ಪ್ರತಿಯೊಬ್ಬ ಸದಸ್ಯರೂ ತಮ್ಮ ಜವಾಬ್ದಾರಿ ಅರ್ಥ ಮಾಡಿಕೊಂಡು ಮಾತನಾಡಬೇಕು. ಶಿಸ್ತಿಗೆ ಆದ್ಯತೆ ನೀಡಬೇಕು. ವಿಷಯಕ್ಕೆ ಸೀಮಿತವಾಗಿ ಚರ್ಚೆ ಮಾಡಬೇಕು. ಮಾತನಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು
ಯು.ಟಿ. ಖಾದರ್, ವಿಧಾನಸಭಾಧ್ಯಕ್ಷ
ನಮ್ಮ ಮಾತು, ನಡೆ ಬಹಳ ಮುಖ್ಯ. ವಿರೋಧ ಪಕ್ಷಗಳ ಸದಸ್ಯರು ರಚನಾತ್ಮಕ ಟೀಕೆ ಮಾಡಬೇಕು. ತಪ್ಪು ಪದ ಬಳಕೆ ಬೇಡ. ಇಲ್ಲಿ ಯಾರೂ ಬೃಹಸ್ಪತಿಗಳಲ್ಲ. ಮಾತನಾಡುವಾಗ ಇನ್ನೊಬ್ಬರಿಗೆ ನೋವು ಆಗದಂತೆ ಮಾತನಾಡಬೇಕು
ಸಿದ್ದರಾಮಯ್ಯ, ಮುಖ್ಯಮಂತ್ರಿ
ನನಗೂ ಬಿಸಿ ರಕ್ತ ಇದೆ. ಆ ಬಿಸಿ ರಕ್ತ ಎಲ್ಲಿ ಬಳಸಬೇಕೊ ಅಲ್ಲಿ ಬಳಸುತ್ತೇನೆ. ಸ್ವಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯಾದಾಗ ನೋವಾಗುತ್ತದೆ. ಜಾರ್ಜ್ ಹಿರಿಯರು, ಅವರಿಗೆ ಅಸಮರ್ಥ ಅಂದಿದ್ದು ಸರಿಯಲ್ಲ. ಜಾರ್ಜ್ಗೆ ಅವಮಾನವಾದರೆ ನಾನು ಸಹಿಸಲ್ಲ
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಸದಸ್ಯರು ವೈಯಕ್ತಿಕವಾಗಿ ಟೀಕೆ ಮಾಡದಿದ್ದರೆ ಒಳ್ಳೆಯದು. ಟೀಕೆ ಮಾಡಲೆಂದೇ ಇರುವವರು ನಾವು. ಆದರೆ, ಆಡಳಿತ ಪಕ್ಷದವರು ಸಂಯಮದಿಂದ ಇರಬೇಕು. ಶಿವಕುಮಾರ್ ಅವರು ಸಂಯಮ ಕಳೆದುಕೊಂಡು ಮಾತನಾಡಿದ್ದಾರೆ