ಬೆಂಗಳೂರಿನ ಬಾಲಸತ್ಯ ಸರವಣನ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ದೇವಾಂಶ್ ತ್ರಿಪಾಠಿ, ಸನಾ ತಬಸ್ಸುಮ್, ಪ್ರಕೇತ್ ಗೋಯಲ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಹಿಮಾಚಲ ಪ್ರದೇಶದ ವಿದ್ಯಾರ್ಥಿ ಮಾನಸ್ ಸಿಂಗ್ ರಜಪೂತ್ ಐದು, ಆಂಧ್ರಪ್ರದೇಶದ ಗಣಿಪಿಸೆಟ್ಟಿ ನಿಶ್ಚಲ್ ಆರನೇ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ನಿಕೇತ್ ಪ್ರಕಾಶ್ ಅಚಂತಾ (ಏಳು) ನೇಹಾ ಪ್ರಭು (ಎಂಟು), ಜಗದೀಶ್ ರೆಡ್ಡಿ ಮಾರ್ಲಾ (ಒಂಬತ್ತು), ಈಶ್ವರಚಂದ್ರ ರೆಡ್ಡಿ ಮುಲ್ಕಾ 10ನೇ ಸ್ಥಾನ ಪಡೆದಿದ್ದಾರೆ. ಮೊದಲ 100 ಸ್ಥಾನಗಳಲ್ಲಿ 58 ವಿದ್ಯಾರ್ಥಿಗಳು ಕರ್ನಾಟಕದವರು.