ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದ ಮುಂಭಾಗ ಸಾಹಸ ಸೈಕಲ್ ಯಾತ್ರೆಗೆ ಚಾಲನೆ ನೀಡಲಾಯಿತು. ಸೈಕಲ್ ಕ್ಲಬ್ ಸದಸ್ಯರು ಸ್ವಲ್ಪ ದೂರ ಸೈಕಲ್ ತುಳಿದು ಜತೆಯಾದರು. ಕ್ಲಬ್ ಅಧ್ಯಕ್ಷ ಬಿ.ಎಸ್.ಶ್ರೀಕಾಂತ್, ಕಾರ್ಯದರ್ಶಿ ಗಿರೀಶ್ ಕಾಮತ್, ಹರೀಶ್ ಕಾರ್ಣಿಕ್, ನರಸಿಂಹ ಮೂರ್ತಿ, ಗುರುಮೂರ್ತಿ, ರಜನಿ ಕಾಂತ್, ಗಣೇಶ್ ಕಾಮತ್, ನಟರಾಜ್ ಉಪಸ್ಥಿತರಿದ್ದರು.