‘ಸಣ್ಣ ವಿಚಾರಕ್ಕೂ ಮಾತನಾಡುವ ಪ್ರಧಾನಿ ಮೋದಿಯವರೇ ನಿಮ್ಮ ಮಿತ್ರ ಪಕ್ಷದ ಲೋಕಸಭಾ ಚುನಾವಣೆಯ ಅಭ್ಯರ್ಥಿಯ ಕೃತ್ಯದ ಬಗ್ಗೆ ಮಾತನಾಡಿ. ಏನೇ ಆದರೂ ಓಡಿ ಬರುವ ಶೋಭಕ್ಕಾ ಎಲ್ಲಿ ನಿಮ್ಮ ದನಿ? ಸಿ. ಟಿ. ರವಿ, ವಿಜಯೇಂದ್ರ, ಯತ್ನಾಳ, ಅಶೋಕ ಅವರೇ ಈಗ ನಿಮ್ಮ ನಾಲಿಗೆ ಹೊರಳುತ್ತಿಲ್ಲವೇ? ಇದು ರಾಜಕೀಯ ವಿಚಾರವಲ್ಲ; ದೇಶದ ಮರ್ಯಾದೆಯ ವಿಚಾರ. ನಮ್ಮ ಹೆಣ್ಣುಮಕ್ಕಳ ವಿಚಾರ. ಮಹಿಳೆಯ ಪರವಾಗಿ ದನಿ ಎತ್ತಲು ನಿಮಗೆ ಏನಾಗಿದೆ’ ಎಂದು ಪ್ರಶ್ನಿಸಿದರು.