ಎತ್ತಿನಹೊಳೆ ಪ್ರಾಯೋಗಿಕ ನೀರು ಹರಿಸಿದಾಗ ಸಕಲೇಶಪುರ ತಾಲ್ಲೂಕು ದೇಖಲ ಗ್ರಾಮದಲ್ಲಿ ಪೈಪ್ನಿಂದ ಸೋರಿಕೆ ಆಗಿ ರಸ್ತೆ ಕುಸಿದಿದೆ.
ಒಂದು ಪಂಪ್ನಿಂದ ನೀರು ಹರಿಸಿದಾಗ ಇಷ್ಟು ಹಾನಿಯಾಗಿದೆ. ಇನ್ನು 8 ಪಂಪ್ಗಳಿಂದ 5 ಪೈಪ್ಲೈನ್ಗಳಲ್ಲಿ ನೀರು ಹರಿಸಿದರೆ ಪರಿಸ್ಥಿತಿ ಏನಾಗುತ್ತದೆ ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ.
–ಮೇಘರಾಜ್ ಹೆಬ್ಬಸಾಲೆ ಗ್ರಾ.ಪಂ. ಮಾಜಿ ಸದಸ್ಯ
ಯೋಜನೆಯ ಬಹುಪಾಲು ನೀರು ನಮ್ಮೂರಿನಿಂದಲೇ ಹರಿಸುತ್ತಿದ್ದರೂ ಈ ಭಾಗದ ರಸ್ತೆ ಕಿರು ಸೇತುವೆ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ಇರುವ ರಸ್ತೆ ಹಾಗೂ ಪರಿಸರ ಯೋಜನೆಯಿಂದ ನಾಶವಾಗಿದೆ
ಕೆ.ಬಿ. ಲಕ್ಷ್ಮಣ್ ಹೆಬ್ಬಸಾಲೆ ಗ್ರಾ.ಪಂ. ಮಾಜಿ ಸದಸ್ಯ
ಪ್ರಾಯೋಗಿಕವಾಗಿ ನೀರು ಹರಿಸಿದಾಗ ಇಷ್ಟು ತೊಂದರೆಯಾಗಿದೆ. ಮಳೆಗಾಲದಲ್ಲಿ ತಿಂಗಳುಗಟ್ಟಲೆ ಹರಿಸಿದರೆ ಮನೆ ರಸ್ತೆ ಆಸ್ತಿಪಾಸ್ತಿ ಕೊಚ್ಚಿ ಹೋಗುತ್ತದೆಯೋ ಗೊತ್ತಿಲ್ಲ. ಗುಣಮಟ್ಟದ ಕಾಮಗಾರಿ ಆಗಿಲ್ಲ.