿದ್ದು, ದರದಲ್ಲಿ ನಿರಂತರ ಏರಿಳಿತವಾಗುತ್ತಿದೆ.</p>.<p>ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 4 ಗಂಟೆಗೆ ಆರಂಭವಾಗುವ ಮೆಣಸಿನಕಾಯಿ ಸಂತೆ 10 ಗಂಟೆಗೆ ಮುಗಿದುಹೋಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಮೆಣಸಿನಕಾಯಿ ಖರೀದಿಸುತ್ತಿದ್ದಾರೆ. ಈ ವಾರ ಉಲ್ಕಾ ಮೆಣಸಿನಕಾಯಿ 1 ಕೆಜಿಗೆ ₹ 30 ಹಾಗೂ ಬಂಗಾರಮ್ಮ ಮೆಣಸಿನಕಾಯಿ 1 ಕೆಜಿಗೆ ₹ 20-25 ದರ ದೊರೆತಿದೆ.</p>.<p>ಸ್ಥಳೀಯ ವ್ಯಾಪಾರಿಗಳು ಖರೀದಿಸಿದ ಮೆಣಸಿನಕಾಯಿ ಹಾಸನ, ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗಕ್ಕೆ ರವಾನೆಯಾಗುತ್ತಿದೆ. ಅಲ್ಲಿನ ಮಂಡಿಗಳಲ್ಲಿ ಖರೀದಿಸುವ ವ್ಯಾಪಾರಿಗಳು ತಮಿಳುನಾಡು, ಕೇರಳ, ಅಹಮದಬಾದ್, ಮುಂಬಯಿ ಇತರ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾರೆ. ಕಡಿಮೆ ಬೆಲೆ ಖರೀದಿ ನಡೆಯುತ್ತಿರುವುದರಿಂದ ಲಾಭ ಸಿಗುತ್ತಿಲ್ಲ.</p>.<p>‘ಮಳೆಯಾಗದ ಕಾರಣ ಕೆರೆ, ಹೊಳೆಯಿಂದ ನೀರು ಹಾಯಿಸಿ ಮೆಣಸಿನಕಾಯಿ ಬೆಳೆದಿದ್ದೇವೆ. ಉತ್ತಮ ದರ ದೊರೆಯದೆ ಅಸಹಾಯಕರಾಗಿದ್ದೇವೆ’ ಎಂದು ರೈತ ಕಾಜೂರು ಚಂದ್ರಣ್ಣ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶನಿವಾರಸಂತೆ</strong>: ಲಾಭದ ನಿರೀಕ್ಷೆಯಲ್ಲಿ ಬೆಳೆದಿದ್ದ ಹಸಿ ಮೆಣಸಿನಕಾಯಿಯ ಮಾರುಕಟ್ಟೆ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ.</p>.<p>ಚೈತ್ರ ಮಾಸ ಆಗಮಿಸುತ್ತಿದ್ದಂತೆ ಜಿಲ್ಲೆಯಲ್ಲಿ ಹಸಿರುಮೆಣಸಿನಕಾಯಿ ಘಾಟು ವ್ಯಾಪಿಸುತ್ತದೆ. ರೈತರು ಬೇಸಿಗೆಯಲ್ಲಿ ಭತ್ತ ಕಟಾವಿನ ನಂತರ ಗದ್ದೆಯಲ್ಲಿ ಹಸಿಮೆಣಸಿನಕಾಯಿ ವ್ಯವಸಾಯ ಆರಂಭಿಸುತ್ತಾರೆ. ಮಳೆಗಾಲದ ಜೀವನ ನಿರ್ವಹಣೆ, ಮಕ್ಕಳ ವಿದ್ಯಾಬ್ಯಾಸದ ಖರ್ಚಿಗಾಗಿಯೇ ಮೆಣಸಿನಕಾಯಿ ಕೃಷಿ ನಡೆಯುತ್ತದೆ.</p>.<p>ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೂಜಗೇರಿ, ಮಾದ್ರೆ, ಬಿಳಾಹ ಗ್ರಾಮಗಳ ಬಹುತೇಕ ರೈತರು ಗದ್ದೆಯಲ್ಲಿ ಈ ವರ್ಷ ಅಧಿಕ ಇಳುವರಿ ಕೊಡುವ ‘ಬಂಗಾರಮ್ಮ’ ಹಸಿಮೆಣಸಿನಕಾಯಿ ಬೆಳೆದಿದ್ದಾರೆ. ಆದರೆ, ಇಳುವರಿ ಹೆಚ್ಚಾಗಿದ್ದರೂ ಉತ್ತಮ ದರ ಸಿಗದೆ ಹತಾಶರಾಗಿದ್ದಾರೆ. ಕೆಲ ರೈತರು ಮಾತ್ರ ಉಲ್ಕಾ ಮೆಣಸಿನಕಾಯಿ ಬೆಳೆದಿದ್ದು, ಬೆಳೆ ಕಟಾವಿಗೆ ಬಂದಿದೆ. 3 ವಾರಗಳಿಂದ ಮೆಣಸಿನಕಾಯಿ ಸಂತೆ ಆರಂಭವಾಗಿದ್ದು, ದರದಲ್ಲಿ ನಿರಂತರ ಏರಿಳಿತವಾಗುತ್ತಿದೆ.</p>.<p>ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 4 ಗಂಟೆಗೆ ಆರಂಭವಾಗುವ ಮೆಣಸಿನಕಾಯಿ ಸಂತೆ 10 ಗಂಟೆಗೆ ಮುಗಿದುಹೋಗುತ್ತಿದೆ. ಸ್ಥಳೀಯ ವ್ಯಾಪಾರಿಗಳು ರೈತರ ಮನೆ ಬಾಗಿಲಿಗೆ ಬಂದು ಮೆಣಸಿನಕಾಯಿ ಖರೀದಿಸುತ್ತಿದ್ದಾರೆ. ಈ ವಾರ ಉಲ್ಕಾ ಮೆಣಸಿನಕಾಯಿ 1 ಕೆಜಿಗೆ ₹ 30 ಹಾಗೂ ಬಂಗಾರಮ್ಮ ಮೆಣಸಿನಕಾಯಿ 1 ಕೆಜಿಗೆ ₹ 20-25 ದರ ದೊರೆತಿದೆ.</p>.<p>ಸ್ಥಳೀಯ ವ್ಯಾಪಾರಿಗಳು ಖರೀದಿಸಿದ ಮೆಣಸಿನಕಾಯಿ ಹಾಸನ, ಮೈಸೂರು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಚಿತ್ರದುರ್ಗಕ್ಕೆ ರವಾನೆಯಾಗುತ್ತಿದೆ. ಅಲ್ಲಿನ ಮಂಡಿಗಳಲ್ಲಿ ಖರೀದಿಸುವ ವ್ಯಾಪಾರಿಗಳು ತಮಿಳುನಾಡು, ಕೇರಳ, ಅಹಮದಬಾದ್, ಮುಂಬಯಿ ಇತರ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾರೆ. ಕಡಿಮೆ ಬೆಲೆ ಖರೀದಿ ನಡೆಯುತ್ತಿರುವುದರಿಂದ ಲಾಭ ಸಿಗುತ್ತಿಲ್ಲ.</p>.<p>‘ಮಳೆಯಾಗದ ಕಾರಣ ಕೆರೆ, ಹೊಳೆಯಿಂದ ನೀರು ಹಾಯಿಸಿ ಮೆಣಸಿನಕಾಯಿ ಬೆಳೆದಿದ್ದೇವೆ. ಉತ್ತಮ ದರ ದೊರೆಯದೆ ಅಸಹಾಯಕರಾಗಿದ್ದೇವೆ’ ಎಂದು ರೈತ ಕಾಜೂರು ಚಂದ್ರಣ್ಣ ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>