<p><strong>ಕುಶಾಲನಗರ:</strong> ಸೋಮವಾರಪೇಟೆ ತಾಲ್ಲೂಕಿನ ಮದಲಾಪುರ ಬಳಿಯ ಬ್ಯಾಡಗೊಟ್ಟ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 20 ತಿಂಗಳಲ್ಲಿ 18 ಮಂದಿ ಮೃತಪಟ್ಟಿರುವುದು ನಿರಾಶ್ರಿತರಲ್ಲಿ ಆತಂಕಕ್ಕೆ ಕಾರಣವಾಗಿದೆ. </p>.<p>ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ 2017ರಲ್ಲಿ ವಸತಿ ಸೌಲಭ್ಯಕ್ಕಾಗಿ ಗಿರಿಜನರು ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.</p>.<p>ಬಳಿಕ ಗಿರಿಜನರ ಮನವೊಲಿಸಿದ್ದ ಜಿಲ್ಲಾಡಳಿತ ಬಸವನಹಳ್ಳಿ– ಬ್ಯಾಡಗೊಟ್ಟದಲ್ಲಿ ಪುನರ್ವಸತಿಗೆ ಜಾಗ ನೀಡಿತ್ತು. ಬಸವನಹಳ್ಳಿ<br />ಯಲ್ಲಿ 500, ಬ್ಯಾಡಗೊಟ್ಟದಲ್ಲಿ 1,500 ಮಂದಿ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದಾರೆ. ಇದೇ ಸ್ಥಳದಲ್ಲಿ ಮನೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.</p>.<p>ಕಾಡು ಬಿಟ್ಟು ಊರು ಸೇರಿರುವ ಗಿರಿಜನರು, ಅಕ್ಕಪಕ್ಕದ ತೋಟ ಹಾಗೂ ಕುಶಾಲನಗರದ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದಾರೆ. ಆದರೆ, ಈ ಕೇಂದ್ರದಲ್ಲಿ ಪ್ರತಿ ತಿಂಗಳು ಒಂದೊಂದು ಸಾವು ಸಂಭವಿಸುತ್ತಿರುವುದು ನಿರಾಶ್ರಿತ ಸಮುದಾಯವೇ ಆತಂಕ<br />ಪಡುವಂತೆ ಮಾಡಿದೆ.</p>.<p>ಸ್ವಚ್ಛತೆ– ಆರೋಗ್ಯದ ಮೇಲಿನ ಕಾಳಜಿ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂಬ ಹೇಳುತ್ತಿದ್ದರೂ ಅಡವಿ ದೇವಿ ಆರಾಧಿಸುವ ಗಿರಿಜನರು ಮಾತ್ರ ಇದು ದೇವರ ಶಾಪವೆಂದು ನಂಬಿದ್ದಾರೆ.</p>.<p>ಗಿರಿಜನರು ಬ್ಯಾಡಗೊಟ್ಟಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ, ಚರಂಡಿ ಕಾಮಗಾರಿಗಳು ಅಪೂರ್ಣವಾಗಿವೆ. ಹೊಸ ಮನೆ ಸೇರುವ ಕನಸಿನಲ್ಲಿರುವ ನಿರಾಶ್ರಿತರು ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ.</p>.<p><strong>ಮೂಲ ಸ್ಥಳದತ್ತ ಗಿರಿಜನರು</strong></p>.<p>ಯಡವನಾಡು ತೋಟದಲ್ಲಿ ಮರದಿಂದ ಬಿದ್ದುಚೋಮ ಎಂಬುವರು ಮೊದಲು ಮೃತಪಟ್ಟಿದ್ದರು. ಈ ಘಟನೆ ಬಳಿಕ ಸರಣಿ ಸಾವುಗಳು ಸಂಭವಿಸಿವೆ.ಕೆಲವರು ಶಿಬಿರದ ಟೆಂಟ್ಗಳಲ್ಲಿ, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ. ಈಗ ಆತಂಕ ಹೆಚ್ಚಾಗಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆಯೇ ಮೂಲ ಸ್ಥಳಗಳಾದ ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಕ್ಕೆ ಗಿರಿಜನರು ತೆರಳಿದ್ದಾರೆ. ಹೀಗಾಗಿ, ಪುನರ್ವಸತಿ ಸ್ಥಳದಲ್ಲಿ 354 ಕುಟುಂಬಗಳು ಮಾತ್ರ ನೆಲೆಸಿವೆ.</p>.<p>*ಮುನೇಶ್ವರ ದೇಗುಲ ಎದುರು ಶವ ಸಂಸ್ಕಾರ ಮಾಡಿದ್ದರ ಪರಿಣಾಮ ಇಂಥ ದುರ್ಘಟನೆಗಳು ನಡೆಯುತ್ತಿವೆ. ದೇವರಿಗೆ ಕಪ್ಪು ಕಾಣಿಕೆ ಅರ್ಪಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ.<br />-ಮಲ್ಲಪ್ಪ, ಗಿರಿಜನ ಮುಖಂಡ, ಬ್ಯಾಡಗೊಟ್ಟ</p>.<p>* ಶಿಬಿರದಲ್ಲಿ ಸ್ವಚ್ಛತೆ, ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ನಿರಂತರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೌಢ್ಯದಿಂದ ಹೊರತರುವ ಕೆಲಸ ಮಾಡುತ್ತೇವೆ.</p>.<p>-ಎಚ್.ಕೆ.ಶಾಂತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಸೋಮವಾರಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ಸೋಮವಾರಪೇಟೆ ತಾಲ್ಲೂಕಿನ ಮದಲಾಪುರ ಬಳಿಯ ಬ್ಯಾಡಗೊಟ್ಟ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ 20 ತಿಂಗಳಲ್ಲಿ 18 ಮಂದಿ ಮೃತಪಟ್ಟಿರುವುದು ನಿರಾಶ್ರಿತರಲ್ಲಿ ಆತಂಕಕ್ಕೆ ಕಾರಣವಾಗಿದೆ. </p>.<p>ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ದೇವಮಚ್ಚಿ ಮೀಸಲು ಅರಣ್ಯ ಪ್ರದೇಶದಲ್ಲಿ 2017ರಲ್ಲಿ ವಸತಿ ಸೌಲಭ್ಯಕ್ಕಾಗಿ ಗಿರಿಜನರು ನಿರಂತರ ಪ್ರತಿಭಟನೆ ನಡೆಸಿದ್ದರು. ಈ ಹೋರಾಟ ರಾಜ್ಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.</p>.<p>ಬಳಿಕ ಗಿರಿಜನರ ಮನವೊಲಿಸಿದ್ದ ಜಿಲ್ಲಾಡಳಿತ ಬಸವನಹಳ್ಳಿ– ಬ್ಯಾಡಗೊಟ್ಟದಲ್ಲಿ ಪುನರ್ವಸತಿಗೆ ಜಾಗ ನೀಡಿತ್ತು. ಬಸವನಹಳ್ಳಿ<br />ಯಲ್ಲಿ 500, ಬ್ಯಾಡಗೊಟ್ಟದಲ್ಲಿ 1,500 ಮಂದಿ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದಾರೆ. ಇದೇ ಸ್ಥಳದಲ್ಲಿ ಮನೆ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.</p>.<p>ಕಾಡು ಬಿಟ್ಟು ಊರು ಸೇರಿರುವ ಗಿರಿಜನರು, ಅಕ್ಕಪಕ್ಕದ ತೋಟ ಹಾಗೂ ಕುಶಾಲನಗರದ ಅಂಗಡಿಗಳಲ್ಲಿ ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದಾರೆ. ಆದರೆ, ಈ ಕೇಂದ್ರದಲ್ಲಿ ಪ್ರತಿ ತಿಂಗಳು ಒಂದೊಂದು ಸಾವು ಸಂಭವಿಸುತ್ತಿರುವುದು ನಿರಾಶ್ರಿತ ಸಮುದಾಯವೇ ಆತಂಕ<br />ಪಡುವಂತೆ ಮಾಡಿದೆ.</p>.<p>ಸ್ವಚ್ಛತೆ– ಆರೋಗ್ಯದ ಮೇಲಿನ ಕಾಳಜಿ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂಬ ಹೇಳುತ್ತಿದ್ದರೂ ಅಡವಿ ದೇವಿ ಆರಾಧಿಸುವ ಗಿರಿಜನರು ಮಾತ್ರ ಇದು ದೇವರ ಶಾಪವೆಂದು ನಂಬಿದ್ದಾರೆ.</p>.<p>ಗಿರಿಜನರು ಬ್ಯಾಡಗೊಟ್ಟಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಮನೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆ, ಚರಂಡಿ ಕಾಮಗಾರಿಗಳು ಅಪೂರ್ಣವಾಗಿವೆ. ಹೊಸ ಮನೆ ಸೇರುವ ಕನಸಿನಲ್ಲಿರುವ ನಿರಾಶ್ರಿತರು ಸರಣಿ ಸಾವಿನಿಂದ ಕಂಗಾಲಾಗಿದ್ದಾರೆ.</p>.<p><strong>ಮೂಲ ಸ್ಥಳದತ್ತ ಗಿರಿಜನರು</strong></p>.<p>ಯಡವನಾಡು ತೋಟದಲ್ಲಿ ಮರದಿಂದ ಬಿದ್ದುಚೋಮ ಎಂಬುವರು ಮೊದಲು ಮೃತಪಟ್ಟಿದ್ದರು. ಈ ಘಟನೆ ಬಳಿಕ ಸರಣಿ ಸಾವುಗಳು ಸಂಭವಿಸಿವೆ.ಕೆಲವರು ಶಿಬಿರದ ಟೆಂಟ್ಗಳಲ್ಲಿ, ಮತ್ತೆ ಕೆಲವರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಾರೆ. ಈಗ ಆತಂಕ ಹೆಚ್ಚಾಗಿದೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಂತೆಯೇ ಮೂಲ ಸ್ಥಳಗಳಾದ ತಿತಿಮತಿ, ಪಾಲಿಬೆಟ್ಟ, ಗೋಣಿಕೊಪ್ಪಕ್ಕೆ ಗಿರಿಜನರು ತೆರಳಿದ್ದಾರೆ. ಹೀಗಾಗಿ, ಪುನರ್ವಸತಿ ಸ್ಥಳದಲ್ಲಿ 354 ಕುಟುಂಬಗಳು ಮಾತ್ರ ನೆಲೆಸಿವೆ.</p>.<p>*ಮುನೇಶ್ವರ ದೇಗುಲ ಎದುರು ಶವ ಸಂಸ್ಕಾರ ಮಾಡಿದ್ದರ ಪರಿಣಾಮ ಇಂಥ ದುರ್ಘಟನೆಗಳು ನಡೆಯುತ್ತಿವೆ. ದೇವರಿಗೆ ಕಪ್ಪು ಕಾಣಿಕೆ ಅರ್ಪಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿದೆ.<br />-ಮಲ್ಲಪ್ಪ, ಗಿರಿಜನ ಮುಖಂಡ, ಬ್ಯಾಡಗೊಟ್ಟ</p>.<p>* ಶಿಬಿರದಲ್ಲಿ ಸ್ವಚ್ಛತೆ, ಆರೋಗ್ಯ ಜಾಗೃತಿ ಮೂಡಿಸಲಾಗುತ್ತಿದೆ. ನಿರಂತರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಮೌಢ್ಯದಿಂದ ಹೊರತರುವ ಕೆಲಸ ಮಾಡುತ್ತೇವೆ.</p>.<p>-ಎಚ್.ಕೆ.ಶಾಂತಿ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ, ಸೋಮವಾರಪೇಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>