‘ಆಳುವ ಪಕ್ಷಗಳು ಬದಲಾಗಬಹುದು. ಆದರೆ, ಆಡಳಿತ ಎನ್ನುವುದು ನಿರಂತರ ಪ್ರಕ್ರಿಯೆ. ನೀತಿನಿರೂಪಣೆಗಳ ಮುಂದುವರಿಕೆ ಅತ್ಯಗತ್ಯ. ಕಾರ್ಯಯೋಜನೆಗಳನ್ನು ಬದಲಾಯಿಸಬಹುದೇ ಹೊರತು ನೀತಿ ನಿರೂಪಣೆಯನ್ನಲ್ಲʼ ಎಂದು ಹೇಳುತ್ತಾ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಸ್ಥಾನದಲ್ಲಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಬೇಕೆಂಬ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಉದಾಹರಣೆ ನೀಡುತ್ತಾರೆ. ಯೋಜನೆಗಳು ಕಾರ್ಯರೂಪಕ್ಕೆ ಬರುವುದು ನೀತಿನಿರೂಪಣೆಯ ಅಡಿಯಲ್ಲಾದರೆ ಕೇವಲ ಯೋಜನೆಗಳನ್ನು ಮಾತ್ರ ಬದಲಾಯಿಸಲು ಹೇಗೆ ಸಾಧ್ಯ? ಎಲ್ಲ ಸರ್ಕಾರಗಳು ಮಾಡಿರುವುದೂ ಅದನ್ನೇ. ಇದನ್ನು ಸಂವಿಧಾನದ ಯಾವ ವಿಧಿಯೂ ವಿರೋಧಿಸುವುದಿಲ್ಲ. ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಶಿಕ್ಷಣ ನೀತಿಯನ್ನು ಕಿತ್ತೊಗೆದು ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲವೇ? ಅದು ಕೇವಲ ಕಾರ್ಯನೀತಿಯ ಬದಲಾವಣೆಯಾಗಿರದೆ, ನೀತಿ ನಿರೂಪಣೆಯ ಬದಲಾವಣೆಯೂ ಆಗಿರಲಿಲ್ಲವೇ’ ಎಂದೂ ಪ್ರಶ್ನಿಸಿದ್ದಾರೆ.