‘ಸಿದ್ದರಾಮಯ್ಯ ಪತ್ರಿಕೆಯೊಂದನ್ನು ಓದುತ್ತಿರುವಂತೆ ಬಿಂಬಿಸಿ, ಆ ಪತ್ರಿಕೆಯಲ್ಲಿ ಅವಹೇಳನಕಾರಿ ಬರಹಗಳು ಕಾಣುವಂತೆ ಮಾಡಲಾಗಿದೆ. ‘ದಕ್ಷಿಣದಿಂದ ಆರಂಭವಾಗುವ ಮೋದಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗುವುದು ಖಚಿತ, ನಿಶ್ಚಿತ, ಖಂಡಿತ. ಹೀಗಾಗಿ ಪಾ‘ಕೈ’ಸ್ತಾನಿಗಳಿಗೆ ಸುವರ್ಣಾವಕಾಶ. ದೇಶ, ಧರ್ಮ, ಜಾತಿ ವಿಭಜಕ ಮನಸ್ಥಿತಿಯವರು ಕೂಡಲೇ ಅರ್ಜಿ ಹಾಕಿ’ ಎಂದು ಉಲ್ಲೇಖಿಸಿ, ‘ಕಾಂಗ್ರೆಸ್ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ಬೇಕಾಗಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಕ್ಷಮಿಸುವ ಪಾ'ಕೈ'ಸ್ತಾನಿ ಮನಸ್ಥಿತಿ ಹೊಂದಿರಬೇಕು’ ಎಂದೆಲ್ಲ ತಪ್ಪು ಮಾಹಿತಿಯಿಂದ ಕೂಡಿರುವ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ. ದ್ವೇಷ ಭಾವನೆ ಮೂಡಿಸಲು ಪದೇ ಪದೇ ಪಾಕಿಸ್ತಾನದ ಜೊತೆಗೆ ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಸೇರಿಸಿ ಪೋಸ್ಟ್ ಮಾಡಲಾಗಿದೆ’ ಎಂದು ಕಾಂಗ್ರೆಸ್ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.