ಕಲಬುರ್ಗಿ: ಚಿಂಚೋಳಿ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ ಜಾಧವ ಅವರ ತಂದೆ ಡಾ. ಉಮೇಶ ಜಾಧವ ಅವರು ಬೆಡಸೂರ ಗ್ರಾಮದ ಮತಗಟ್ಟೆ ಸಂಖ್ಯೆ 79ರಲ್ಲಿ ಪತ್ನಿ ಗಾಯತ್ರಿ ಸಮೇತ ಮತದಾನ ಮಾಡಿದರು.
ವಿಶೇಷ ಪೂಜೆ ಡಾ. ಅವಿನಾಶ ಜಾಧವ ಅವರು ಮತದಾನಕ್ಕೂ ಮುನ್ನ ರೇವಗ್ಗಿಯ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಮೇಘನಾ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ತಾಂತ್ರಿಕದೋಷ ಮತದಾನ ಸ್ಥಗಿತ ಚಿಂಚೋಳಿ ತಾಲ್ಲೂಕು ರುಸ್ತಂಪುರ ಗ್ರಾಮದ ಮತಗಟ್ಟೆಯಲ್ಲಿ ಮತಯಂತ್ರಕೈಕೊಟ್ಟಿದ್ದು,ಮತದಾನ ಸ್ಥಗಿತವಾಗಿದೆ.
ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಕಲಬುರ್ಗಿ: ಚಿಂಚೋಳಿ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ ಅವರು ರೇವಗ್ಗಿ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಚಿಂಚೋಳಿ ತಾಲ್ಲೂಕು ಬಡಿ ಶೇರಿ ತಾಂಡಾದಲ್ಲಿ ಇವರು ಮತ ಚಲಾಯಿಸಲಿದ್ದಾರೆ.
ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಗಾಜರೆ ಅವರು ಪತ್ನಿ ಶಶಿಕಲಾ ಅವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.