<p><strong>ಬೆಂಗಳೂರು</strong>:‘ನಿವೇಶನವೊಂದನ್ನು ಖರೀದಿಸುವ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ನಟ ಮಯೂರ್ ಪಟೇಲ್ ಅವರು ಎಚ್ಎಸ್ಆರ್ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ನಟ ನೀಡಿರುವ ದೂರಿನ ಮೇರೆಗೆಅನಂತರಾಮ್ ರೆಡ್ಡಿ ಹಾಗೂ ಮಂಜುನಾಥ್ ರೆಡ್ಡಿ ಎಂಬುವವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.</p>.<p>ಬೇಗೂರಿನ ಪರಂಗಿಪಾಳ್ಯದ ಬಳಿ ಇರುವ ನಿವೇಶನವೊಂದನ್ನುಸುಬ್ರಹ್ಮಣ್ಯ ಎಂಬುವವರಿಂದ ಖರೀದಿಸಲು ಮಯೂರ್ ಕರಾರು ಮಾಡಿಕೊಂಡಿದ್ದರು. ಬಳಿಕ ಜ.22ರಂದು ತನ್ನ ಸ್ನೇಹಿತನ ಜೊತೆಗೆ ನಿವೇಶನ ನೋಡಲು ತೆರಳಿದ್ದರು. ಆದರೆ, ನಿವೇಶನಕ್ಕೆ ಬೇರೊಬ್ಬರು ಕಾಂಪೌಂಡ್ ನಿರ್ಮಿಸಿದ್ದರು.</p>.<p>‘ಈ ಬಗ್ಗೆ ವಿಚಾರಿಸಲು ಮುಂದಾದಾಗ, ಸ್ಥಳಕ್ಕೆ ಬಂದ ನಾಲ್ವರು ಅಪರಿಚಿತರು, ಈ ನಿವೇಶನ ಏಕೆ ನೋಡುತ್ತಿದ್ದೀರಾ? ಇದು, ಗನ್ ಮಂಜಣ್ಣ ಹಾಗೂ ಅನಂತರಾಮ ರೆಡ್ಡಿಗೆ ಸೇರಿದ್ದು. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು’.</p>.<p>‘ಬಳಿಕಅನಂತರಾಮ ರೆಡ್ಡಿ ಅವರನ್ನು ಭೇಟಿಯಾಗಿ ನಿವೇಶನದ ಬಗ್ಗೆ ಮಯೂರ್ ವಿಚಾರಿಸಿದ್ದು, ಈ ನಿವೇಶನವನ್ನು ತನ್ನ ಮಗನಾದ ಮಂಜುನಾಥ್ ರೆಡ್ಡಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಯಾರನ್ನೂ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಅನಂತರಾಮ್ ಮಾತನಾಡಿದ್ದರು. ನೀನು ಆ ಜಾಗಕ್ಕೆ ಬಾ, ಆಮೇಲೆ ನಾವು ಯಾರು ಎನ್ನುವುದು ನಿನಗೆ ತಿಳಿಯುತ್ತದೆ ಎಂದು ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಮಯೂರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>:‘ನಿವೇಶನವೊಂದನ್ನು ಖರೀದಿಸುವ ವಿಚಾರದಲ್ಲಿ ಕೆಲವರು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ನಟ ಮಯೂರ್ ಪಟೇಲ್ ಅವರು ಎಚ್ಎಸ್ಆರ್ ಬಡಾವಣೆ ಪೊಲೀಸರಿಗೆ ದೂರು ನೀಡಿದ್ದಾರೆ.</p>.<p>ನಟ ನೀಡಿರುವ ದೂರಿನ ಮೇರೆಗೆಅನಂತರಾಮ್ ರೆಡ್ಡಿ ಹಾಗೂ ಮಂಜುನಾಥ್ ರೆಡ್ಡಿ ಎಂಬುವವರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.</p>.<p>ಬೇಗೂರಿನ ಪರಂಗಿಪಾಳ್ಯದ ಬಳಿ ಇರುವ ನಿವೇಶನವೊಂದನ್ನುಸುಬ್ರಹ್ಮಣ್ಯ ಎಂಬುವವರಿಂದ ಖರೀದಿಸಲು ಮಯೂರ್ ಕರಾರು ಮಾಡಿಕೊಂಡಿದ್ದರು. ಬಳಿಕ ಜ.22ರಂದು ತನ್ನ ಸ್ನೇಹಿತನ ಜೊತೆಗೆ ನಿವೇಶನ ನೋಡಲು ತೆರಳಿದ್ದರು. ಆದರೆ, ನಿವೇಶನಕ್ಕೆ ಬೇರೊಬ್ಬರು ಕಾಂಪೌಂಡ್ ನಿರ್ಮಿಸಿದ್ದರು.</p>.<p>‘ಈ ಬಗ್ಗೆ ವಿಚಾರಿಸಲು ಮುಂದಾದಾಗ, ಸ್ಥಳಕ್ಕೆ ಬಂದ ನಾಲ್ವರು ಅಪರಿಚಿತರು, ಈ ನಿವೇಶನ ಏಕೆ ನೋಡುತ್ತಿದ್ದೀರಾ? ಇದು, ಗನ್ ಮಂಜಣ್ಣ ಹಾಗೂ ಅನಂತರಾಮ ರೆಡ್ಡಿಗೆ ಸೇರಿದ್ದು. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದರು’.</p>.<p>‘ಬಳಿಕಅನಂತರಾಮ ರೆಡ್ಡಿ ಅವರನ್ನು ಭೇಟಿಯಾಗಿ ನಿವೇಶನದ ಬಗ್ಗೆ ಮಯೂರ್ ವಿಚಾರಿಸಿದ್ದು, ಈ ನಿವೇಶನವನ್ನು ತನ್ನ ಮಗನಾದ ಮಂಜುನಾಥ್ ರೆಡ್ಡಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಯಾರನ್ನೂ ಇಲ್ಲಿಗೆ ಬರಲು ಬಿಡುವುದಿಲ್ಲ ಎಂದು ಏರುಧ್ವನಿಯಲ್ಲಿ ಅನಂತರಾಮ್ ಮಾತನಾಡಿದ್ದರು. ನೀನು ಆ ಜಾಗಕ್ಕೆ ಬಾ, ಆಮೇಲೆ ನಾವು ಯಾರು ಎನ್ನುವುದು ನಿನಗೆ ತಿಳಿಯುತ್ತದೆ ಎಂದು ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಮಯೂರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>