ರಾಮಚಂದ್ರ ಮಡದಿ, ಮಕ್ಕಳೊಂದಿಗೆ ರಾಮನಗರದಲ್ಲಿ ವಾಸವಿದ್ದರು. ಮಂಗಳವಾರ ರಾತ್ರಿ ಹೆಂಡತಿ ಜೊತೆ ಜಗಳ ಮಾಡಿಕೊಂಡು ಕಟಮಾನದೊಡ್ಡಿಗೆ ಬಂದಿದ್ದರು. ಊರಿನ ಮನೆಯಲ್ಲಿ ಮೊದಲು ಮಗಳಿಗೆ ನೇಣು ಹಾಕಿದ ರಾಮಚಂದ್ರ, ಬಳಿಕ ತಾವೂ ನೇಣು ಬಿಗಿದುಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಸೆಲ್ಫಿ ವಿಡಿಯೊ ಮಾಡಿದ್ದು, ಹೆಂಡತಿಯ ನಡತೆಯೇ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ್ದಾರೆ.