ಬಜೆಟ್ನ ಆರಂಭದಲ್ಲೇ ‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ...’ ಎಂಬ ‘ಬಂಗಾರದ ಮನುಷ್ಯ’ ಸಿನಿಮಾ ಹಾಡನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕುವೆಂಪು, ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ ಸೇರಿದಂತೆ ಹಲವು ಕವಿಗಳು, ವಚನಕಾರರ ರಚನೆಗಳನ್ನು ಉಲ್ಲೇಖಿಸಿದರು. ಕರ್ಪೂರಿ ಠಾಕೂರ್, ಜವಾಹರಲಾಲ್ ನೆಹರೂ ಸೇರಿದಂತೆ ಹಲವರ ಮಾತುಗಳನ್ನೂ ತಮ್ಮ ಘೋಷಣೆಗಳಿಗೆ ಪೂರಕವಾಗಿ ಪ್ರಸ್ತಾಪಿಸಿದರು.