<p>‘ದಯವಿಟ್ಟು ನಮ್ಮ ಪಶ್ಚಿಮ ಘಟ್ಟಗಳನ್ನು ರಕ್ಷಿಸಿ’ ಎಂದು ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ಪತ್ರ ಬರೆದಿದ್ದಾಳೆ. ಆ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದ್ದಾಳೆ.</p><p>5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಗಾನವಿ, ಪಶ್ಚಿಮ ಘಟ್ಟಗಳನ್ನು ಮತ್ತು ನಮ್ಮ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾಳೆ. </p>.2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ.ನಿಮ್ಮ ಮೇಲೆ ಒತ್ತಡವಿದೆ: ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ‘ಕೈ’ ಸಂಸದೆಯರು.<p><strong>ವಿದ್ಯಾರ್ಥಿನಿ ಬರೆದ ಪತ್ರದಲ್ಲಿ ಏನಿದೆ?</strong> </p><p>‘ನಾನು ದೆಹಲಿಯಿಂದ ದೂರದಲ್ಲಿರುವ ಸುಂದರ ಪಶ್ಚಿಮ ಘಟ್ಟಗಳ ಬೆಟ್ಟಗಳಲ್ಲಿ ವಾಸಿಸುವ ಒಬ್ಬ ವಿದ್ಯಾರ್ಥಿನಿ. ಪ್ರತಿದಿನ ಬೆಳಿಗ್ಗೆ ನಾನು ಹಕ್ಕಿಗಳ ಕಲರವ, ಹರಿಯುವ ನದಿಗಳ ನಾದ, ಮತ್ತು ಪ್ರಾಚೀನ ಮರಗಳ ನಡುವೆ ಬೀಸುವ ಗಾಳಿಯ ಶಬ್ದ ಕೇಳುತ್ತ ಎದ್ದೇಳುತ್ತೇನೆ. ಇಲ್ಲಿ ನನ್ನ ದೊಡ್ಡ ದೊಡ್ಡ ಅಜ್ಜ-ಅಜ್ಜಿಯವರಿಗಿಂತಲೂ ಹಳೆಯ ಮರಗಳಿವೆ. ಇದು ನನ್ನ ಪ್ರಪಂಚ. ಇತ್ತೀಚೆಗೆ, ನಗರಗಳಿಗೆ ನೀರು ಒದಗಿಸಲು ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಒಂದಾಗಿಸುವ ಪ್ರಸ್ತಾಪದ ಬಗ್ಗೆ ನನ್ನ ತಂದೆ-ತಾಯಿಯರು ಮಾತನಾಡುತ್ತಿರುವುದನ್ನು ಕೇಳಿದೆ. ಅದನ್ನು ಕೇಳಿದಾಗ ನನಗೆ ತುಂಬಾ ಭಯವಾಯಿತು. ಈ ನದಿಗಳನ್ನು ಒಂದಾಗಿಸಿದರೆ ಮತ್ತು ದೊಡ್ಡ ಪ್ರದೇಶಗಳು ನೀರಿನಲ್ಲಿ ಮುಳುಗಿದರೆ, ನನ್ನ ಅಜ್ಜ-ಅಜ್ಜಿಯವರಂತಹ ಅನೇಕ ಕುಟುಂಬಗಳು ತಾವು ಹುಟ್ಟಿದ ಮತ್ತು ಬೆಳೆದ ನೆಲವನ್ನು ಬಿಡಬೇಕಾಗಬಹುದು’ ಎಂದಿದ್ದಾಳೆ.</p><p>‘ನಮ್ಮ ಮನೆ ಅವರ ನೆನಪುಗಳನ್ನು ಹೊತ್ತಿದೆ. ಆ ನೆಲವೇ ನೀರಿನಲ್ಲಿ ಮುಳುಗಿದರೆ, ಆ ನೆನಪುಗಳು ಎಲ್ಲಿಗೆ ಹೋಗುತ್ತವೆ? ಆದರೆ ನನಗೆ ಇನ್ನಷ್ಟು ಭಯ ಹುಟ್ಟಿಸಿದ್ದು ಮತ್ತೊಂದು ವಿಚಾರ. ಮಾತನಾಡಲು ಸಾಧ್ಯವಿಲ್ಲದ ಪ್ರಾಣಿಗಳ ಸ್ಥಿತಿ ಏನು? ಈ ಕ್ಷಣ ಮೊಟ್ಟೆಯೊಳಗಿರುವ ಹಕ್ಕಿಗಳ ಸ್ಥಿತಿ ಏನು? ಈ ಕಾಡುಗಳಲ್ಲಿ ಮಾತ್ರ ಬದುಕುವ ಸಣ್ಣ ಕೀಟಗಳ ಸ್ಥಿತಿ ಏನು? ಕಲ್ಲಿನ ಕೆಳಗೆ ಅಡಗಿರುವ ಸರೀಸೃಪಗಳ ಸ್ಥಿತಿ ಏನು? ಮಾನವರು ಏನೋ ಯೋಜಿಸುತ್ತಿದ್ದಾರೆ ಎಂಬುದೇ ತಿಳಿಯದ ಜಿಂಕೆ, ಹಾವು, ಕಪ್ಪೆ ಮತ್ತು ಚಿಟ್ಟೆಗಳ ಸ್ಥಿತಿ ಏನು? ಜನರು ತಮ್ಮ ವಸ್ತುಗಳನ್ನು ಕಟ್ಟಿಕೊಂಡು ಹೋಗಬಹುದು. ಆದರೆ ಗೂಡು ಹಾರಿಕೊಂಡು ಹೋಗುವುದೇನು? 400 ವರ್ಷ ಹಳೆಯ ಮರ ಹೇಗೆ ಸುರಕ್ಷಿತ ಸ್ಥಳಕ್ಕೆ ನಡೆದು ಹೋಗುತ್ತದೆ? ಕಾಡು ಮುಳುಗುತ್ತಿದೆ ಎಂದು ಅದು ಹೇಗೆ ಅರ್ಥಮಾಡಿಕೊಳ್ಳುತ್ತದೆ? ನಾವು ಜನರನ್ನು ಸ್ಥಳಾಂತರಿಸಬಹುದು. ಆದರೆ ಕಾಡನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. 400 ವರ್ಷದ ಮರವನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ಒಮ್ಮೆ ನಾಶವಾದ ಜಾತಿಗಳನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.</p><p>‘ನನ್ನ ಶಿಕ್ಷಕಿ ಪಶ್ಚಿಮ ಘಟ್ಟಗಳು ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಪರಿಸರ ವ್ಯವಸ್ಥೆಗಳಲ್ಲೊಂದು ಎಂದು ಹೇಳಿದ್ದರು. ಅವು ಮಳೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ ಮತ್ತು ನಮ್ಮ ಹವಾಮಾನವನ್ನು ರಕ್ಷಿಸುತ್ತವೆ ಎಂದು ಹೇಳಿದರು. ಅವು ಹಾನಿಗೊಳಗಾದರೆ ಅದು ನಮ್ಮ ಹಳ್ಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುಶಃ ಭೂಮಿಗೆ ಸಹ ಪರಿಣಾಮ ಬೀರುತ್ತದೆ. ನಗರಗಳಿಗೆ ನೀರು ಬೇಕೆಂಬುದು ನನಗೆ ಗೊತ್ತಿದೆ. ಅಭಿವೃದ್ಧಿ ಮುಖ್ಯವೆಂಬುದೂ ನನಗೆ ಗೊತ್ತಿದೆ. ಆದರೆ ಮೊದಲು ಬೇರೆ ಮಾರ್ಗಗಳನ್ನು ಪ್ರಯತ್ನಿಸಲು ಸಾಧ್ಯವಿಲ್ಲವೇ? ಮಳೆ ನೀರು ಸಂಗ್ರಹಣೆ. ನೀರು ಉಳಿಸುವುದು. ನೀರು ಮರುಬಳಕೆ. ಮಳೆಗಾಲದ ನೀರನ್ನು ಸಂಗ್ರಹಿಸುವುದು. ಜೂನ್ನಿಂದ ಅಕ್ಟೋಬರ್ ತನಕ ಇಲ್ಲಿ ನೀರಿನ ಹರಿವು ಇರುತ್ತದೆ. ಆದರೆ ಫೆಬ್ರುವರಿಯಿಂದ ಮೇ ತನಕ ನಮ್ಮ ನದಿಗಳು ಬರಿದಾಗುತ್ತವೆ. ಪ್ರಕೃತಿಯನ್ನು ಶಾಶ್ವತವಾಗಿ ಬದಲಿಸುವ ಬದಲು, ಅದರೊಂದಿಗೆ ಜಾಣ್ಮೆಯಿಂದ ಬದುಕಲು ಕಲಿಯಲಾರದೇನು?’ ಎಂದು ಪ್ರಶ್ನೆ ಮಾಡಿದ್ದಾರೆ.</p><p>‘ಮೋದಿಜೀ, ನೀವು ಸದಾ ಪ್ರಕೃತಿಯನ್ನು ರಕ್ಷಿಸುವುದು ಮತ್ತು ಬಲವಾದ ಭಾರತವನ್ನು ನಿರ್ಮಿಸುವುದರ ಕುರಿತು ಮಾತನಾಡುತ್ತೀರಿ. ಬಲವಾದ ಭಾರತಕ್ಕೆ ಬಲವಾದ ಕಾಡುಗಳು, ಸ್ವಚ್ಛ ನದಿಗಳು ಮತ್ತು ಪ್ರಾಣಿಗಳಿಗೂ ,ಭವಿಷ್ಯದ ತಲೆಮಾರುಗಳಿಗೂ ಸುರಕ್ಷಿತ ಮನೆಗಳು ಅಗತ್ಯ. ಒಂದು ದಿನ ನನ್ನ ಮಕ್ಕಳೂ ಈ ಬೆಟ್ಟಗಳನ್ನು ನೋಡಲಿ ಎಂದು ನಾನು ಬಯಸುತ್ತೇನೆ. ಅವರು ಇದೇ ಹಕ್ಕಿಗಳ ಧ್ವನಿಯನ್ನು ಕೇಳಲಿ ಎಂದು ಬಯಸುತ್ತೇನೆ. ನಮ್ಮ ಕಾಡುಗಳು ಅಪಾಯದಲ್ಲಿದ್ದಾಗ, ನಮ್ಮ ನಾಯಕರು ಧೈರ್ಯ ಮತ್ತು ಕರುಣೆಯನ್ನು ಆಯ್ಕೆ ಮಾಡಿದರು ಎಂದು ಅವರು ತಿಳಿದುಕೊಳ್ಳಲಿ ಎಂದು ಬಯಸುತ್ತೇನೆ. ನಿಮ್ಮಂತೆಯೇ ದೇಶವನ್ನು ಮತ್ತು ಜನರನ್ನು ರಕ್ಷಿಸುವ ನಾಯಕಿಯಾಗಬೇಕೆಂಬುದು ನನ್ನ ಕನಸು. ನನ್ನಂತಹ ಮಕ್ಕಳಿಗೆ ಹೆಮ್ಮೆ ಉಂಟುಮಾಡುವಂತಹ ನಿರ್ಧಾರವನ್ನು ದಯವಿಟ್ಟು ತೆಗೆದುಕೊಳ್ಳಿ. ನಾನು ಪ್ರೀತಿಸಿದ ಕಾಡುಗಳು ಯಾರೂ ಕೇಳದ ಕಾರಣದಿಂದ, ನಿರ್ಲಕ್ಷ್ಯದಿಂದ ಅಳಿದುಹೋದವು ಎಂಬ ಭಾವನೆ ನನಗೆ ಬರದಂತೆ ಮಾಡಿ. ನಾನು ಕೇವಲ ಒಂದು ಚಿಕ್ಕ ಹುಡುಗಿ. ನನ್ನ ಧ್ವನಿ ಚಿಕ್ಕದು. ಆದರೆ ಈ ಕಾಡುಗಳ ಮೇಲೆ ನನ್ನ ಪ್ರೀತಿ ಬಹಳ ದೊಡ್ಡದು. ದಯವಿಟ್ಟು ನಮ್ಮ ಪಶ್ಚಿಮ ಘಟ್ಟಗಳನ್ನು ರಕ್ಷಿಸಿ. ನಾನು ಗಾನವಿ ಪಶ್ಚಿಮ ಘಟ್ಟಗಳ ಬಗ್ಗೆ ಚಿಂತಿಸುವ ಒಂದು ಮಗು’ ಎಂದು ಪತ್ರ ಬರೆದಿದ್ದಾರೆ.</p><p>ಸದ್ಯ ಈ ಪತ್ರ ಬರೆದಿರುವ ಗಾನವಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಮೋದಿ ಅವರು ಏನು ಉತ್ತರ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ದಯವಿಟ್ಟು ನಮ್ಮ ಪಶ್ಚಿಮ ಘಟ್ಟಗಳನ್ನು ರಕ್ಷಿಸಿ’ ಎಂದು ಐದನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಯ ಅವರಿಗೆ ಪತ್ರ ಬರೆದಿದ್ದಾಳೆ. ಆ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದ್ದಾಳೆ.</p><p>5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಗಾನವಿ, ಪಶ್ಚಿಮ ಘಟ್ಟಗಳನ್ನು ಮತ್ತು ನಮ್ಮ ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ರಕ್ಷಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾಳೆ. </p>.2025 ಸುಧಾರಣೆಗಳ ವರ್ಷ; ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದ ಭಾರತ: ಪ್ರಧಾನಿ ಮೋದಿ.ನಿಮ್ಮ ಮೇಲೆ ಒತ್ತಡವಿದೆ: ಸ್ಪೀಕರ್ ಓಂ ಬಿರ್ಲಾಗೆ ಪತ್ರ ಬರೆದ ‘ಕೈ’ ಸಂಸದೆಯರು.<p><strong>ವಿದ್ಯಾರ್ಥಿನಿ ಬರೆದ ಪತ್ರದಲ್ಲಿ ಏನಿದೆ?</strong> </p><p>‘ನಾನು ದೆಹಲಿಯಿಂದ ದೂರದಲ್ಲಿರುವ ಸುಂದರ ಪಶ್ಚಿಮ ಘಟ್ಟಗಳ ಬೆಟ್ಟಗಳಲ್ಲಿ ವಾಸಿಸುವ ಒಬ್ಬ ವಿದ್ಯಾರ್ಥಿನಿ. ಪ್ರತಿದಿನ ಬೆಳಿಗ್ಗೆ ನಾನು ಹಕ್ಕಿಗಳ ಕಲರವ, ಹರಿಯುವ ನದಿಗಳ ನಾದ, ಮತ್ತು ಪ್ರಾಚೀನ ಮರಗಳ ನಡುವೆ ಬೀಸುವ ಗಾಳಿಯ ಶಬ್ದ ಕೇಳುತ್ತ ಎದ್ದೇಳುತ್ತೇನೆ. ಇಲ್ಲಿ ನನ್ನ ದೊಡ್ಡ ದೊಡ್ಡ ಅಜ್ಜ-ಅಜ್ಜಿಯವರಿಗಿಂತಲೂ ಹಳೆಯ ಮರಗಳಿವೆ. ಇದು ನನ್ನ ಪ್ರಪಂಚ. ಇತ್ತೀಚೆಗೆ, ನಗರಗಳಿಗೆ ನೀರು ಒದಗಿಸಲು ಬೇಡ್ತಿ ಮತ್ತು ಅಘನಾಶಿನಿ ನದಿಗಳನ್ನು ಒಂದಾಗಿಸುವ ಪ್ರಸ್ತಾಪದ ಬಗ್ಗೆ ನನ್ನ ತಂದೆ-ತಾಯಿಯರು ಮಾತನಾಡುತ್ತಿರುವುದನ್ನು ಕೇಳಿದೆ. ಅದನ್ನು ಕೇಳಿದಾಗ ನನಗೆ ತುಂಬಾ ಭಯವಾಯಿತು. ಈ ನದಿಗಳನ್ನು ಒಂದಾಗಿಸಿದರೆ ಮತ್ತು ದೊಡ್ಡ ಪ್ರದೇಶಗಳು ನೀರಿನಲ್ಲಿ ಮುಳುಗಿದರೆ, ನನ್ನ ಅಜ್ಜ-ಅಜ್ಜಿಯವರಂತಹ ಅನೇಕ ಕುಟುಂಬಗಳು ತಾವು ಹುಟ್ಟಿದ ಮತ್ತು ಬೆಳೆದ ನೆಲವನ್ನು ಬಿಡಬೇಕಾಗಬಹುದು’ ಎಂದಿದ್ದಾಳೆ.</p><p>‘ನಮ್ಮ ಮನೆ ಅವರ ನೆನಪುಗಳನ್ನು ಹೊತ್ತಿದೆ. ಆ ನೆಲವೇ ನೀರಿನಲ್ಲಿ ಮುಳುಗಿದರೆ, ಆ ನೆನಪುಗಳು ಎಲ್ಲಿಗೆ ಹೋಗುತ್ತವೆ? ಆದರೆ ನನಗೆ ಇನ್ನಷ್ಟು ಭಯ ಹುಟ್ಟಿಸಿದ್ದು ಮತ್ತೊಂದು ವಿಚಾರ. ಮಾತನಾಡಲು ಸಾಧ್ಯವಿಲ್ಲದ ಪ್ರಾಣಿಗಳ ಸ್ಥಿತಿ ಏನು? ಈ ಕ್ಷಣ ಮೊಟ್ಟೆಯೊಳಗಿರುವ ಹಕ್ಕಿಗಳ ಸ್ಥಿತಿ ಏನು? ಈ ಕಾಡುಗಳಲ್ಲಿ ಮಾತ್ರ ಬದುಕುವ ಸಣ್ಣ ಕೀಟಗಳ ಸ್ಥಿತಿ ಏನು? ಕಲ್ಲಿನ ಕೆಳಗೆ ಅಡಗಿರುವ ಸರೀಸೃಪಗಳ ಸ್ಥಿತಿ ಏನು? ಮಾನವರು ಏನೋ ಯೋಜಿಸುತ್ತಿದ್ದಾರೆ ಎಂಬುದೇ ತಿಳಿಯದ ಜಿಂಕೆ, ಹಾವು, ಕಪ್ಪೆ ಮತ್ತು ಚಿಟ್ಟೆಗಳ ಸ್ಥಿತಿ ಏನು? ಜನರು ತಮ್ಮ ವಸ್ತುಗಳನ್ನು ಕಟ್ಟಿಕೊಂಡು ಹೋಗಬಹುದು. ಆದರೆ ಗೂಡು ಹಾರಿಕೊಂಡು ಹೋಗುವುದೇನು? 400 ವರ್ಷ ಹಳೆಯ ಮರ ಹೇಗೆ ಸುರಕ್ಷಿತ ಸ್ಥಳಕ್ಕೆ ನಡೆದು ಹೋಗುತ್ತದೆ? ಕಾಡು ಮುಳುಗುತ್ತಿದೆ ಎಂದು ಅದು ಹೇಗೆ ಅರ್ಥಮಾಡಿಕೊಳ್ಳುತ್ತದೆ? ನಾವು ಜನರನ್ನು ಸ್ಥಳಾಂತರಿಸಬಹುದು. ಆದರೆ ಕಾಡನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ. 400 ವರ್ಷದ ಮರವನ್ನು ಮತ್ತೆ ನಿರ್ಮಿಸಲು ಸಾಧ್ಯವಿಲ್ಲ. ಒಮ್ಮೆ ನಾಶವಾದ ಜಾತಿಗಳನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ.</p><p>‘ನನ್ನ ಶಿಕ್ಷಕಿ ಪಶ್ಚಿಮ ಘಟ್ಟಗಳು ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಪರಿಸರ ವ್ಯವಸ್ಥೆಗಳಲ್ಲೊಂದು ಎಂದು ಹೇಳಿದ್ದರು. ಅವು ಮಳೆಯ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ ಮತ್ತು ನಮ್ಮ ಹವಾಮಾನವನ್ನು ರಕ್ಷಿಸುತ್ತವೆ ಎಂದು ಹೇಳಿದರು. ಅವು ಹಾನಿಗೊಳಗಾದರೆ ಅದು ನಮ್ಮ ಹಳ್ಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುಶಃ ಭೂಮಿಗೆ ಸಹ ಪರಿಣಾಮ ಬೀರುತ್ತದೆ. ನಗರಗಳಿಗೆ ನೀರು ಬೇಕೆಂಬುದು ನನಗೆ ಗೊತ್ತಿದೆ. ಅಭಿವೃದ್ಧಿ ಮುಖ್ಯವೆಂಬುದೂ ನನಗೆ ಗೊತ್ತಿದೆ. ಆದರೆ ಮೊದಲು ಬೇರೆ ಮಾರ್ಗಗಳನ್ನು ಪ್ರಯತ್ನಿಸಲು ಸಾಧ್ಯವಿಲ್ಲವೇ? ಮಳೆ ನೀರು ಸಂಗ್ರಹಣೆ. ನೀರು ಉಳಿಸುವುದು. ನೀರು ಮರುಬಳಕೆ. ಮಳೆಗಾಲದ ನೀರನ್ನು ಸಂಗ್ರಹಿಸುವುದು. ಜೂನ್ನಿಂದ ಅಕ್ಟೋಬರ್ ತನಕ ಇಲ್ಲಿ ನೀರಿನ ಹರಿವು ಇರುತ್ತದೆ. ಆದರೆ ಫೆಬ್ರುವರಿಯಿಂದ ಮೇ ತನಕ ನಮ್ಮ ನದಿಗಳು ಬರಿದಾಗುತ್ತವೆ. ಪ್ರಕೃತಿಯನ್ನು ಶಾಶ್ವತವಾಗಿ ಬದಲಿಸುವ ಬದಲು, ಅದರೊಂದಿಗೆ ಜಾಣ್ಮೆಯಿಂದ ಬದುಕಲು ಕಲಿಯಲಾರದೇನು?’ ಎಂದು ಪ್ರಶ್ನೆ ಮಾಡಿದ್ದಾರೆ.</p><p>‘ಮೋದಿಜೀ, ನೀವು ಸದಾ ಪ್ರಕೃತಿಯನ್ನು ರಕ್ಷಿಸುವುದು ಮತ್ತು ಬಲವಾದ ಭಾರತವನ್ನು ನಿರ್ಮಿಸುವುದರ ಕುರಿತು ಮಾತನಾಡುತ್ತೀರಿ. ಬಲವಾದ ಭಾರತಕ್ಕೆ ಬಲವಾದ ಕಾಡುಗಳು, ಸ್ವಚ್ಛ ನದಿಗಳು ಮತ್ತು ಪ್ರಾಣಿಗಳಿಗೂ ,ಭವಿಷ್ಯದ ತಲೆಮಾರುಗಳಿಗೂ ಸುರಕ್ಷಿತ ಮನೆಗಳು ಅಗತ್ಯ. ಒಂದು ದಿನ ನನ್ನ ಮಕ್ಕಳೂ ಈ ಬೆಟ್ಟಗಳನ್ನು ನೋಡಲಿ ಎಂದು ನಾನು ಬಯಸುತ್ತೇನೆ. ಅವರು ಇದೇ ಹಕ್ಕಿಗಳ ಧ್ವನಿಯನ್ನು ಕೇಳಲಿ ಎಂದು ಬಯಸುತ್ತೇನೆ. ನಮ್ಮ ಕಾಡುಗಳು ಅಪಾಯದಲ್ಲಿದ್ದಾಗ, ನಮ್ಮ ನಾಯಕರು ಧೈರ್ಯ ಮತ್ತು ಕರುಣೆಯನ್ನು ಆಯ್ಕೆ ಮಾಡಿದರು ಎಂದು ಅವರು ತಿಳಿದುಕೊಳ್ಳಲಿ ಎಂದು ಬಯಸುತ್ತೇನೆ. ನಿಮ್ಮಂತೆಯೇ ದೇಶವನ್ನು ಮತ್ತು ಜನರನ್ನು ರಕ್ಷಿಸುವ ನಾಯಕಿಯಾಗಬೇಕೆಂಬುದು ನನ್ನ ಕನಸು. ನನ್ನಂತಹ ಮಕ್ಕಳಿಗೆ ಹೆಮ್ಮೆ ಉಂಟುಮಾಡುವಂತಹ ನಿರ್ಧಾರವನ್ನು ದಯವಿಟ್ಟು ತೆಗೆದುಕೊಳ್ಳಿ. ನಾನು ಪ್ರೀತಿಸಿದ ಕಾಡುಗಳು ಯಾರೂ ಕೇಳದ ಕಾರಣದಿಂದ, ನಿರ್ಲಕ್ಷ್ಯದಿಂದ ಅಳಿದುಹೋದವು ಎಂಬ ಭಾವನೆ ನನಗೆ ಬರದಂತೆ ಮಾಡಿ. ನಾನು ಕೇವಲ ಒಂದು ಚಿಕ್ಕ ಹುಡುಗಿ. ನನ್ನ ಧ್ವನಿ ಚಿಕ್ಕದು. ಆದರೆ ಈ ಕಾಡುಗಳ ಮೇಲೆ ನನ್ನ ಪ್ರೀತಿ ಬಹಳ ದೊಡ್ಡದು. ದಯವಿಟ್ಟು ನಮ್ಮ ಪಶ್ಚಿಮ ಘಟ್ಟಗಳನ್ನು ರಕ್ಷಿಸಿ. ನಾನು ಗಾನವಿ ಪಶ್ಚಿಮ ಘಟ್ಟಗಳ ಬಗ್ಗೆ ಚಿಂತಿಸುವ ಒಂದು ಮಗು’ ಎಂದು ಪತ್ರ ಬರೆದಿದ್ದಾರೆ.</p><p>ಸದ್ಯ ಈ ಪತ್ರ ಬರೆದಿರುವ ಗಾನವಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಮೋದಿ ಅವರು ಏನು ಉತ್ತರ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>