<p><strong>ಬೆಂಗಳೂರು</strong>: ಅತ್ಯಂತ ವಿಷಪೂರಿತ ಹಾವುಗಳ ವಿಷವನ್ನು ಶಮನಮಾಡುವ ಸಿಂಥೆಟಿಕ್ ಪ್ರತಿಕಾಯವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.</p><p>ನಾಗರಹಾವು, ಕಾಳಿಂಗ ಸರ್ಪ, ಕಟ್ಟು ಹಾವು (ಕ್ರೈಟ್) ಮತ್ತು ಬ್ಲಾಕ್ ಮಾಂಬದಂತಹ ಅತಿ ವಿಷಕಾರಿ ಹಾವುಗಳು ಮನುಷ್ಯನನ್ನು ಕಡಿದಾಗ ನರನಾಡಿಗಳಲ್ಲಿ ಅತಿ ಬೇಗನೆ ವಿಷ ಏರುತ್ತದೆ. <br>ಸಿಂಥೆಟಿಕ್ ಪ್ರತಿಕಾಯ ಆ ವಿಷವನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಕಟಣೆ ತಿಳಿಸಿದೆ.</p><p>ಐಐಎಸ್ಸಿಯ ಸೆಂಟರ್ ಫಾರ್ ಎಕಲಾಜಿಕಲ್ ಸೈನ್ಸಸ್ನಲ್ಲಿರುವ ಎವಲ್ಯೂಷನರಿ ವೆನೋಮಿಕ್ ಲ್ಯಾಬ್ ಮತ್ತು ಸ್ಕ್ರಿಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ನ ತಂಡ ಈ ಪ್ರತಿಕಾಯವನ್ನು<br>ಅಭಿವೃದ್ಧಿಪಡಿಸಿದೆ. ಕೋವಿಡ್–19 ಮತ್ತು ಎಚ್ಐವಿ ಪ್ರತಿಕಾಯಗಳನ್ನು ಪರೀಕ್ಷಿಸಲು ಬಳಸಲಾಗಿದ್ದ ವಿಧಾನಗಳನ್ನೇ ಇದಕ್ಕೂ ಅಳವಡಿಸಿಕೊಳ್ಳಲಾಗಿದೆ.</p><p>ಈ ಕುರಿತು ಮಾತನಾಡಿರುವ ಪಿಎಚ್ಡಿ ವಿದ್ಯಾರ್ಥಿ ಸೆನ್ಜಿ ಲಕ್ಷ್ಮಿ, ‘ಹಾವುಗಳ ಕಡಿತಕ್ಕೆ ಚಿಕಿತ್ಸೆಗಾಗಿ ಮೊದಲ ಬಾರಿಗೆ ಪ್ರತಿಕಾಯವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ಹಾವುಗಳ ಕಡಿತದಿಂದ ಭಾರತ<br>ಮತ್ತು ಸಬ್ ಸಹರನ್ ಆಫ್ರಿಕಾದಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಹಾವಿನ ವಿಷವನ್ನು ಕುದುರೆ, ಕುದುರೆ ಮರಿ, ಹೆಸರಗತ್ತೆಗಳ ದೇಹಕ್ಕೆ ಸೇರಿಸಿ, ಅವುಗಳ ರಕ್ತದಿಂದ ಪ್ರತಿಕಾಯ<br>ವನ್ನು ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.</p><p>ಸಹ ಪ್ರಾಧ್ಯಾಪಕ ಕಾರ್ತಿಕ್ ಸುಣಗಾರ್ ಅವರ ಪ್ರಕಾರ, ‘ಈ ಪ್ರಾಣಿಗಳು ತಮ್ಮ ಜೀವಿತಾವಧಿ<br>ಯಲ್ಲಿ ಸಾಕಷ್ಟು ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಗೆ ತೆರೆದುಕೊಳ್ಳುತ್ತವೆ. ಇದರಿಂದಾಗಿ ಪ್ರತಿವಿಷಗಳು ಸೂಕ್ಷ್ಮಾಣುಜೀವಿಗಳ ವಿರುದ್ಧ ಚಿಕಿತ್ಸೆಯ ಪ್ರತಿಕಾಯವನ್ನು ಹೊಂದಿರುತ್ತವೆ. ಒಂದು ವಯಲ್ನಷ್ಟು ಪ್ರತಿ ವಿಷದಲ್ಲಿ ಶೇ 10ಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಹಾವಿನ ವಿಷ ಶಮನ ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ’.</p><p>‘ಅಭಿವೃದ್ಧಿಪಡಿಸಿದ ಪ್ರತಿಕಾಯವನ್ನು ಪ್ರಾಣಿಗಳ ಮೇಲೆ ಪರೀಕ್ಷಿಸಲಾಯಿತು. ಮೊದಲಿಗೆ ತೈವಾನ್ನ ಪಟ್ಟೆ ಕಟ್ಟು ಹಾವಿನ ವಿಷ 3 ಎಫ್ಟಿಎಕ್ಸ್ ಜತೆ ಮಿಶ್ರಣ ಮಾಡಿ ಅದನ್ನು ಇಲಿಗಳ ದೇಹಕ್ಕೆ ಸೇರಿಸಲಾಯಿತು. 24 ಗಂಟೆಗಳ ಬಳಿಕವೂ ಈ ಇಲಿಗಳು ಬದುಕುಳಿದವು. ಕೇವಲ ವಿಷವನ್ನು ಸೇರಿಸಿದ್ದ ಇಲಿಗಳು ಕೆಲವೇ ಗಂಟೆಗಳಲ್ಲಿ ಸತ್ತು ಹೋದವು. ಇದೇ ರೀತಿಯಲ್ಲಿ ಬೇರೆ ಬೇರೆ ವಿಷಪೂರಿತ ಹಾವಿನ ವಿಷಗಳ ವಿರುದ್ಧವೂ ಪ್ರತಿಕಾಯವನ್ನು ಪರೀಕ್ಷಿಸಿ, ಉತ್ತಮ ಫಲಿತಾಂಶವೇ ಲಭಿಸಿದೆ’ ಎಂದಿದ್ದಾರೆ.</p><p>ಸಂಶೋಧಕರು ಪ್ರತಿಕಾಯವನ್ನು ಸೃಷ್ಟಿಸಲು ವಿಷವನ್ನು ಕುದುರೆಯಂತಹ ಪ್ರಾಣಿಗಳಿಗೆ ಚುಚ್ಚುವ ಬದಲಿಗೆ ಮನುಷ್ಯ ಶರೀರದಿಂದ ತೆಗೆಯಲಾದ ಜೀವಕೋಶ ಗಳನ್ನೇ ಬಳಸಲಾಗಿತ್ತು. ಪ್ರತಿಕಾಯವು ಸಂಪೂರ್ಣವಾಗಿ ಮನುಷ್ಯನ ಜೀವಕೋಶಗಳಿಂದಲೇ ಸೃಜನೆಯಾಗಿರುವುದರಿಂದ ಯಾವುದೇ ರೀತಿಯ ಅಲರ್ಜಿ ಉಂಟಾಗುವ ಸಾಧ್ಯತೆ ಇಲ್ಲ ಎಂದು ಸುಣಗಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಅತ್ಯಂತ ವಿಷಪೂರಿತ ಹಾವುಗಳ ವಿಷವನ್ನು ಶಮನಮಾಡುವ ಸಿಂಥೆಟಿಕ್ ಪ್ರತಿಕಾಯವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.</p><p>ನಾಗರಹಾವು, ಕಾಳಿಂಗ ಸರ್ಪ, ಕಟ್ಟು ಹಾವು (ಕ್ರೈಟ್) ಮತ್ತು ಬ್ಲಾಕ್ ಮಾಂಬದಂತಹ ಅತಿ ವಿಷಕಾರಿ ಹಾವುಗಳು ಮನುಷ್ಯನನ್ನು ಕಡಿದಾಗ ನರನಾಡಿಗಳಲ್ಲಿ ಅತಿ ಬೇಗನೆ ವಿಷ ಏರುತ್ತದೆ. <br>ಸಿಂಥೆಟಿಕ್ ಪ್ರತಿಕಾಯ ಆ ವಿಷವನ್ನು ಶಮನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಕಟಣೆ ತಿಳಿಸಿದೆ.</p><p>ಐಐಎಸ್ಸಿಯ ಸೆಂಟರ್ ಫಾರ್ ಎಕಲಾಜಿಕಲ್ ಸೈನ್ಸಸ್ನಲ್ಲಿರುವ ಎವಲ್ಯೂಷನರಿ ವೆನೋಮಿಕ್ ಲ್ಯಾಬ್ ಮತ್ತು ಸ್ಕ್ರಿಪ್ಸ್ ರೀಸರ್ಚ್ ಇನ್ಸ್ಟಿಟ್ಯೂಟ್ನ ತಂಡ ಈ ಪ್ರತಿಕಾಯವನ್ನು<br>ಅಭಿವೃದ್ಧಿಪಡಿಸಿದೆ. ಕೋವಿಡ್–19 ಮತ್ತು ಎಚ್ಐವಿ ಪ್ರತಿಕಾಯಗಳನ್ನು ಪರೀಕ್ಷಿಸಲು ಬಳಸಲಾಗಿದ್ದ ವಿಧಾನಗಳನ್ನೇ ಇದಕ್ಕೂ ಅಳವಡಿಸಿಕೊಳ್ಳಲಾಗಿದೆ.</p><p>ಈ ಕುರಿತು ಮಾತನಾಡಿರುವ ಪಿಎಚ್ಡಿ ವಿದ್ಯಾರ್ಥಿ ಸೆನ್ಜಿ ಲಕ್ಷ್ಮಿ, ‘ಹಾವುಗಳ ಕಡಿತಕ್ಕೆ ಚಿಕಿತ್ಸೆಗಾಗಿ ಮೊದಲ ಬಾರಿಗೆ ಪ್ರತಿಕಾಯವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರತಿ ವರ್ಷ ಹಾವುಗಳ ಕಡಿತದಿಂದ ಭಾರತ<br>ಮತ್ತು ಸಬ್ ಸಹರನ್ ಆಫ್ರಿಕಾದಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಹಾವಿನ ವಿಷವನ್ನು ಕುದುರೆ, ಕುದುರೆ ಮರಿ, ಹೆಸರಗತ್ತೆಗಳ ದೇಹಕ್ಕೆ ಸೇರಿಸಿ, ಅವುಗಳ ರಕ್ತದಿಂದ ಪ್ರತಿಕಾಯ<br>ವನ್ನು ಸಂಗ್ರಹಿಸಲಾಗುತ್ತದೆ’ ಎಂದು ಹೇಳಿದ್ದಾರೆ.</p><p>ಸಹ ಪ್ರಾಧ್ಯಾಪಕ ಕಾರ್ತಿಕ್ ಸುಣಗಾರ್ ಅವರ ಪ್ರಕಾರ, ‘ಈ ಪ್ರಾಣಿಗಳು ತಮ್ಮ ಜೀವಿತಾವಧಿ<br>ಯಲ್ಲಿ ಸಾಕಷ್ಟು ಬಗೆಯ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಗೆ ತೆರೆದುಕೊಳ್ಳುತ್ತವೆ. ಇದರಿಂದಾಗಿ ಪ್ರತಿವಿಷಗಳು ಸೂಕ್ಷ್ಮಾಣುಜೀವಿಗಳ ವಿರುದ್ಧ ಚಿಕಿತ್ಸೆಯ ಪ್ರತಿಕಾಯವನ್ನು ಹೊಂದಿರುತ್ತವೆ. ಒಂದು ವಯಲ್ನಷ್ಟು ಪ್ರತಿ ವಿಷದಲ್ಲಿ ಶೇ 10ಕ್ಕಿಂತಲೂ ಕಡಿಮೆ ಪ್ರಮಾಣದಷ್ಟು ಹಾವಿನ ವಿಷ ಶಮನ ಪ್ರತಿಕಾಯಗಳನ್ನು ಒಳಗೊಂಡಿರುತ್ತದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ’.</p><p>‘ಅಭಿವೃದ್ಧಿಪಡಿಸಿದ ಪ್ರತಿಕಾಯವನ್ನು ಪ್ರಾಣಿಗಳ ಮೇಲೆ ಪರೀಕ್ಷಿಸಲಾಯಿತು. ಮೊದಲಿಗೆ ತೈವಾನ್ನ ಪಟ್ಟೆ ಕಟ್ಟು ಹಾವಿನ ವಿಷ 3 ಎಫ್ಟಿಎಕ್ಸ್ ಜತೆ ಮಿಶ್ರಣ ಮಾಡಿ ಅದನ್ನು ಇಲಿಗಳ ದೇಹಕ್ಕೆ ಸೇರಿಸಲಾಯಿತು. 24 ಗಂಟೆಗಳ ಬಳಿಕವೂ ಈ ಇಲಿಗಳು ಬದುಕುಳಿದವು. ಕೇವಲ ವಿಷವನ್ನು ಸೇರಿಸಿದ್ದ ಇಲಿಗಳು ಕೆಲವೇ ಗಂಟೆಗಳಲ್ಲಿ ಸತ್ತು ಹೋದವು. ಇದೇ ರೀತಿಯಲ್ಲಿ ಬೇರೆ ಬೇರೆ ವಿಷಪೂರಿತ ಹಾವಿನ ವಿಷಗಳ ವಿರುದ್ಧವೂ ಪ್ರತಿಕಾಯವನ್ನು ಪರೀಕ್ಷಿಸಿ, ಉತ್ತಮ ಫಲಿತಾಂಶವೇ ಲಭಿಸಿದೆ’ ಎಂದಿದ್ದಾರೆ.</p><p>ಸಂಶೋಧಕರು ಪ್ರತಿಕಾಯವನ್ನು ಸೃಷ್ಟಿಸಲು ವಿಷವನ್ನು ಕುದುರೆಯಂತಹ ಪ್ರಾಣಿಗಳಿಗೆ ಚುಚ್ಚುವ ಬದಲಿಗೆ ಮನುಷ್ಯ ಶರೀರದಿಂದ ತೆಗೆಯಲಾದ ಜೀವಕೋಶ ಗಳನ್ನೇ ಬಳಸಲಾಗಿತ್ತು. ಪ್ರತಿಕಾಯವು ಸಂಪೂರ್ಣವಾಗಿ ಮನುಷ್ಯನ ಜೀವಕೋಶಗಳಿಂದಲೇ ಸೃಜನೆಯಾಗಿರುವುದರಿಂದ ಯಾವುದೇ ರೀತಿಯ ಅಲರ್ಜಿ ಉಂಟಾಗುವ ಸಾಧ್ಯತೆ ಇಲ್ಲ ಎಂದು ಸುಣಗಾರ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>