ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರು: ಸಿ.ಟಿ. ‌ರವಿ ತಿರುಗೇಟು

Last Updated 25 ಡಿಸೆಂಬರ್ 2019, 7:05 IST
ಅಕ್ಷರ ಗಾತ್ರ

ಮಂಗಳೂರು: ಸತ್ಯ ಹೇಳುವವರು ಆಕ್ರೋಶಕ್ಕೆ ತುತ್ತಾಗಿತ್ತಾರೆ. ಕರ್ನಾಟಕಕ್ಕೆ ಬೆಂಕಿ ಹಾಕುತ್ತೇನೆ ಎನ್ನುವವರು ಮಹಾತ್ಮರಾಗುತ್ತಾರೆ. ಸತ್ಯ ಹೇಳುವವರು ದುಷ್ಟರ ಕಣ್ಣಿಗೆ ಕೆಟ್ಟವರಾಗಿಯೇ ಕಾಣುತ್ತಾರೆ ಎಂದು ಸಚಿವ‌ ಸಿ.ಟಿ. ರವಿಪ್ರತಿಪಕ್ಷಗಳ‌ ನಾಯಕರಿಗೆ ತಿರುಗೇಟು ನೀಡಿದರು.

ಮಂಗಳೂರಿನಲ್ಲಿ ನಡೆದ ಗಲಭೆ ಕುರಿತು ಸಿಸಿಟಿವಿ‌ ದೃಶ್ಯಗಳಿಂದ ಇದೊಂದು ಪೂರ್ವಯೋಜಿತ ಕೃತ್ಯ ಎಂದು ತಿಳಿದು ಬಂದಿದೆ. ಪೊಲೀಸರ ಕ್ರಮದಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದರು.

ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರ ಕೊಟ್ಟರೆ ಪೊಲೀಸರ ನೈತಿಕ ಸ್ಥೈರ್ಯ ಕುಗ್ಗುತ್ತದೆ. ಪರಿಹಾರ ಪ್ರಚೋದನೆ ಆಗಬಾರದು. ಸತ್ತವರ ಬಗ್ಗೆ ಅನುಕಂಪ‌ ಇದೆ. ಸತ್ತವರು ಅಮಾಯಕರು‌ ಎಂಬ ಪ್ರಮಾಣಪತ್ರ ನೀಡಲಾಗದು. ಪರಿಹಾರಕ್ಕಾಗಿಯೇ ಗಲಭೆ ಮಾಡಿದ್ದಾರೆ ಎಂದೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ತ್ವರಿತ ಸುದ್ದಿ, ನಿಖರ ಮಾಹಿತಿಗೆwww.prajavani.netನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT