‘ಈ ಮೈತ್ರಿಯಿಂದ ಕಾಂಗ್ರೆಸ್ಗೆ ಏನೂ ಲಾಭ ಇಲ್ಲ. ಜೆಡಿಎಸ್ ಮತ್ತಷ್ಟು ಪ್ರಬಲವಾಗಲಿದೆ’ ಎಂಬುದು ಅವರ ವಾದ. ಇದರ ಬೆನ್ನಲ್ಲೇ, ದೋಸ್ತಿ ಅನುಮಾನ ಎಂಬ ಸುಳಿವನ್ನು ದಿನೇಶ್ ಗುಂಡೂರಾವ್ ಶುಕ್ರವಾರ ಬಿಟ್ಟುಕೊಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್, ‘ಜೆಡಿಎಸ್ ಜೊತೆಗಿನ ಮೈತ್ರಿಗೆ ನಮ್ಮ ಪಕ್ಷದಲ್ಲಿ ಯಾರೂ ವಿರೋಧ ಮಾಡಿಲ್ಲ. ಹೊಂದಾಣಿಕೆ ವಿಚಾರವಾಗಿ ಪಕ್ಷದ ಮಟ್ಟದಲ್ಲಿ ಇನ್ನೂ ಚರ್ಚೆ ಆರಂಭವಾಗಿಲ್ಲ. ಲೋಕಸಭೆಯ ಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಿಲ್ಲ. ಬಳಿಕ ಹೈಕಮಾಂಡ್ ಮೈತ್ರಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದರು.