<p><strong>ಬೆಂಗಳೂರು:</strong> ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್ಇಆರ್ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿ ಸಾವಿರಾರು ಮಂದಿ ಚಂದನದ ಮುಂದೆ ಕಾದು ಕುಳಿತು ಮೂರ್ಖರಾಗಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಗಣಿತ, 10ರಿಂದ ಇಂಗ್ಲಿಷ್, 10.30ರಿಂದ ವಿಜ್ಞಾನ.. ಹೀಗೆ ಸಂಜೆ 5 ಗಂಟೆಯವರೆಗೆ ವೇಳಾಪಟ್ಟಿ ಸಿದ್ಧವಾಗಿದ್ದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ರಾಜ್ಯವ್ಯಾಪಿ ಶಾಲೆಗಳಿಗೆ ತಲುಪಿ, ಪೋಷಕರನ್ನೂ ತಲುಪಿತ್ತು.</p>.<p>ಹೀಗಾಗಿ ಸೋಮವಾರ ಬೆಳಿಗ್ಗೆಯಿಂದಲೇ ಪೋಷಕರು, ಮಕ್ಕಳು ದೂರದರ್ಶನದ ಮುಂದೆ ಪಾಠಗಳನ್ನು ಆಲಿಸಲು ಕಾದು ಕುಳಿತಿದ್ದರು.</p>.<p>ಸೋಮವಾರ ಬೆಳಿಗ್ಗೆ 9.30 ಕಳೆದರೂ ಪಾಠಗಳು ಶುರುವಾಗುವ ಲಕ್ಷಣ ಕಾಣಿಸಲಿಲ್ಲ. ಮತ್ತೆ ಅರ್ಧ ಗಂಟೆ ಕಾದರು. ಆಗಲೂ ಕಾರ್ಯಕ್ರಮ ಆರಂಭವಾಗಲಿಲ್ಲ. ಗಲಬಿಲಿಗೊಂಡ ಜನರು ದೂರದರ್ಶನ ಕಚೇರಿಗೇ ಕರೆ ಮಾಡಲಾರಂಭಿಸಿದರು. ಬೆಳಿಗ್ಗೆ 11 ಗಂಟೆ ವೇಳೆಗೆ ನೂರಾರು ಕರೆಗಳು ಬಂದು ರಾದ್ದಾಂತವೇ ಸೃಷ್ಟಿಯಾಯಿತು.</p>.<p><strong>ಯಾರೋ ಮಾಡಿದ ತಪ್ಪು: ‘</strong>ಕಾರ್ಯಕ್ರಮ ಪ್ರಸಾರ ಮಾಡುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧವಾದುದು ನಿಜ. ಆದರೆ ಇದು ನಮ್ಮ ಆಂತರಿಕ ಚಲಾವಣೆಗೆ ಮಾತ್ರ. ನಾವು ಸಿದ್ಧಪಡಿಸಿದ್ದು ಒಂದು ಕಾಲ್ಪನಿಕ ವೇಳಾಪಟ್ಟಿ ಮಾತ್ರವಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆಯಿಂದ ಮೊದಲಾಗಿ ಒಪ್ಪಿಗೆ ಪಡೆಯಬೇಕಿದ್ದು, ಬಳಿಕವಷ್ಟೇ ದೂರದರ್ಶನಕ್ಕೆ ತಿಳಿಸಬೇಕಿತ್ತು. ಈ ಯಾವುದೇ ಪ್ರಕಿಯೆ ಆಗಿಲ್ಲ. ಆದರೆ ಯಾರೋ ಈ ವೇಳಾಪಟ್ಟಿಯನ್ನು ಯೂಟ್ಯೂಬ್ಗೆ ಹಾಕಿಬಿಟ್ಟಿದ್ದಾರೆ. ಅದರಿಂದಾಗಿ ಇಷ್ಟೆಲ್ಲ ಗೊಂದಲ ಉಂಟಾಗಿದೆ. ಮುಂದೆ ಈ ತರಗತಿ ನಡೆಯಲಿಕ್ಕಿದೆ. ಆದರೆ ಅದಕ್ಕೆ ಮೊದಲಾಗಿ ಎಲ್ಲ ಒಪ್ಪಿಗೆ ಪಡೆದು, ಸಾರ್ವಜನಿಕವಾಗಿ ಪ್ರಕಟಣೆ ನೀಡಲಾಗುತ್ತದೆ’ ಎಂದು ಡಿಎಸ್ಇಆರ್ಟಿ ನಿರ್ದೇಶಕ ಎಂ.ಆರ್.ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>8–9ಕ್ಕೂ ತರಗತಿ</strong><br />ಡಿಎಸ್ಇಆರ್ಟಿ ವತಿಯಿಂದ ಕಳೆದ ಸಾಲಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ್ಮನನ ಕಾರ್ಯಕ್ರಮಗಳು ಚಂದನದ ಮೂಲಕ ಯಶಸ್ವಿಯಾಗಿ ನಡೆದಿದ್ದವು. ಕೊರೊನಾ ಲಾಕ್ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಕಳೆದ ವಾರ ಕೊನೆಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದರು. ಈ ವರ್ಷ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಅನಿಶ್ಚಿತತೆ ಇರುವುದರಿಂದ ಈ ವರ್ಷ ಎಸ್ಸೆಲ್ಸಿಸ್ಸಿ ಜತೆಗೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳೂ ಆನುಕೂಲ ಆಗುವ ರೀತಿಯಲ್ಲಿ ಪಾಠ ಮಾಡಲು ಇಲಖೆ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್ಇಆರ್ಟಿ) ವತಿಯಿಂದ ದೂರದರ್ಶನದ ಚಂದನ ವಾಹಿನಿಯಲ್ಲಿ ಸೋಮವಾರ ಬೆಳಿಗ್ಗೆಯಿಂದ ಪಾಠಗಳು ಪ್ರಸಾರವಾಗುತ್ತವೆ ಎಂದು ನಂಬಿ ಸಾವಿರಾರು ಮಂದಿ ಚಂದನದ ಮುಂದೆ ಕಾದು ಕುಳಿತು ಮೂರ್ಖರಾಗಿದ್ದಾರೆ.</p>.<p>ಸೋಮವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಗಣಿತ, 10ರಿಂದ ಇಂಗ್ಲಿಷ್, 10.30ರಿಂದ ವಿಜ್ಞಾನ.. ಹೀಗೆ ಸಂಜೆ 5 ಗಂಟೆಯವರೆಗೆ ವೇಳಾಪಟ್ಟಿ ಸಿದ್ಧವಾಗಿದ್ದು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ರಾಜ್ಯವ್ಯಾಪಿ ಶಾಲೆಗಳಿಗೆ ತಲುಪಿ, ಪೋಷಕರನ್ನೂ ತಲುಪಿತ್ತು.</p>.<p>ಹೀಗಾಗಿ ಸೋಮವಾರ ಬೆಳಿಗ್ಗೆಯಿಂದಲೇ ಪೋಷಕರು, ಮಕ್ಕಳು ದೂರದರ್ಶನದ ಮುಂದೆ ಪಾಠಗಳನ್ನು ಆಲಿಸಲು ಕಾದು ಕುಳಿತಿದ್ದರು.</p>.<p>ಸೋಮವಾರ ಬೆಳಿಗ್ಗೆ 9.30 ಕಳೆದರೂ ಪಾಠಗಳು ಶುರುವಾಗುವ ಲಕ್ಷಣ ಕಾಣಿಸಲಿಲ್ಲ. ಮತ್ತೆ ಅರ್ಧ ಗಂಟೆ ಕಾದರು. ಆಗಲೂ ಕಾರ್ಯಕ್ರಮ ಆರಂಭವಾಗಲಿಲ್ಲ. ಗಲಬಿಲಿಗೊಂಡ ಜನರು ದೂರದರ್ಶನ ಕಚೇರಿಗೇ ಕರೆ ಮಾಡಲಾರಂಭಿಸಿದರು. ಬೆಳಿಗ್ಗೆ 11 ಗಂಟೆ ವೇಳೆಗೆ ನೂರಾರು ಕರೆಗಳು ಬಂದು ರಾದ್ದಾಂತವೇ ಸೃಷ್ಟಿಯಾಯಿತು.</p>.<p><strong>ಯಾರೋ ಮಾಡಿದ ತಪ್ಪು: ‘</strong>ಕಾರ್ಯಕ್ರಮ ಪ್ರಸಾರ ಮಾಡುವ ನಿಟ್ಟಿನಲ್ಲಿ ವೇಳಾಪಟ್ಟಿ ಸಿದ್ಧವಾದುದು ನಿಜ. ಆದರೆ ಇದು ನಮ್ಮ ಆಂತರಿಕ ಚಲಾವಣೆಗೆ ಮಾತ್ರ. ನಾವು ಸಿದ್ಧಪಡಿಸಿದ್ದು ಒಂದು ಕಾಲ್ಪನಿಕ ವೇಳಾಪಟ್ಟಿ ಮಾತ್ರವಾಗಿತ್ತು. ಇದಕ್ಕೆ ಶಿಕ್ಷಣ ಇಲಾಖೆಯಿಂದ ಮೊದಲಾಗಿ ಒಪ್ಪಿಗೆ ಪಡೆಯಬೇಕಿದ್ದು, ಬಳಿಕವಷ್ಟೇ ದೂರದರ್ಶನಕ್ಕೆ ತಿಳಿಸಬೇಕಿತ್ತು. ಈ ಯಾವುದೇ ಪ್ರಕಿಯೆ ಆಗಿಲ್ಲ. ಆದರೆ ಯಾರೋ ಈ ವೇಳಾಪಟ್ಟಿಯನ್ನು ಯೂಟ್ಯೂಬ್ಗೆ ಹಾಕಿಬಿಟ್ಟಿದ್ದಾರೆ. ಅದರಿಂದಾಗಿ ಇಷ್ಟೆಲ್ಲ ಗೊಂದಲ ಉಂಟಾಗಿದೆ. ಮುಂದೆ ಈ ತರಗತಿ ನಡೆಯಲಿಕ್ಕಿದೆ. ಆದರೆ ಅದಕ್ಕೆ ಮೊದಲಾಗಿ ಎಲ್ಲ ಒಪ್ಪಿಗೆ ಪಡೆದು, ಸಾರ್ವಜನಿಕವಾಗಿ ಪ್ರಕಟಣೆ ನೀಡಲಾಗುತ್ತದೆ’ ಎಂದು ಡಿಎಸ್ಇಆರ್ಟಿ ನಿರ್ದೇಶಕ ಎಂ.ಆರ್.ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>8–9ಕ್ಕೂ ತರಗತಿ</strong><br />ಡಿಎಸ್ಇಆರ್ಟಿ ವತಿಯಿಂದ ಕಳೆದ ಸಾಲಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪುನರ್ಮನನ ಕಾರ್ಯಕ್ರಮಗಳು ಚಂದನದ ಮೂಲಕ ಯಶಸ್ವಿಯಾಗಿ ನಡೆದಿದ್ದವು. ಕೊರೊನಾ ಲಾಕ್ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು, ಕಳೆದ ವಾರ ಕೊನೆಗೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿದ್ದರು. ಈ ವರ್ಷ ಶಾಲೆ ಯಾವಾಗ ಆರಂಭವಾಗುತ್ತದೆ ಎಂಬ ಅನಿಶ್ಚಿತತೆ ಇರುವುದರಿಂದ ಈ ವರ್ಷ ಎಸ್ಸೆಲ್ಸಿಸ್ಸಿ ಜತೆಗೆ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳೂ ಆನುಕೂಲ ಆಗುವ ರೀತಿಯಲ್ಲಿ ಪಾಠ ಮಾಡಲು ಇಲಖೆ ಮುಂದಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>