<p><strong>ಬೆಂಗಳೂರು:</strong> ಗೃಹಬಳಕೆಯ ವಿದ್ಯುತ್ಗೆ 200 ಯುನಿಟ್ವರೆಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರು ತಮ್ಮ ಅರ್ಜಿಯ ಸ್ಥಿತಿಗತಿ ಪರಿಶೀಲನೆಗಾಗಿ ಅಂತರ್ಜಾಲ ಕೊಂಡಿಯನ್ನು ಇಂಧನ ಇಲಾಖೆ ಬಿಡುಗಡೆ ಮಾಡಿದೆ.</p><p>ಜೂನ್ 18ರಂದು ನೋಂದಣಿ ಪ್ರಕ್ರಿಯೆ ಆರಂಭಗೊಂಡಿತು. ಬೆಸ್ಕಾಂ, ಸೆಸ್ಕ್, ಜೆಸ್ಕಾಂ, ಹೆಸ್ಕಾಂ, ಎಚ್ಆರ್ಇಸಿಎಸ್ ಹಾಗೂ ಮೆಸ್ಕಾಂಗಳನ್ನು ಒಳಗೊಂಡು ಈವರೆಗೂ ಒಂದು ಕೋಟಿಗೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.</p><p>ಹೀಗೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ <a href="https://sevasindhu.karnataka.gov.in/StatucTrack/Track_Status">https://sevasindhu.karnataka.gov.in/StatucTrack/Track_Status</a> ಮೂಲಕ ಪರಿಶೀಲಿಸಿಕೊಳ್ಳಬಹುದು. </p> .<p>ಇದರಲ್ಲಿ ಅರ್ಜಿದಾರರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಮ್ಮ ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆಯನ್ನು ನಮೂದಿಸಬೇಕು. </p><p>ಅರ್ಜಿ ಸ್ವೀಕೃತವಾಗಿದ್ದರೆ, ‘ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರಗೊಂಡಿದ್ದು, ಅದನ್ನು ಎಸ್ಕಾಂಗೆ ಕಳುಹಿಸಲಾಗಿದೆ’ ಎಂಬ ಸಂದೇಶ ಸಿಗಲಿದೆ.</p>.<p>ಹೀಗಿದ್ದರೂ ಕೆಲವೊಂದು ಗೊಂದಲಗಳು ಇದರಲ್ಲಿ ಹಾಗೇ ಉಳಿದಿವೆ. ಕೆಲವು ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ ದಾಖಲೆಗಳನ್ನು ನಮೂದಿಸಿ ನೋಂದಾಯಿಸಿಕೊಂಡಿದ್ದರೂ, ‘ಮಾಹಿತಿ ಲಭ್ಯವಿಲ್ಲ. ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ’ ಎಂಬ ಸಲಹೆ ನೀಡುತ್ತದೆ. </p>.<p>ಹಾಗೆಂದು ನೋಂದಾಯಿಸಲು ಮುಂದಾದರೆ, ‘ಈ ಆಧಾರ್ ಸಂಖ್ಯೆ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದೆ’ ಎಂಬ ಸಂದೇಶ ಬರುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಗೃಹಬಳಕೆಯ ವಿದ್ಯುತ್ಗೆ 200 ಯುನಿಟ್ವರೆಗೆ ಉಚಿತವಾಗಿ ನೀಡುವ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡವರು ತಮ್ಮ ಅರ್ಜಿಯ ಸ್ಥಿತಿಗತಿ ಪರಿಶೀಲನೆಗಾಗಿ ಅಂತರ್ಜಾಲ ಕೊಂಡಿಯನ್ನು ಇಂಧನ ಇಲಾಖೆ ಬಿಡುಗಡೆ ಮಾಡಿದೆ.</p><p>ಜೂನ್ 18ರಂದು ನೋಂದಣಿ ಪ್ರಕ್ರಿಯೆ ಆರಂಭಗೊಂಡಿತು. ಬೆಸ್ಕಾಂ, ಸೆಸ್ಕ್, ಜೆಸ್ಕಾಂ, ಹೆಸ್ಕಾಂ, ಎಚ್ಆರ್ಇಸಿಎಸ್ ಹಾಗೂ ಮೆಸ್ಕಾಂಗಳನ್ನು ಒಳಗೊಂಡು ಈವರೆಗೂ ಒಂದು ಕೋಟಿಗೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.</p><p>ಹೀಗೆ ನೋಂದಾಯಿಸಿಕೊಂಡ ಗ್ರಾಹಕರು ತಮ್ಮ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ <a href="https://sevasindhu.karnataka.gov.in/StatucTrack/Track_Status">https://sevasindhu.karnataka.gov.in/StatucTrack/Track_Status</a> ಮೂಲಕ ಪರಿಶೀಲಿಸಿಕೊಳ್ಳಬಹುದು. </p> .<p>ಇದರಲ್ಲಿ ಅರ್ಜಿದಾರರು ತಮ್ಮ ವ್ಯಾಪ್ತಿಯ ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಮ್ಮ ವಿದ್ಯುತ್ ಬಿಲ್ನಲ್ಲಿರುವ ಖಾತೆ ಸಂಖ್ಯೆಯನ್ನು ನಮೂದಿಸಬೇಕು. </p><p>ಅರ್ಜಿ ಸ್ವೀಕೃತವಾಗಿದ್ದರೆ, ‘ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರಗೊಂಡಿದ್ದು, ಅದನ್ನು ಎಸ್ಕಾಂಗೆ ಕಳುಹಿಸಲಾಗಿದೆ’ ಎಂಬ ಸಂದೇಶ ಸಿಗಲಿದೆ.</p>.<p>ಹೀಗಿದ್ದರೂ ಕೆಲವೊಂದು ಗೊಂದಲಗಳು ಇದರಲ್ಲಿ ಹಾಗೇ ಉಳಿದಿವೆ. ಕೆಲವು ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್ ದಾಖಲೆಗಳನ್ನು ನಮೂದಿಸಿ ನೋಂದಾಯಿಸಿಕೊಂಡಿದ್ದರೂ, ‘ಮಾಹಿತಿ ಲಭ್ಯವಿಲ್ಲ. ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳಿ’ ಎಂಬ ಸಲಹೆ ನೀಡುತ್ತದೆ. </p>.<p>ಹಾಗೆಂದು ನೋಂದಾಯಿಸಲು ಮುಂದಾದರೆ, ‘ಈ ಆಧಾರ್ ಸಂಖ್ಯೆ ಈಗಾಗಲೇ ಗೃಹ ಜ್ಯೋತಿ ಯೋಜನೆಯಡಿ ನೋಂದಣಿಯಾಗಿದೆ’ ಎಂಬ ಸಂದೇಶ ಬರುತ್ತಿರುವುದು ಗ್ರಾಹಕರನ್ನು ಗೊಂದಲಕ್ಕೀಡು ಮಾಡಿದೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>