<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಒಕ್ಕಲಿಗರಿಗೆ, ಲಿಂಗಾಯತರಿಗೆ ಎಷ್ಟು ಬಾರಿ ನೀಡಬೇಕು? ದಲಿತರು ಈ ಸ್ಥಾನ ಪಡೆಯುವುದು ಯಾವಾಗ’ ಎಂದು ಕರ್ನಾಟಕ ನವ ಜಾಗೃತಿ ವೇದಿಕೆಯ ಅಧ್ಯಕ್ಷರೂ ಆಗಿರುವ ದಲಿತ ಮುಖಂಡ ಅನಂತರಾಯಪ್ಪ ಪ್ರಶ್ನಿಸಿದರು.</p>.<p>ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನದ ಮೇಲೆ ದಾಳಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘12 ಬಾರಿ ಲಿಂಗಾಯತ, ಎಂಟು ಬಾರಿ ಒಕ್ಕಲಿಗ ಸಮುದಾಯವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಶೇ 25ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಒಮ್ಮೆಯೂ ಈ ಅವಕಾಶ ಸಿಕ್ಕಿಲ್ಲ’ ಎಂದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆ ತ್ಯಜಿಸುವ ಸಂದರ್ಭ, ಅನಿವಾರ್ಯತೆ ಉಂಟಾದರೆ, ಸಂವಿಧಾನ ವಿರೋಧಿಗಳನ್ನು ಹಿಮ್ಮೆಟ್ಟಿಸುವ ಧೈರ್ಯ, ಸಾಮರ್ಥ್ಯ, ಚಾಣಾಕ್ಷತನ ಇರುವಂಥ ದಲಿತರೊಬ್ಬರಿಗೆ ಆ ಸ್ಥಾನವನ್ನು ನೀಡಬೇಕು. ಸಂವಿಧಾನವನ್ನು ರಕ್ಷಿಸುವವರ ಕಡೆಗೆ ಗಮನಹರಿಸದೆ ಅಧಿಕಾರ ಹಿಡಿಯಲು, ಅಧಿಕಾರ ಕೈಗೆ ಬರುತ್ತಿದ್ದಂತೆ ಅದನ್ನು ಭದ್ರಪಡಿಸಿಕೊಳ್ಳಲು, ತಮ್ಮ ಆಸ್ತಿಪಾಸ್ತಿ ರಕ್ಷಿಸಲು ರಾಜಕೀಯ ಮಾಡುವವರನ್ನು ದೂರ ಇಡಬೇಕು’ ಎಂದೂ ಅವರು ಹೇಳಿದರು.</p>.<p>ವೇದಿಕೆಯ ಉಪಾಧ್ಯಕ್ಷ ಬಿ.ಜಿ. ಲೋಕೇಶ್, ಮುಖಂಡರಾದ ಚಂದ್ರಶೇಖರ್, ಸಾಹಿತಿ ರಾಜಶೇಖರ ಮುಂತಾದವರು ಕಾರ್ಯಕ್ರಮದಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ರಾಜ್ಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶವನ್ನು ಒಕ್ಕಲಿಗರಿಗೆ, ಲಿಂಗಾಯತರಿಗೆ ಎಷ್ಟು ಬಾರಿ ನೀಡಬೇಕು? ದಲಿತರು ಈ ಸ್ಥಾನ ಪಡೆಯುವುದು ಯಾವಾಗ’ ಎಂದು ಕರ್ನಾಟಕ ನವ ಜಾಗೃತಿ ವೇದಿಕೆಯ ಅಧ್ಯಕ್ಷರೂ ಆಗಿರುವ ದಲಿತ ಮುಖಂಡ ಅನಂತರಾಯಪ್ಪ ಪ್ರಶ್ನಿಸಿದರು.</p>.<p>ಅಂಬೇಡ್ಕರ್ ಭವನದಲ್ಲಿ ನಡೆದ ‘ಸಂವಿಧಾನದ ಮೇಲೆ ದಾಳಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘12 ಬಾರಿ ಲಿಂಗಾಯತ, ಎಂಟು ಬಾರಿ ಒಕ್ಕಲಿಗ ಸಮುದಾಯವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ರಾಜ್ಯದಲ್ಲಿ ಶೇ 25ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಒಮ್ಮೆಯೂ ಈ ಅವಕಾಶ ಸಿಕ್ಕಿಲ್ಲ’ ಎಂದರು.</p>.<p>‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುದ್ದೆ ತ್ಯಜಿಸುವ ಸಂದರ್ಭ, ಅನಿವಾರ್ಯತೆ ಉಂಟಾದರೆ, ಸಂವಿಧಾನ ವಿರೋಧಿಗಳನ್ನು ಹಿಮ್ಮೆಟ್ಟಿಸುವ ಧೈರ್ಯ, ಸಾಮರ್ಥ್ಯ, ಚಾಣಾಕ್ಷತನ ಇರುವಂಥ ದಲಿತರೊಬ್ಬರಿಗೆ ಆ ಸ್ಥಾನವನ್ನು ನೀಡಬೇಕು. ಸಂವಿಧಾನವನ್ನು ರಕ್ಷಿಸುವವರ ಕಡೆಗೆ ಗಮನಹರಿಸದೆ ಅಧಿಕಾರ ಹಿಡಿಯಲು, ಅಧಿಕಾರ ಕೈಗೆ ಬರುತ್ತಿದ್ದಂತೆ ಅದನ್ನು ಭದ್ರಪಡಿಸಿಕೊಳ್ಳಲು, ತಮ್ಮ ಆಸ್ತಿಪಾಸ್ತಿ ರಕ್ಷಿಸಲು ರಾಜಕೀಯ ಮಾಡುವವರನ್ನು ದೂರ ಇಡಬೇಕು’ ಎಂದೂ ಅವರು ಹೇಳಿದರು.</p>.<p>ವೇದಿಕೆಯ ಉಪಾಧ್ಯಕ್ಷ ಬಿ.ಜಿ. ಲೋಕೇಶ್, ಮುಖಂಡರಾದ ಚಂದ್ರಶೇಖರ್, ಸಾಹಿತಿ ರಾಜಶೇಖರ ಮುಂತಾದವರು ಕಾರ್ಯಕ್ರಮದಲ್ಲಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>