ಭೀಕರ ಬರದಲ್ಲೂ ನಾಲ್ಕು ಎಕರೆಯಲ್ಲಿನ ದ್ರಾಕ್ಷಿ ಬೆಳೆಯನ್ನು ಉಳಿಸಿಕೊಳ್ಳುವ ಸಲುವಾಗಿ, ನೀರಿಗಾಗಿಯೇ ₹18 ಲಕ್ಷ ಖರ್ಚು ಮಾಡಿದ್ದು ವ್ಯರ್ಥವಾಯಿತು ಎಂದು ಅಲವತ್ತುಕೊಂಡ ತಿಕೋಟಾ ತಾಲ್ಲೂಕಿನ ಕಳ್ಳವಟಗಿಯ ಅಣ್ಣಾರಾಯ ಗದ್ಯಾಳ, ‘ಔಷಧಿ, ಗೊಬ್ಬರ, ಕೂಲಿಯಾಳು, ಚಾಟ್ನಿ ಸೇರಿದಂತೆ ಒಟ್ಟು ₹ 25 ಲಕ್ಷ ಖರ್ಚಾಗಿತ್ತು. ಇನ್ನೇನ್ ಬೆಳಿ ಕೈಗೆ ಸಿಗೋದ್ರಾಗನ, ಮಳಿ ಬಂದು ಎಲ್ಲಾ ಹಾಳ್ ಮಾಡಿಬಿಡ್ತು’ ಎಂದು ಗದ್ಗದಿತರಾದರು.