‘ಒಂದು ವಾರ ಶಿವ ಪಂಚಾಕ್ಷರಿ ಪಠಣ’
ಮಂಗಳೂರು: ‘ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರಗಳಿಗೆ ಸೋಲುಂಟಾಗಲಿ. ಅಪಪ್ರಚಾರ ನಿಲ್ಲಲಿ, ಕ್ಷೇತ್ರದಲ್ಲಿ ಶ್ರದ್ದೆ ಭಕ್ತಿ ಬೆಳಗಿ ಶಾಂತಿ ನೆಲಸಲಿ‘ ಎಂಬ ಸಂಕಲ್ಪ ದೊಂದಿಗೆ ಇದೇ 18ರಿಂದ ಒಂದು ವಾರ ರಾಜ್ಯದಾದ್ಯಂತ ಸಾಮೂಹಿಕ ಶಿವ ಪಂಚಾಕ್ಷರಿ ( ಓಂ ನಮಃ ಶಿವಾಯ) ಜಪ ಅನುಷ್ಠಾನ ಮಾಡುವಂತೆ ವಿಶ್ವ ಹಿಂದೂ ಪರಿಷದ್ ಹೇಳಿದೆ. ‘ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಇದೇ 18ರಂದು ಬೆಳಿಗ್ಗೆ 9ಕ್ಕೆ ಶಿವ ಪಂಚಾಕ್ಷರಿ ಜಪ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಹಿಂದೂಗಳು ತಮ್ಮ ಮನೆಗಳಲ್ಲಿ ಮಾಡಬೇಕು’ ಎಂದು ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ ಕೋರಿದ್ದಾರೆ.