ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಕ್ಷಸ ಸ್ವರೂಪದ ಮಹಿಷ ಪ್ರತಿಮೆ ಕೆಡವಿ: ಪ್ರೊ.ಕೆ.ಎಸ್.ಭಗವಾನ್

Last Updated 3 ಅಕ್ಟೋಬರ್ 2018, 17:07 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ಬೆಟ್ಟದಲ್ಲಿರುವ ರಾಕ್ಷಸ ರೂಪದ ಮಹಿಷನ ಪ್ರತಿಮೆಯನ್ನು ಕೆಡವಿ, ಸೌಮ್ಯ ಸ್ವರೂಪದ ಪ್ರತಿಮೆ ಸ್ಥಾಪಿಸಬೇಕು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಇಲ್ಲಿ ಬುಧವಾರ ಸಲಹೆ ಮಾಡಿದರು.

ಮೈಸೂರಿನ ಅಂದಿನ ಮಹಾರಾಜರು ಪುರೋಹಿತಶಾಹಿಗಳ ಮಾತುಕೇಳಿ ರಕ್ಕಸ ಸ್ವರೂಪದ ಮಹಿಷನ ಪ್ರತಿಮೆ ನಿರ್ಮಿಸಿದ್ದರು. ಅದು ಈಗಲೂ ಹಾಗೆಯೇ ಇರಬೇಕು ಎಂದೇನಿದೆ. ವಾಸ್ತವದಲ್ಲಿ ಮಹಿಷ ರಾಕ್ಷಸನೇ ಅಲ್ಲ. ಆತ ಸ್ಥಳೀಯ ನಾಯಕ. ಪಿತೂರಿ ನಡೆಸಿ ಮಾನವನನ್ನು ರಕ್ಕಸನ್ನಾಗಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಬೌದ್ಧ ಭಿಕ್ಕುವಿನ ಸ್ವರೂಪದ ಮಹಿಷನ ಪ್ರತಿಮೆ ನಿರ್ಮಾಣವಾಗಬೇಕು. ಆಗಲೇ ಅವನಿಗೆ ಗೌರವ ಸಲ್ಲಿಸಿದಂತಾಗುವುದು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT