ಬಿಜೆಪಿ ನಾಯಕರು ಹಿಂದೆ ನೀಡಿದ್ದ ಭರವಸೆಗಳನ್ನು ನಾಲ್ಕು ವರ್ಷಗಳಲ್ಲಿ ಈಡೇರಿಸಲಿಲ್ಲ. ನೀರಾವರಿಗೆ ₹1.50 ಲಕ್ಷ ವಿನಿಯೋಗಿಸಲಿಲ್ಲ. ರೈತರ ಸಾಲ ಮನ್ನಾಮಾಡಲಿಲ್ಲ. ಇದರಿಂದ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೊಟ್ಟ ಭರವಸೆ ಈಡೇರಿಸಿದೆ. ಅದನ್ನು ಸಹಿಸದೇ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.