ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT
ADVERTISEMENT

Dharmasthala Case | ಬಿಜೆಪಿಯಿಂದ ರಾಜಕೀಯಕ್ಕೆ ಧರ್ಮಸ್ಥಳ ಬಳಕೆ: ಡಿಕೆಶಿ

Published : 16 ಆಗಸ್ಟ್ 2025, 15:30 IST
Last Updated : 16 ಆಗಸ್ಟ್ 2025, 15:30 IST
ಫಾಲೋ ಮಾಡಿ
Comments
ಧರ್ಮಸ್ಥಳದ ವಿಚಾರದಲ್ಲಿ ಒಬ್ಬ ವ್ಯಕ್ತಿ ಕುಮ್ಮಕ್ಕು ನೀಡುತ್ತಿದ್ದಾನೆ. ಆತ ಮುಖ್ಯಮಂತ್ರಿ ಅವರನ್ನೇ ಕೊಲೆಗಾರ ಎಂದಿದ್ದಾನೆ. ನಮಗೆ ಮಾಹಿತಿ ಇದೆ.
ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿದ್ದು, ಎಸ್‌ಐಟಿ ವರದಿ ನೀಡುವವರೆಗೂ ಏನೂ ಹೇಳುವುದಿಲ್ಲ. ಬಳಿಕ ಮುಖ್ಯಮಂತ್ರಿ ಜತೆ ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು
ಜಿ.ಪರಮೇಶ್ವರ, ಗೃಹ ಸಚಿವ
‘ಒಂದು ವಾರ ಶಿವ ಪಂಚಾಕ್ಷರಿ ಪಠಣ’
ಮಂಗಳೂರು: ‘ಧರ್ಮಸ್ಥಳ ಕ್ಷೇತ್ರದ ವಿರುದ್ಧದ ಷಡ್ಯಂತ್ರಗಳಿಗೆ ಸೋಲುಂಟಾಗಲಿ. ಅಪಪ್ರಚಾರ ನಿಲ್ಲಲಿ, ಕ್ಷೇತ್ರದಲ್ಲಿ ಶ್ರದ್ದೆ ಭಕ್ತಿ ಬೆಳಗಿ ಶಾಂತಿ ನೆಲಸಲಿ‘ ಎಂಬ ಸಂಕಲ್ಪ ದೊಂದಿಗೆ ಇದೇ 18ರಿಂದ ಒಂದು ವಾರ ರಾಜ್ಯದಾದ್ಯಂತ ಸಾಮೂಹಿಕ ಶಿವ ಪಂಚಾಕ್ಷರಿ ( ಓಂ ನಮಃ ಶಿವಾಯ) ಜಪ ಅನುಷ್ಠಾನ ಮಾಡುವಂತೆ ವಿಶ್ವ ಹಿಂದೂ ಪರಿಷದ್ ಹೇಳಿದೆ. ‘ಮಂಗಳೂರಿನ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ಇದೇ 18ರಂದು ಬೆಳಿಗ್ಗೆ 9ಕ್ಕೆ ಶಿವ ಪಂಚಾಕ್ಷರಿ ಜಪ ಅನುಷ್ಠಾನ ಪ್ರಾರಂಭಗೊಳ್ಳಲಿದೆ. ಹಿಂದೂಗಳು ತಮ್ಮ ಮನೆಗಳಲ್ಲಿ ಮಾಡಬೇಕು’ ಎಂದು ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ ಪುರುಷೋತ್ತಮ, ಕಾರ್ಯದರ್ಶಿ ರವಿ ಅಸೈಗೋಳಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT