<p><strong>ಬೆಂಗಳೂರು:</strong> ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ, ಆಹಾರೋತ್ಪನ್ನದ ಗುಣಮಟ್ಟದ ವರದಿ ನೀಡುವ ‘ರೈತ ಸಹಾಯಕ’ ಮೊಬೈಲ್ ಆ್ಯಪ್ ನಗರದಲ್ಲಿ ಶುಕ್ರವಾರ ಲೋಕಾರ್ಪಣೆಯಾಯಿತು.</p>.<p>ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಕೋಚಾಯ್ಸ್ ನ್ಯಾಚುರಲ್ಸ್ ಸಂಸ್ಥೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. </p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಆರ್. ಶ್ರೀನಿವಾಸ್, ‘ಆ್ಯಪ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಆಹಾರೋತ್ಪನ್ನಗಳ ವರದಿಯು 30 ಸೆಕೆಂಡ್ಗಳಲ್ಲಿ ಸಿದ್ಧಗೊಳ್ಳಲಿದೆ. ಸ್ಥಳಕ್ಕೆ ಭೇಟಿ ನೀಡಿ,<br />ಆಹಾರೋತ್ಪನ್ನಗಳನ್ನು ಪರಿಶೀಲಿಸಬೇಕಾದ ಅಗತ್ಯತೆವಿಲ್ಲ. ರೈತರು ಮೊಬೈಲ್ ಫೋನ್ಗಳ ನೆರವಿನಿಂದ ಛಾಯಾಚಿತ್ರ ತೆಗೆದು, ಆಹಾರೋತ್ಪನ್ನದ ಗುಣಮಟ್ಟವನ್ನು ಅಳೆಯಬಹುದಾಗಿದೆ. ಈ ಆ್ಯಪ್ನಿಂದ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದ್ದು, ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಗ್ರಾಹಕರೂ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಬಹುದು’ ಎಂದು ಹೇಳಿದರು. </p>.<p>ಸಂಸ್ಥೆಯ ಸಹ ಸಂಸ್ಥಾಪಕಿ ಲಕ್ಷ್ಮೀಪ್ರಿಯಾ, ‘ಗುಣಮಟ್ಟದ ವರದಿಯ ಫಲಿತಾಂಶದ ಆಧಾರದ ಮೇಲೆ ಆಹಾರೋತ್ಪನ್ನಗಳನ್ನು ವಿಂಗಡಿಸಲಾಗುತ್ತದೆ. ಶೇ 85ಕ್ಕಿಂತ ಹೆಚ್ಚಿನ ಗುಣಮಟ್ಟ ಹೊಂದಿದ್ದಲ್ಲಿ ಉತ್ತಮ ಗುಣಮಟ್ಟದ ಆಹಾರೋತ್ಪನ್ನ ಎಂದು ನಿರ್ಧರಿಸಲಾಗುತ್ತದೆ. ಈ ಆ್ಯಪ್ನ ನೆರವಿನಿಂದ ಗ್ರಾಹಕರು ತಮ್ಮ ಬೇಡಿಕೆಯನ್ನು ಸಲ್ಲಿಸಬಹುದು. ಗುಣಮಟ್ಟದ ವರದಿಯು ಆಹಾರೋತ್ಪನ್ನ ಹಾಳಾಗಿರುವುದು, ಹುಳು ಬಿದ್ದಿರುವುದು, ಬೇಳೆ ಕಾಳುಗಳು ತೂತು ಬಿದ್ದಿರುವುದು, ತೇವಾಂಶ ಸೇರಿ ಎಲ್ಲ ಮಾಹಿತಿಯನ್ನು ಒಳಗೊಂಡಿರಲಿದೆ’ ಎಂದು ತಿಳಿಸಿದರು. </p>.<p>ವಿಜಯಪುರದ ರೈತ ಶಿವಾನಂದ, ‘ಈ ಮೊದಲು ಮೂರು ನಾಲ್ಕು ರೈತರು ಒಟ್ಟಾಗಿ ಬೇಳೆ ಕಾಳುಗಳನ್ನು ಮಾರುತ್ತಿದ್ದೆವು. ಗುಣಮಟ್ಟ ಕಾಯ್ದು ಕೊಳ್ಳುವುದು ಕಷ್ಟವಾಗುತ್ತಿತ್ತು. ಈಗ ಆ್ಯಪ್ನಿಂದಾಗಿ ಸಮಸ್ಯೆ ದೂರವಾಗಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆಯೇ ಮಾರಾಟ ಮಾಡುತ್ತಿದ್ದು, ಉತ್ತಮ ಬೆಲೆ ಸಿಗುತ್ತಿದೆ’ ಎಂದು ಸಂತಸ<br />ವ್ಯಕ್ತಪಡಿಸಿದರು. </p>.<p>ಯಾದಗಿರಿಯ ರೈತ ಮಹಿಳೆ ಮುಸ್ಕಾನ್, ‘ಈ ಆ್ಯಪ್ ರೈತರಿಗೆ ಸಹಕಾರಿಯಾಗಿದ್ದು, ತೊಗರಿ, ಕಡಲೆ ಸೇರಿ ವಿವಿಧ ಬೇಳೆ ಕಾಳುಗಳ ಮಾರಾಟ ಸುಲಭವಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರೈತರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ, ಆಹಾರೋತ್ಪನ್ನದ ಗುಣಮಟ್ಟದ ವರದಿ ನೀಡುವ ‘ರೈತ ಸಹಾಯಕ’ ಮೊಬೈಲ್ ಆ್ಯಪ್ ನಗರದಲ್ಲಿ ಶುಕ್ರವಾರ ಲೋಕಾರ್ಪಣೆಯಾಯಿತು.</p>.<p>ರಾಜ್ಯ ಸರ್ಕಾರದ ಸಹಯೋಗದಲ್ಲಿ ಎಕೋಚಾಯ್ಸ್ ನ್ಯಾಚುರಲ್ಸ್ ಸಂಸ್ಥೆ ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದ್ದು, ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. </p>.<p>ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕ ಆರ್. ಶ್ರೀನಿವಾಸ್, ‘ಆ್ಯಪ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಆಹಾರೋತ್ಪನ್ನಗಳ ವರದಿಯು 30 ಸೆಕೆಂಡ್ಗಳಲ್ಲಿ ಸಿದ್ಧಗೊಳ್ಳಲಿದೆ. ಸ್ಥಳಕ್ಕೆ ಭೇಟಿ ನೀಡಿ,<br />ಆಹಾರೋತ್ಪನ್ನಗಳನ್ನು ಪರಿಶೀಲಿಸಬೇಕಾದ ಅಗತ್ಯತೆವಿಲ್ಲ. ರೈತರು ಮೊಬೈಲ್ ಫೋನ್ಗಳ ನೆರವಿನಿಂದ ಛಾಯಾಚಿತ್ರ ತೆಗೆದು, ಆಹಾರೋತ್ಪನ್ನದ ಗುಣಮಟ್ಟವನ್ನು ಅಳೆಯಬಹುದಾಗಿದೆ. ಈ ಆ್ಯಪ್ನಿಂದ ಮಧ್ಯವರ್ತಿಗಳ ಹಾವಳಿಯೂ ತಪ್ಪಲಿದ್ದು, ರೈತರಿಗೆ ಉತ್ತಮ ಬೆಲೆ ಸಿಗಲಿದೆ. ಗ್ರಾಹಕರೂ ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಖರೀದಿಸಬಹುದು’ ಎಂದು ಹೇಳಿದರು. </p>.<p>ಸಂಸ್ಥೆಯ ಸಹ ಸಂಸ್ಥಾಪಕಿ ಲಕ್ಷ್ಮೀಪ್ರಿಯಾ, ‘ಗುಣಮಟ್ಟದ ವರದಿಯ ಫಲಿತಾಂಶದ ಆಧಾರದ ಮೇಲೆ ಆಹಾರೋತ್ಪನ್ನಗಳನ್ನು ವಿಂಗಡಿಸಲಾಗುತ್ತದೆ. ಶೇ 85ಕ್ಕಿಂತ ಹೆಚ್ಚಿನ ಗುಣಮಟ್ಟ ಹೊಂದಿದ್ದಲ್ಲಿ ಉತ್ತಮ ಗುಣಮಟ್ಟದ ಆಹಾರೋತ್ಪನ್ನ ಎಂದು ನಿರ್ಧರಿಸಲಾಗುತ್ತದೆ. ಈ ಆ್ಯಪ್ನ ನೆರವಿನಿಂದ ಗ್ರಾಹಕರು ತಮ್ಮ ಬೇಡಿಕೆಯನ್ನು ಸಲ್ಲಿಸಬಹುದು. ಗುಣಮಟ್ಟದ ವರದಿಯು ಆಹಾರೋತ್ಪನ್ನ ಹಾಳಾಗಿರುವುದು, ಹುಳು ಬಿದ್ದಿರುವುದು, ಬೇಳೆ ಕಾಳುಗಳು ತೂತು ಬಿದ್ದಿರುವುದು, ತೇವಾಂಶ ಸೇರಿ ಎಲ್ಲ ಮಾಹಿತಿಯನ್ನು ಒಳಗೊಂಡಿರಲಿದೆ’ ಎಂದು ತಿಳಿಸಿದರು. </p>.<p>ವಿಜಯಪುರದ ರೈತ ಶಿವಾನಂದ, ‘ಈ ಮೊದಲು ಮೂರು ನಾಲ್ಕು ರೈತರು ಒಟ್ಟಾಗಿ ಬೇಳೆ ಕಾಳುಗಳನ್ನು ಮಾರುತ್ತಿದ್ದೆವು. ಗುಣಮಟ್ಟ ಕಾಯ್ದು ಕೊಳ್ಳುವುದು ಕಷ್ಟವಾಗುತ್ತಿತ್ತು. ಈಗ ಆ್ಯಪ್ನಿಂದಾಗಿ ಸಮಸ್ಯೆ ದೂರವಾಗಿದೆ. ಮಧ್ಯವರ್ತಿಗಳ ಸಹಾಯವಿಲ್ಲದೆಯೇ ಮಾರಾಟ ಮಾಡುತ್ತಿದ್ದು, ಉತ್ತಮ ಬೆಲೆ ಸಿಗುತ್ತಿದೆ’ ಎಂದು ಸಂತಸ<br />ವ್ಯಕ್ತಪಡಿಸಿದರು. </p>.<p>ಯಾದಗಿರಿಯ ರೈತ ಮಹಿಳೆ ಮುಸ್ಕಾನ್, ‘ಈ ಆ್ಯಪ್ ರೈತರಿಗೆ ಸಹಕಾರಿಯಾಗಿದ್ದು, ತೊಗರಿ, ಕಡಲೆ ಸೇರಿ ವಿವಿಧ ಬೇಳೆ ಕಾಳುಗಳ ಮಾರಾಟ ಸುಲಭವಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>