ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಬಸವರಾಜ ರಾಯರಡ್ಡಿ, ‘ಪತ್ರಿಕಾಗೋಷ್ಠಿ ನಡೆಸದಂತೆ ದುಷ್ಕರ್ಮಿಗಳು ಬಂದು ತಡೆವೊಡ್ಡಲು ಪ್ರಯತ್ನಿಸಿದ್ದಾರೆ. ಹಣ, ತೋಳ್ಬಲ ಹೊಂದಿರುವ ಆನಂದ್ ಸಿಂಗ್ ಅವರು ಈ ರೀತಿ ಮಾಡಿಸಿದ್ದಾರೆ. ಇದೇ ರೀತಿ ಚುನಾವಣೆ ಮಾಡಿ ಗೆಲ್ಲಬೇಕು ಅಂದುಕೊಂಡಿದ್ದಾರೆ. ಆದರೆ, ಜನ ಅವರನ್ನು ತಿರಸ್ಕರಿಸುವುದು ಖಚಿತ’ ಎಂದು ಹೇಳಿದರು.