10ನೇ ತರಗತಿಯ ಭೂಗೋಳದಲ್ಲಿ ಇದುವರೆಗೂ ಇದ್ದ ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣದ ಮಾಹಿತಿಯ ಜತೆಗೆ ಮೆಟ್ರೊ ರೈಲು ಮಾಹಿತಿ, ಈಗಷ್ಟೇ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕೃತರಾದ ಹಸಿರು ಕ್ರಾಂತಿಯ ಹರಿಕಾರ ಸ್ವಾಮಿನಾಥ್ ಕುರಿತ ಮಾಹಿತಿ ಸೇರಿಸಲಾಗಿದೆ. ಕೇಂದ್ರ ಸರ್ಕಾರ ಈಚೆಗೆ ಮಹಿಳಾ ಮೀಸಲಾತಿಗಾಗಿ ರೂಪಿಸಿದ ‘ನಾರಿಶಕ್ತಿ ವಂದನಾ’ ಕಾಯ್ದೆ, ಬ್ಯಾಂಕ್ಗಳ ವಿಲೀನ, ಲಿಂಗತ್ವ ಅಲ್ಪಸಂಖ್ಯಾತರ ಮಾಹಿತಿ, ಪೋಕ್ಸೊ ಕಾಯ್ದೆಯ ವಿವರವನ್ನು 10ನೇ ತರಗತಿಯ ರಾಜ್ಯಶಾಸ್ತ್ರದಲ್ಲಿ ಅಳವಡಿಸಲಾಗಿದೆ. ಮಹಿಳಾ ದಿನಾಚರಣೆ ಪಾಠದಲ್ಲಿ ಹಲವು ಸಾಧಕ ಮಹಿಳೆಯರನ್ನು ಪರಿಚಯಿಸಲಾಗಿದೆ.