<p><strong>ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ):</strong> ಜನವರಿ 7ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಏಕಕಾಲಕ್ಕೆ ಟೇಕ್ ಆಫ್ ಗೆ ಸಿದ್ಧವಾದ ಕಾರಣ</p>.<p>ಸಂಭವಿಸಬೇಕಿದ್ದ ಭಾರಿ ದರುಂತ ಸ್ವಲ್ಪದರಲ್ಲಿಯೇ ತಪ್ಪಿದೆ ಎಂದು ತಿಳಿದು ಬಂದಿದೆ.</p>.<p>ಅಂದು ಎರಡು ವಿಮಾನಗಳು ಏಕಕಾಲಕ್ಕೆ ಒಂದೇ ದಿಕ್ಕಿನಲ್ಲಿ ಮೇಲೆ ಹಾರಲು ಸಜ್ಜಾಗಿದ್ದವು. ಆದರೆ,<br />ತಾಂತ್ರಿಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.</p>.<p>ಇಂಡಿಗೋ ಸಂಸ್ಥೆಗೆ ಸೇರಿದ್ದ 6E455 ಮತ್ತು 6E246ಈ ಎರಡು ವಿಮಾನಗಳು ಒಂದೇ ರನ್ ವೇ ಗೆ ಬಂದು ಪರಸ್ಪರ ಡಿಕ್ಕಿಯಾಗಬೇಕಿತ್ತು. ಇದನ್ನು ಗಮನಿಸಿದ ರೇಡಾರ್ ಕಂಟ್ರೋಲ್ ಸಿಬ್ಬಂದಿ, ಒಂದು ವಿಮಾನವನ್ನು ಬಲಕ್ಕೆ ಮತ್ತೊಂದು ವಿಮಾನವನ್ನು ಎಡಕ್ಕೆ ಕಳುಹಿಸಿ ಅನಾಹುತ ತಪ್ಪಿಸಿದ್ದಾರೆ.</p>.<p>ಈ ಸಮಯದಲ್ಲಿ ಬೇರೆ ವಿಮಾನಗಳು ರನ್ ವೇ ಮೇಲೆ ಲ್ಯಾಂಡಿಂಗ್ ಆಗದ ಕಾರಣ ಹಾಗೂ ಸಿಬ್ಬಂದಿಯ ಎಚ್ಚರಿಕೆಯ ನಡೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ಘಟನೆಯ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ ಎಂಬ ಮಾಹಿತಿ ದೊರೆಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ):</strong> ಜನವರಿ 7ರಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋಲ್ಕತ್ತ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಏಕಕಾಲಕ್ಕೆ ಟೇಕ್ ಆಫ್ ಗೆ ಸಿದ್ಧವಾದ ಕಾರಣ</p>.<p>ಸಂಭವಿಸಬೇಕಿದ್ದ ಭಾರಿ ದರುಂತ ಸ್ವಲ್ಪದರಲ್ಲಿಯೇ ತಪ್ಪಿದೆ ಎಂದು ತಿಳಿದು ಬಂದಿದೆ.</p>.<p>ಅಂದು ಎರಡು ವಿಮಾನಗಳು ಏಕಕಾಲಕ್ಕೆ ಒಂದೇ ದಿಕ್ಕಿನಲ್ಲಿ ಮೇಲೆ ಹಾರಲು ಸಜ್ಜಾಗಿದ್ದವು. ಆದರೆ,<br />ತಾಂತ್ರಿಕ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದೆ.</p>.<p>ಇಂಡಿಗೋ ಸಂಸ್ಥೆಗೆ ಸೇರಿದ್ದ 6E455 ಮತ್ತು 6E246ಈ ಎರಡು ವಿಮಾನಗಳು ಒಂದೇ ರನ್ ವೇ ಗೆ ಬಂದು ಪರಸ್ಪರ ಡಿಕ್ಕಿಯಾಗಬೇಕಿತ್ತು. ಇದನ್ನು ಗಮನಿಸಿದ ರೇಡಾರ್ ಕಂಟ್ರೋಲ್ ಸಿಬ್ಬಂದಿ, ಒಂದು ವಿಮಾನವನ್ನು ಬಲಕ್ಕೆ ಮತ್ತೊಂದು ವಿಮಾನವನ್ನು ಎಡಕ್ಕೆ ಕಳುಹಿಸಿ ಅನಾಹುತ ತಪ್ಪಿಸಿದ್ದಾರೆ.</p>.<p>ಈ ಸಮಯದಲ್ಲಿ ಬೇರೆ ವಿಮಾನಗಳು ರನ್ ವೇ ಮೇಲೆ ಲ್ಯಾಂಡಿಂಗ್ ಆಗದ ಕಾರಣ ಹಾಗೂ ಸಿಬ್ಬಂದಿಯ ಎಚ್ಚರಿಕೆಯ ನಡೆಯಿಂದ ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ಘಟನೆಯ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟನೆ ಕೇಳಿದ್ದಾರೆ ಎಂಬ ಮಾಹಿತಿ ದೊರೆಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>