<p>ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ. ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮತ್ತು ರಾಷ್ಟ್ರದ ಬೆಳವಣಿಗೆಯ ಸಾಮರ್ಥ್ಯವನ್ನು ವಿಸ್ತರಿಸುವ ಮುಂದಿನ ಪೀಳಿಗೆಯ ಸುಧಾರಣೆಗಳ ಮೂಲಕ ಪ್ರಗತಿಯ ವೇಗವನ್ನು ಹೆಚ್ಚಿಸಿರುವ ರೀತಿಯನ್ನು ಜಗತ್ತು ಶ್ಲಾಘಿಸುತ್ತಿದೆ. </p><p>ನಾನು ಅನೇಕರಿಗೆ ಹೇಳುವಂತೆ, ಭಾರತವು ಈಗ <strong>'ಸುಧಾರಣಾ ಎಕ್ಸ್ ಪ್ರೆಸ್' (Reform Express)</strong>ನಲ್ಲಿ ಪಯಣಿಸುತ್ತಿದೆ. </p><p>ಈ ಸುಧಾರಣಾ ಎಕ್ಸ್ ಪ್ರೆಸ್ನ ಪ್ರಾಥಮಿಕ ಎಂಜಿನ್ ಎಂದರೆ ಭಾರತದ ಜನಸಂಖ್ಯಾ ವೈವಿಧ್ಯತೆ, ನಮ್ಮ ಯುವ ಪೀಳಿಗೆ ಮತ್ತು ನಮ್ಮ ಜನರ ಅದಮ್ಯ ಚೇತನ. </p><p>ಕಳೆದ 11 ವರ್ಷಗಳಲ್ಲಿ ನಾವು ಕ್ರಮಿಸಿದ ಹಾದಿಯಲ್ಲಿ, ಸುಧಾರಣೆಗಳನ್ನೇ ಒಂದು ನಿರಂತರ' ರಾಷ್ಟ್ರೀಯ ಸಂಕಲ್ಪ'ವನ್ನಾಗಿ ಕೇಂದ್ರೀಕರಿಸಿದ ವರ್ಷವಾಗಿ, 2025 ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ. ನಾವು ಸಂಸ್ಥೆಗಳನ್ನು ಆಧುನೀಕರಿಸಿದ್ದೇವೆ, ಆಡಳಿತ ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದೇವೆ ಮತ್ತು ದೀರ್ಘಕಾಲೀನ ಹಾಗೂ ಸರ್ವವ್ಯಾಪಿ ಬೆಳವಣಿಗೆಗೆ ಪೂರಕವಾದ ಭದ್ರವಾದ ತಳಹದಿಯನ್ನು ನಿರ್ಮಿಸಿದ್ದೇವೆ.</p><p>ನಾವು ಉನ್ನತ ಮಹತ್ವಾಕಾಂಕ್ಷೆ, ವೇಗದ ಅನುಷ್ಠಾನ ಮತ್ತು ದೀರ್ಘವಾದ ಪರಿವರ್ತನೆಯೊಂದಿಗೆ ನಿರ್ಣಾಯಕವಾಗಿ ಮುನ್ನಡೆದಿದ್ದೇವೆ. ಈ ಸುಧಾರಣೆಗಳು ನಾಗರಿಕರು ಗೌರವದಿಂದ ಬದುಕಲು, ಉದ್ಯಮಿಗಳು ಆತ್ಮವಿಶ್ವಾಸದಿಂದ ಆವಿಷ್ಕಾರ ನಡೆಸಲು ಮತ್ತು ಸಂಸ್ಥೆಗಳು ಸ್ಪಷ್ಟತೆ ಹಾಗೂ ನಂಬಿಕೆಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿವೆ. </p><p>ಕೈಗೊಂಡ ಕೆಲವು ಪ್ರಮುಖ ಸುಧಾರಣೆಗಳ ಉದಾಹರಣೆಗಳನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ:</p>. <h2><strong>ಜಿಎಸ್ಟಿ ಸುಧಾರಣೆ:</strong></h2><p>• ಶೇ. 5 ಮತ್ತು ಶೇ.18ರ ಎರಡು ಹಂತದ ಸ್ಪಷ್ಟ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.</p><p>• ಕುಟುಂಬಗಳು, ಎಂಎಸ್ಎಂಇಗಳು, ರೈತರು ಮತ್ತು ಕಾರ್ಮಿಕ ಪ್ರಧಾನ ವಲಯಗಳ ಮೇಲಿನ ಹೊರೆ ತಗ್ಗಿಸಲಾಗಿದೆ.</p><p>• ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ನಿಯಮಗಳ ಪಾಲನೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.</p><p>• ಈ ಸುಧಾರಣೆಯು ಗ್ರಾಹಕರ ಉತ್ಸಾಹ ಮತ್ತು ಬೇಡಿಕೆಯನ್ನು ಹೆಚ್ಚಿಸಿದೆ. ಹಬ್ಬದ ದಿನಗಳಲ್ಲಿ ಮಾರಾಟವು ಭಾರಿ ಏರಿಕೆ ಕಂಡಿದೆ.</p> .<h2><strong>ಮಧ್ಯಮ ವರ್ಗದವರಿಗೆ ಅಭೂತಪೂರ್ವ ಪರಿಹಾರ:</strong></h2><p>• ಮೊದಲ ಬಾರಿಗೆ, ವಾರ್ಷಿಕ ₹12 ಲಕ್ಷದವರೆಗೆ ಆದಾಯ ಗಳಿಸುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆ ಪಾವತಿಸಬೇಕಿಲ್ಲ.</p><p>• 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಆಧುನಿಕ ಮತ್ತು ಸರಳವಾದ' ಆದಾಯ ತೆರಿಗೆ ಕಾಯ್ದೆ, 2025' ಅನ್ನು ತರಲಾಗಿದೆ.</p><p>• ಒಟ್ಟಾರೆಯಾಗಿ, ಈ ಸುಧಾರಣೆಗಳು ಭಾರತವನ್ನು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ತೆರಿಗೆ ಆಡಳಿತದತ್ತ ಕೊಂಡೊಯ್ಯುತ್ತವೆ.</p> .<h2><strong>ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ:</strong></h2>. <p>• ₹100 ಕೋಟಿವರೆಗಿನ ವಹಿವಾಟು ನಡೆಸುವ ಸಂಸ್ಥೆಗಳನ್ನು ಒಳಗೊಳ್ಳುವಂತೆ 'ಸಣ್ಣ ಕಂಪನಿಗಳ' ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ.</p><p>• ಇದರಿಂದ ಸಾವಿರಾರು ಕಂಪನಿಗಳಿಗೆ ನಿಯಮ ಪಾಲನೆಯ ಹೊರೆ ಮತ್ತು ಸಂಬಂಧಿತ ವೆಚ್ಚಗಳು ಕಡಿಮೆಯಾಗಲಿವೆ.</p>. <h2><strong>ಶೇ 100ರ ಎಫ್ಡಿಐ ವಿಮಾ ಸುಧಾರಣೆ:</strong></h2><p>• ಭಾರತೀಯ ವಿಮಾ ಕಂಪನಿಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ.</p><p>• ಇದು ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಜನರಿಗೆ ಹೆಚ್ಚಿನ ಭದ್ರತೆ ಒದಗಿಸಲು ಉತ್ತೇಜನ ನೀಡಲಿದೆ.</p><p>• ಹೆಚ್ಚಿದ ಸ್ಪರ್ಧೆಯ ಹೊರತಾಗಿ, ಇದು ಜನರಿಗೆ ಉತ್ತಮ ವಿಮಾ ಆಯ್ಕೆಗಳನ್ನು ಮತ್ತು ಸುಧಾರಿತ ಸೇವೆಗಳನ್ನು ಒದಗಿಸುತ್ತದೆ.</p> .<h2><strong>’ಸೆಕ್ಯೂರಿಟೀಸ್ ಮಾರುಕಟ್ಟೆ ಸುಧಾರಣೆ:</strong></h2>. <p>• ಸಂಸತ್ತಿನಲ್ಲಿ 'ಸೆಕ್ಯೂರಿಟೀಸ್ ಮಾರುಕಟ್ಟೆ ಸಂಹಿತೆ ಮಸೂದೆ'ಯನ್ನು ಮಂಡಿಸಲಾಗಿದೆ. ಇದು ಸೆಬಿಯಲ್ಲಿ (SEBI) ಆಡಳಿತದ ಮಾನದಂಡಗಳನ್ನು ಹೆಚ್ಚಿಸುತ್ತದೆ, ಹೂಡಿಕೆದಾರರ ರಕ್ಷಣೆಯನ್ನು ಬಲಪಡಿಸುತ್ತದೆ. ನಿಯಮ ಪಾಲನೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು 'ವಿಕಸಿತ ಭಾರತ'ಕ್ಕಾಗಿ ತಂತ್ರಜ್ಞಾನ ಆಧಾರಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.</p><p>• ನಿಯಮ ಪಾಲನೆ ಮತ್ತು ಇತರ ಹೆಚ್ಚುವರಿ ವೆಚ್ಚಗಳು ಕಡಿಮೆಯಾಗುವುದರಿಂದ, ಈ ಸುಧಾರಣೆಗಳು ಹೂಡಿಕೆದಾರರಿಗೆ ಉಳಿತಾಯವನ್ನು ಖಚಿತಪಡಿಸುತ್ತವೆ.</p> .<h2><strong>ಸಾಗರ ಮತ್ತು ನೀಲಿ ಆರ್ಥಿಕತೆ ಸುಧಾರಣೆಗಳು:</strong></h2>. <p>• ಸಂಸತ್ತಿನ ಮುಂಗಾರು ಅಧಿವೇಶನವೊಂದರಲ್ಲೇ ಐದು ಐತಿಹಾಸಿಕ ಕಡಲ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಬಿಲ್ಸ್ ಆಫ್ ಲೇಡಿಂಗ್ ಆಕ್ಟ್ 2025; ಸಮುದ್ರದ ಮೂಲಕ ಸರಕು ಸಾಗಣೆ ಮಸೂದೆ 2025; ಕರಾವಳಿ ಹಡಗು ಮಸೂದೆ 2025; ಮರ್ಚೆಂಟ್ ಶಿಪ್ಪಿಂಗ್ ಮಸೂದೆ 2025; ಮತ್ತು ಭಾರತೀಯ ಬಂದರುಗಳ ಮಸೂದೆ 2025.</p><p>• ಈ ಸುಧಾರಣೆಗಳು ದಾಖಲೆಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ, ವಿವಾದಗಳ ಪರಿಹಾರವನ್ನು ಸುಲಭಗೊಳಿಸುತ್ತವೆ ಮತ್ತು ಲಾಜಿಸ್ಟಿಕ್ಸ್ (ಸಾಗಣೆ) ವೆಚ್ಚವನ್ನು ಕಡಿಮೆ ಮಾಡುತ್ತವೆ.</p><p>• 1908, 1925 ಮತ್ತು 1958ರ ಹಳೆಯ ಕಾಯ್ದೆಗಳನ್ನು ಸಹ ರದ್ದುಗೊಳಿಸಿ ಹೊಸತನ್ನು ತರಲಾಗಿದೆ.</p> .<h2><strong>ಜನ ವಿಶ್ವಾಸ್... ಅಪರಾಧೀಕರಣ ಯುಗದ ಅಂತ್ಯ:</strong></h2>. <p>• ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.</p><p>• 'ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ, 2025'ರ ಮೂಲಕ 71 ಕಾಯ್ದೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.</p><h2><strong>ಸುಲಭ ವ್ಯವಹಾರಕ್ಕೆ ಉತ್ತೇಜನ:</strong></h2>. <p>• ಸಿಂಥೆಟಿಕ್ ಫೈಬರ್, ನೂಲು, ಪ್ಲಾಸ್ಟಿಕ್, ಪಾಲಿಮರ್ ಮತ್ತು ಮೂಲ ಲೋಹಗಳ ವಲಯದಲ್ಲಿ ಒಟ್ಟು 22 ಗುಣಮಟ್ಟ ನಿಯಂತ್ರಣ ಆದೇಶಗಳನ್ನು (ಕ್ಯೂಸಿಒ) ರದ್ದುಗೊಳಿಸಲಾಗಿದೆ. ಹಾಗೆಯೇ ಉಕ್ಕು, ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮಿಶ್ರಲೋಹ ಮತ್ತು ಗ್ರಾಹಕ ಉತ್ಪನ್ನಗಳ ವಿಭಾಗಗಳಲ್ಲಿ 53 ಕ್ಯೂಸಿಒಗಳನ್ನು ಅಮಾನತುಗೊಳಿಸಲಾಗಿದೆ. ಇದು ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯನ್ನು ಒಳಗೊಂಡಿದೆ.</p><p>• ಇದರಿಂದ ಭಾರತದ ಸಿದ್ಧ ಉಡುಪುಗಳ ರಫ್ತಿನ ಪಾಲು ಹೆಚ್ಚಲಿದೆ; ಪಾದರಕ್ಷೆ ಮತ್ತು ಆಟೋಮೊಬೈಲ್ನಂತಹ ವೈವಿಧ್ಯಮಯ ಕೈಗಾರಿಕೆಗಳಲ್ಲಿ ಉತ್ಪಾದನಾ ವೆಚ್ಚ ತಗ್ಗಲಿದೆ; ಹಾಗೂ ಎಲೆಕ್ಟ್ರಾನಿಕ್ಸ್, ಬೈಸಿಕಲ್ ಮತ್ತು ಆಟೋಮೋಟಿವ್ ಉತ್ಪನ್ನಗಳ ಬೆಲೆಗಳು ದೇಶೀಯ ಗ್ರಾಹಕರಿಗೆ ಕಡಿಮೆಯಾಗುವುದನ್ನು ಇದು ಖಚಿತಪಡಿಸುತ್ತದೆ.</p><h2><strong>ಐತಿಹಾಸಿಕ ಕಾರ್ಮಿಕ ಸುಧಾರಣೆಗಳು:</strong></h2>. <p>• ಕಾರ್ಮಿಕ ಕಾನೂನುಗಳನ್ನು ಪುನರ್ ರೂಪಿಸಲಾಗಿದ್ದು,29 ಚದುರಿ ಹೋಗಿದ್ದ ಕಾನೂನುಗಳನ್ನು ಒಗ್ಗೂಡಿಸಿ ನಾಲ್ಕು ಆಧುನಿಕ ಸಂಹಿತೆಗಳನ್ನಾಗಿ ರೂಪಿಸಲಾಗಿದೆ.</p><p>• ವ್ಯವಹಾರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಜೊತೆಗೆ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕಾರ್ಮಿಕ ಚೌಕಟ್ಟನ್ನು ಭಾರತ ಸೃಷ್ಟಿಸಿದೆ.</p><p>• ಈ ಸುಧಾರಣೆಗಳು ನ್ಯಾಯಯುತ ವೇತನ, ಸಕಾಲಿಕ ವೇತನ ಪಾವತಿ, ಸುಗಮ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸಿವೆ.</p><p>• ಇವು ಉದ್ಯೋಗಿಗಳ ವಲಯದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತವೆ.</p><p>• ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಇಎಸ್ಐಸಿ ಮತ್ತು ಇಪಿಎಫ್ಒ ವ್ಯಾಪ್ತಿಗೆ ತರಲಾಗಿದ್ದು, ಔಪಚಾರಿಕ ಉದ್ಯೋಗಿ ವಲಯದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.</p><h2> <strong>ಭಾರತೀಯ ಉತ್ಪನ್ನಗಳಿಗೆ ವೈವಿಧ್ಯಮಯ ಮತ್ತು ವಿಸ್ತೃತ ಮಾರುಕಟ್ಟೆಗಳು:</strong></h2>. <p>• ನ್ಯೂಜಿಲೆಂಡ್, ಓಮನ್ ಮತ್ತು ಬ್ರಿಟನ್ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇವು ಹೂಡಿಕೆಯನ್ನು ಹೆಚ್ಚಿಸಲಿವೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿವೆ ಮತ್ತು ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಲಿವೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ನಂಬಿಕಸ್ಥ ಮತ್ತು ಸ್ಪರ್ಧಾತ್ಮಕ ಪಾಲುದಾರನಾಗಿ ಇವು ಬಲಪಡಿಸುತ್ತವೆ.</p><p>• ಸ್ವಿಟ್ಜರ್ಲೆಂಡ್, ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್ಸ್ಟೈನ್ ದೇಶಗಳನ್ನು ಒಳಗೊಂಡಿರುವ' ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್' ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬಂದಿದೆ. ಇದು ಅಭಿವೃದ್ಧಿ ಹೊಂದಿದ ಯುರೋಪಿಯನ್ ಆರ್ಥಿಕತೆಗಳೊಂದಿಗೆ ಭಾರತದ ಮೊದಲ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.</p><p><strong>ಪರಮಾಣು ಇಂಧನ ಸುಧಾರಣೆಗಳು:</strong></p><p>• <strong>ಶಾಂತಿ (SHANTI)</strong> ಕಾಯ್ದೆಯು ಭಾರತದ ಶುದ್ಧ ಇಂಧನ ಮತ್ತು ತಂತ್ರಜ್ಞಾನದ ಪಯಣದಲ್ಲಿ ಒಂದು ಪರಿವರ್ತನೆಯ ಹೆಜ್ಜೆಯಾಗಿದೆ.</p><p>• ಇದು ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದ ಸುರಕ್ಷಿತ, ಸುಭದ್ರ ಮತ್ತು ಜವಾಬ್ದಾರಿಯುತ ವಿಸ್ತರಣೆಗೆ ಬಲವಾದ ಚೌಕಟ್ಟನ್ನು ಖಚಿತಪಡಿಸುತ್ತದೆ.</p><p>• ಡೇಟಾ ಸೆಂಟರ್ ಗಳು, ಸುಧಾರಿತ ಉತ್ಪಾದನೆ, ಗ್ರೀನ್ ಹೈಡ್ರೋಜನ್ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳಿಗೆ ವಿದ್ಯುತ್ ನೀಡುವ ಮೂಲಕ, ಕೃತಕ ಬುದ್ಧಿಮತ್ತೆ ಯುಗದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಇದು ಭಾರತವನ್ನು ಶಕ್ತಗೊಳಿಸುತ್ತದೆ.</p><p>• ಆರೋಗ್ಯ ರಕ್ಷಣೆ, ಕೃಷಿ, ಆಹಾರ ಭದ್ರತೆ,ಜಲ ನಿರ್ವಹಣೆ, ಕೈಗಾರಿಕೆ, ಸಂಶೋಧನೆ ಮತ್ತು ಪರಿಸರ ಸುಸ್ಥಿರತೆಯಲ್ಲಿ ಪರಮಾಣು ತಂತ್ರಜ್ಞಾನಗಳ ಶಾಂತಿಯುತ ಅನ್ವಯವನ್ನು ಇದು ಉತ್ತೇಜಿಸುತ್ತದೆ, ಇದು ಎಲ್ಲರನ್ನು ಒಳಗೊಂಡ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟಕ್ಕೆ ಬೆಂಬಲ ನೀಡುತ್ತದೆ.</p><p>• ಖಾಸಗಿ ವಲಯದ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಹಾದಿಗಳನ್ನು ತೆರೆಯುತ್ತದೆ. ಮುಂಚೂಣಿ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಇಂಧನ ಪರಿಹಾರಗಳಲ್ಲಿ ಭಾರತದ ಯುವಜನರು ಮುನ್ನಡೆ ಸಾಧಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ.</p><p>ಹೂಡಿಕೆದಾರರು, ನಾವೀನ್ಯಕಾರರು ಮತ್ತು ಸಂಸ್ಥೆಗಳು ಭಾರತದೊಂದಿಗೆ ಕೈಜೋಡಿಸಲು, ಹೂಡಿಕೆಮಾಡಲು, ಹೊಸತನವನ್ನು ಅನ್ವೇಷಿಸಲು ಹಾಗೂ ಸ್ವಚ್ಛ, ಸ್ಥಿತಿಸ್ಥಾಪಕ ಮತ್ತು ಭವಿಷ್ಯದ ಸವಾಲುಗಳಿಗೆಸನ್ನದ್ಧವಾದ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.</p><h2><strong>ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಒಂದು ಮೈಲಿಗಲ್ಲು ಸುಧಾರಣೆ: </strong></h2><p>• <strong>ವಿಕಸಿತ ಭಾರತ- ಜಿ ರಾಮ್ ಜಿ ಕಾಯ್ದೆ, 2025:</strong> ಉದ್ಯೋಗ ಖಾತ್ರಿ ಚೌಕಟ್ಟಿನ ಅಡಿಯಲ್ಲಿ ಉದ್ಯೋಗ ಖಾತರಿಯನ್ನು 100 ದಿನಗಳಿಂದ <strong>125 ದಿನಗಳಿಗೆ</strong> ಹೆಚ್ಚಿಸಲಾಗಿದೆ.</p><p>• ಇದು ಹಳ್ಳಿಯ ಮೂಲಸೌಕರ್ಯ ಮತ್ತು ಜೀವನೋಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಹೂಡಿಕೆ ಹಾಗೂ ವೆಚ್ಚಕ್ಕೆ ಕಾರಣವಾಗಲಿದೆ.</p><p>• ಗ್ರಾಮೀಣ ಕೆಲಸವನ್ನು ಹೆಚ್ಚಿನ ಆದಾಯ ಮತ್ತು ಉತ್ತಮ ಆಸ್ತಿಗಳನ್ನು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವನ್ನಾಗಿ ಮಾಡುವುದು ಇದರ ಗುರಿಯಾಗಿದೆ.</p><h2><strong>ಶಿಕ್ಷಣ ಸುಧಾರಣೆಗಳು: </strong></h2><p>• ಸಂಸತ್ತಿನಲ್ಲಿ ಈ ಸಂಬಂಧಿತ ಮಸೂದೆಯನ್ನು ಮಂಡಿಸಲಾಗಿದೆ.</p><p>• ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಲಾಗುವುದು.</p><p>• ಯುಜಿಸಿ, ಎಐಸಿಟಿಇ, ಎನ್ಸಿಟಿಇಯಂತಹ ಒಂದಕ್ಕೊಂದು ಸಂಬಂಧಿಸಿದ ವಿವಿಧ ಸಂಸ್ಥೆಗಳ ಬದಲಿಗೆ <strong>'ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ'</strong> ಎಂಬ ಒಂದೇ ಸಂಸ್ಥೆಯನ್ನು ತರಲಾಗುವುದು.</p><p>• ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಬಲಪಡಿಸಲಾಗುವುದು ಮತ್ತು ನಾವೀನ್ಯತೆ ಹಾಗೂ ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು.</p><p>2025ರ ಸುಧಾರಣೆಗಳ ಮಹತ್ವವು ಕೇವಲ ಅವುಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಅವುಗಳ ಹಿಂದಿರುವ ಮೂಲತತ್ವದಲ್ಲೂ ಅಡಗಿದೆ. ಆಧುನಿಕ ಪ್ರಜಾಪ್ರಭುತ್ವದ ನೈಜ ಆಶಯದಂತೆ, ನಮ್ಮ ಸರ್ಕಾರವು ನಿಯಂತ್ರಣಕ್ಕಿಂತ ಸಹಯೋಗಕ್ಕೆ ಮತ್ತು ನಿರ್ಬಂಧಗಳಿಗಿಂತ ಸೌಲಭ್ಯ ಒದಗಿಸುವುದಕ್ಕೆಹೆಚ್ಚಿನ ಆದ್ಯತೆ ನೀಡಿದೆ.</p><p>ಸಣ್ಣ ಉದ್ಯಮಿಗಳು, ಯುವ ವೃತ್ತಿಪರರು, ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ವಾಸ್ತವಿಕ ಪರಿಸ್ಥಿತಿಗಳನ್ನು ಗುರುತಿಸಿ, ಅತ್ಯಂತ ಸಹಾನುಭೂತಿಯಿಂದ ಈ ಸುಧಾರಣೆಗಳನ್ನು ರೂಪಿಸಲಾಗಿದೆ. ಇವು ಸಮಾಲೋಚನೆಗಳ ಮೂಲಕ ರೂಪುಗೊಂಡಿವೆ, ದತ್ತಾಂಶಗಳ ಆಧಾರದಮೇಲೆ ಮಾರ್ಗದರ್ಶಿಸಲ್ಪಟ್ಟಿವೆ ಮತ್ತು ಭಾರತದ ಸಾಂವಿಧಾನಿಕ ಮೌಲ್ಯಗಳಲ್ಲಿ ಅಚಲನಂಬಿಕೆಯನ್ನು ಹೊಂದಿವೆ. ನಿಯಂತ್ರಣಾಧಾರಿತ ಆರ್ಥಿಕತೆಯಿಂದ ಹೊರಬಂದು, ಪ್ರಜೆಯನ್ನೇ ಕೇಂದ್ರಬಿಂದುವಾಗಿರಿಸಿಕೊಂಡಿರುವ 'ವಿಶ್ವಾಸ ಆಧಾರಿತ' ವ್ಯವಸ್ಥೆಯತ್ತ ಸಾಗಲು ನಾವು ದಶಕದಿಂದನಡೆಸುತ್ತಿರುವ ಪ್ರಯತ್ನಗಳಿಗೆ ಈ ಸುಧಾರಣೆಗಳು ಹೊಸ ವೇಗವನ್ನು ನೀಡಿವೆ.</p><p>ಈ ಸುಧಾರಣೆಗಳು ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿ ಹೊಂದಿವೆ. 'ವಿಕಸಿತ ಭಾರತ' ನಿರ್ಮಾಣವೇ ನಮ್ಮ ಅಭಿವೃದ್ಧಿ ಪಥದ ಧ್ರುವತಾರೆ. ಮುಂಬರುವ ವರ್ಷಗಳಲ್ಲೂನಾವು ಸುಧಾರಣಾ ಕಾರ್ಯಸೂಚಿಯನ್ನು ಮುಂದುವರೆಸಲಿದ್ದೇವೆ.</p><p>ಭಾರತದ ಈ ಬೆಳವಣಿಗೆಯ ಪಯಣದೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆಂದು ನಾನು ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲರನ್ನೂ ವಿನಂತಿಸುತ್ತೇನೆ.</p><p>ಭಾರತದ ಮೇಲೆ ಸದಾ ವಿಶ್ವಾಸವಿಡಿ ಮತ್ತು ನಮ್ಮ ಜನರ ಶಕ್ತಿಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿ!</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತವು ಇಂದು ಜಾಗತಿಕ ಗಮನದ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. ಇದು ನಮ್ಮ ಜನರ ನವೀನ ಉತ್ಸಾಹದ ಫಲವಾಗಿದೆ. ಇಂದು ಜಗತ್ತು ಭಾರತವನ್ನು ಭರವಸೆ ಮತ್ತು ವಿಶ್ವಾಸದಿಂದ ನೋಡುತ್ತಿದೆ. ವಿವಿಧ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮತ್ತು ರಾಷ್ಟ್ರದ ಬೆಳವಣಿಗೆಯ ಸಾಮರ್ಥ್ಯವನ್ನು ವಿಸ್ತರಿಸುವ ಮುಂದಿನ ಪೀಳಿಗೆಯ ಸುಧಾರಣೆಗಳ ಮೂಲಕ ಪ್ರಗತಿಯ ವೇಗವನ್ನು ಹೆಚ್ಚಿಸಿರುವ ರೀತಿಯನ್ನು ಜಗತ್ತು ಶ್ಲಾಘಿಸುತ್ತಿದೆ. </p><p>ನಾನು ಅನೇಕರಿಗೆ ಹೇಳುವಂತೆ, ಭಾರತವು ಈಗ <strong>'ಸುಧಾರಣಾ ಎಕ್ಸ್ ಪ್ರೆಸ್' (Reform Express)</strong>ನಲ್ಲಿ ಪಯಣಿಸುತ್ತಿದೆ. </p><p>ಈ ಸುಧಾರಣಾ ಎಕ್ಸ್ ಪ್ರೆಸ್ನ ಪ್ರಾಥಮಿಕ ಎಂಜಿನ್ ಎಂದರೆ ಭಾರತದ ಜನಸಂಖ್ಯಾ ವೈವಿಧ್ಯತೆ, ನಮ್ಮ ಯುವ ಪೀಳಿಗೆ ಮತ್ತು ನಮ್ಮ ಜನರ ಅದಮ್ಯ ಚೇತನ. </p><p>ಕಳೆದ 11 ವರ್ಷಗಳಲ್ಲಿ ನಾವು ಕ್ರಮಿಸಿದ ಹಾದಿಯಲ್ಲಿ, ಸುಧಾರಣೆಗಳನ್ನೇ ಒಂದು ನಿರಂತರ' ರಾಷ್ಟ್ರೀಯ ಸಂಕಲ್ಪ'ವನ್ನಾಗಿ ಕೇಂದ್ರೀಕರಿಸಿದ ವರ್ಷವಾಗಿ, 2025 ಭಾರತದ ಇತಿಹಾಸದಲ್ಲಿ ಚಿರಸ್ಥಾಯಿಯಾಗಲಿದೆ. ನಾವು ಸಂಸ್ಥೆಗಳನ್ನು ಆಧುನೀಕರಿಸಿದ್ದೇವೆ, ಆಡಳಿತ ಪ್ರಕ್ರಿಯೆಗಳನ್ನು ಸರಳಗೊಳಿಸಿದ್ದೇವೆ ಮತ್ತು ದೀರ್ಘಕಾಲೀನ ಹಾಗೂ ಸರ್ವವ್ಯಾಪಿ ಬೆಳವಣಿಗೆಗೆ ಪೂರಕವಾದ ಭದ್ರವಾದ ತಳಹದಿಯನ್ನು ನಿರ್ಮಿಸಿದ್ದೇವೆ.</p><p>ನಾವು ಉನ್ನತ ಮಹತ್ವಾಕಾಂಕ್ಷೆ, ವೇಗದ ಅನುಷ್ಠಾನ ಮತ್ತು ದೀರ್ಘವಾದ ಪರಿವರ್ತನೆಯೊಂದಿಗೆ ನಿರ್ಣಾಯಕವಾಗಿ ಮುನ್ನಡೆದಿದ್ದೇವೆ. ಈ ಸುಧಾರಣೆಗಳು ನಾಗರಿಕರು ಗೌರವದಿಂದ ಬದುಕಲು, ಉದ್ಯಮಿಗಳು ಆತ್ಮವಿಶ್ವಾಸದಿಂದ ಆವಿಷ್ಕಾರ ನಡೆಸಲು ಮತ್ತು ಸಂಸ್ಥೆಗಳು ಸ್ಪಷ್ಟತೆ ಹಾಗೂ ನಂಬಿಕೆಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿವೆ. </p><p>ಕೈಗೊಂಡ ಕೆಲವು ಪ್ರಮುಖ ಸುಧಾರಣೆಗಳ ಉದಾಹರಣೆಗಳನ್ನು ನಾನು ಇಲ್ಲಿ ಉಲ್ಲೇಖಿಸುತ್ತೇನೆ:</p>. <h2><strong>ಜಿಎಸ್ಟಿ ಸುಧಾರಣೆ:</strong></h2><p>• ಶೇ. 5 ಮತ್ತು ಶೇ.18ರ ಎರಡು ಹಂತದ ಸ್ಪಷ್ಟ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.</p><p>• ಕುಟುಂಬಗಳು, ಎಂಎಸ್ಎಂಇಗಳು, ರೈತರು ಮತ್ತು ಕಾರ್ಮಿಕ ಪ್ರಧಾನ ವಲಯಗಳ ಮೇಲಿನ ಹೊರೆ ತಗ್ಗಿಸಲಾಗಿದೆ.</p><p>• ವಿವಾದಗಳನ್ನು ಕಡಿಮೆ ಮಾಡುವುದು ಮತ್ತು ನಿಯಮಗಳ ಪಾಲನೆಯನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ.</p><p>• ಈ ಸುಧಾರಣೆಯು ಗ್ರಾಹಕರ ಉತ್ಸಾಹ ಮತ್ತು ಬೇಡಿಕೆಯನ್ನು ಹೆಚ್ಚಿಸಿದೆ. ಹಬ್ಬದ ದಿನಗಳಲ್ಲಿ ಮಾರಾಟವು ಭಾರಿ ಏರಿಕೆ ಕಂಡಿದೆ.</p> .<h2><strong>ಮಧ್ಯಮ ವರ್ಗದವರಿಗೆ ಅಭೂತಪೂರ್ವ ಪರಿಹಾರ:</strong></h2><p>• ಮೊದಲ ಬಾರಿಗೆ, ವಾರ್ಷಿಕ ₹12 ಲಕ್ಷದವರೆಗೆ ಆದಾಯ ಗಳಿಸುವ ವ್ಯಕ್ತಿಗಳು ಯಾವುದೇ ಆದಾಯ ತೆರಿಗೆ ಪಾವತಿಸಬೇಕಿಲ್ಲ.</p><p>• 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯ ಬದಲಿಗೆ ಆಧುನಿಕ ಮತ್ತು ಸರಳವಾದ' ಆದಾಯ ತೆರಿಗೆ ಕಾಯ್ದೆ, 2025' ಅನ್ನು ತರಲಾಗಿದೆ.</p><p>• ಒಟ್ಟಾರೆಯಾಗಿ, ಈ ಸುಧಾರಣೆಗಳು ಭಾರತವನ್ನು ಪಾರದರ್ಶಕ ಮತ್ತು ತಂತ್ರಜ್ಞಾನ ಆಧಾರಿತ ತೆರಿಗೆ ಆಡಳಿತದತ್ತ ಕೊಂಡೊಯ್ಯುತ್ತವೆ.</p> .<h2><strong>ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಉತ್ತೇಜನ:</strong></h2>. <p>• ₹100 ಕೋಟಿವರೆಗಿನ ವಹಿವಾಟು ನಡೆಸುವ ಸಂಸ್ಥೆಗಳನ್ನು ಒಳಗೊಳ್ಳುವಂತೆ 'ಸಣ್ಣ ಕಂಪನಿಗಳ' ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ.</p><p>• ಇದರಿಂದ ಸಾವಿರಾರು ಕಂಪನಿಗಳಿಗೆ ನಿಯಮ ಪಾಲನೆಯ ಹೊರೆ ಮತ್ತು ಸಂಬಂಧಿತ ವೆಚ್ಚಗಳು ಕಡಿಮೆಯಾಗಲಿವೆ.</p>. <h2><strong>ಶೇ 100ರ ಎಫ್ಡಿಐ ವಿಮಾ ಸುಧಾರಣೆ:</strong></h2><p>• ಭಾರತೀಯ ವಿಮಾ ಕಂಪನಿಗಳಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡಲಾಗಿದೆ.</p><p>• ಇದು ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಜನರಿಗೆ ಹೆಚ್ಚಿನ ಭದ್ರತೆ ಒದಗಿಸಲು ಉತ್ತೇಜನ ನೀಡಲಿದೆ.</p><p>• ಹೆಚ್ಚಿದ ಸ್ಪರ್ಧೆಯ ಹೊರತಾಗಿ, ಇದು ಜನರಿಗೆ ಉತ್ತಮ ವಿಮಾ ಆಯ್ಕೆಗಳನ್ನು ಮತ್ತು ಸುಧಾರಿತ ಸೇವೆಗಳನ್ನು ಒದಗಿಸುತ್ತದೆ.</p> .<h2><strong>’ಸೆಕ್ಯೂರಿಟೀಸ್ ಮಾರುಕಟ್ಟೆ ಸುಧಾರಣೆ:</strong></h2>. <p>• ಸಂಸತ್ತಿನಲ್ಲಿ 'ಸೆಕ್ಯೂರಿಟೀಸ್ ಮಾರುಕಟ್ಟೆ ಸಂಹಿತೆ ಮಸೂದೆ'ಯನ್ನು ಮಂಡಿಸಲಾಗಿದೆ. ಇದು ಸೆಬಿಯಲ್ಲಿ (SEBI) ಆಡಳಿತದ ಮಾನದಂಡಗಳನ್ನು ಹೆಚ್ಚಿಸುತ್ತದೆ, ಹೂಡಿಕೆದಾರರ ರಕ್ಷಣೆಯನ್ನು ಬಲಪಡಿಸುತ್ತದೆ. ನಿಯಮ ಪಾಲನೆಯ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು 'ವಿಕಸಿತ ಭಾರತ'ಕ್ಕಾಗಿ ತಂತ್ರಜ್ಞಾನ ಆಧಾರಿತ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.</p><p>• ನಿಯಮ ಪಾಲನೆ ಮತ್ತು ಇತರ ಹೆಚ್ಚುವರಿ ವೆಚ್ಚಗಳು ಕಡಿಮೆಯಾಗುವುದರಿಂದ, ಈ ಸುಧಾರಣೆಗಳು ಹೂಡಿಕೆದಾರರಿಗೆ ಉಳಿತಾಯವನ್ನು ಖಚಿತಪಡಿಸುತ್ತವೆ.</p> .<h2><strong>ಸಾಗರ ಮತ್ತು ನೀಲಿ ಆರ್ಥಿಕತೆ ಸುಧಾರಣೆಗಳು:</strong></h2>. <p>• ಸಂಸತ್ತಿನ ಮುಂಗಾರು ಅಧಿವೇಶನವೊಂದರಲ್ಲೇ ಐದು ಐತಿಹಾಸಿಕ ಕಡಲ ಕಾನೂನುಗಳನ್ನು ಅಂಗೀಕರಿಸಲಾಗಿದೆ. ಬಿಲ್ಸ್ ಆಫ್ ಲೇಡಿಂಗ್ ಆಕ್ಟ್ 2025; ಸಮುದ್ರದ ಮೂಲಕ ಸರಕು ಸಾಗಣೆ ಮಸೂದೆ 2025; ಕರಾವಳಿ ಹಡಗು ಮಸೂದೆ 2025; ಮರ್ಚೆಂಟ್ ಶಿಪ್ಪಿಂಗ್ ಮಸೂದೆ 2025; ಮತ್ತು ಭಾರತೀಯ ಬಂದರುಗಳ ಮಸೂದೆ 2025.</p><p>• ಈ ಸುಧಾರಣೆಗಳು ದಾಖಲೆಗಳ ಪ್ರಕ್ರಿಯೆಯನ್ನು ಸರಳಗೊಳಿಸುತ್ತವೆ, ವಿವಾದಗಳ ಪರಿಹಾರವನ್ನು ಸುಲಭಗೊಳಿಸುತ್ತವೆ ಮತ್ತು ಲಾಜಿಸ್ಟಿಕ್ಸ್ (ಸಾಗಣೆ) ವೆಚ್ಚವನ್ನು ಕಡಿಮೆ ಮಾಡುತ್ತವೆ.</p><p>• 1908, 1925 ಮತ್ತು 1958ರ ಹಳೆಯ ಕಾಯ್ದೆಗಳನ್ನು ಸಹ ರದ್ದುಗೊಳಿಸಿ ಹೊಸತನ್ನು ತರಲಾಗಿದೆ.</p> .<h2><strong>ಜನ ವಿಶ್ವಾಸ್... ಅಪರಾಧೀಕರಣ ಯುಗದ ಅಂತ್ಯ:</strong></h2>. <p>• ನೂರಾರು ಹಳೆಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ.</p><p>• 'ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿ ಮಸೂದೆ, 2025'ರ ಮೂಲಕ 71 ಕಾಯ್ದೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.</p><h2><strong>ಸುಲಭ ವ್ಯವಹಾರಕ್ಕೆ ಉತ್ತೇಜನ:</strong></h2>. <p>• ಸಿಂಥೆಟಿಕ್ ಫೈಬರ್, ನೂಲು, ಪ್ಲಾಸ್ಟಿಕ್, ಪಾಲಿಮರ್ ಮತ್ತು ಮೂಲ ಲೋಹಗಳ ವಲಯದಲ್ಲಿ ಒಟ್ಟು 22 ಗುಣಮಟ್ಟ ನಿಯಂತ್ರಣ ಆದೇಶಗಳನ್ನು (ಕ್ಯೂಸಿಒ) ರದ್ದುಗೊಳಿಸಲಾಗಿದೆ. ಹಾಗೆಯೇ ಉಕ್ಕು, ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಮಿಶ್ರಲೋಹ ಮತ್ತು ಗ್ರಾಹಕ ಉತ್ಪನ್ನಗಳ ವಿಭಾಗಗಳಲ್ಲಿ 53 ಕ್ಯೂಸಿಒಗಳನ್ನು ಅಮಾನತುಗೊಳಿಸಲಾಗಿದೆ. ಇದು ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ವಸ್ತುಗಳ ವಿಶಾಲ ಶ್ರೇಣಿಯನ್ನು ಒಳಗೊಂಡಿದೆ.</p><p>• ಇದರಿಂದ ಭಾರತದ ಸಿದ್ಧ ಉಡುಪುಗಳ ರಫ್ತಿನ ಪಾಲು ಹೆಚ್ಚಲಿದೆ; ಪಾದರಕ್ಷೆ ಮತ್ತು ಆಟೋಮೊಬೈಲ್ನಂತಹ ವೈವಿಧ್ಯಮಯ ಕೈಗಾರಿಕೆಗಳಲ್ಲಿ ಉತ್ಪಾದನಾ ವೆಚ್ಚ ತಗ್ಗಲಿದೆ; ಹಾಗೂ ಎಲೆಕ್ಟ್ರಾನಿಕ್ಸ್, ಬೈಸಿಕಲ್ ಮತ್ತು ಆಟೋಮೋಟಿವ್ ಉತ್ಪನ್ನಗಳ ಬೆಲೆಗಳು ದೇಶೀಯ ಗ್ರಾಹಕರಿಗೆ ಕಡಿಮೆಯಾಗುವುದನ್ನು ಇದು ಖಚಿತಪಡಿಸುತ್ತದೆ.</p><h2><strong>ಐತಿಹಾಸಿಕ ಕಾರ್ಮಿಕ ಸುಧಾರಣೆಗಳು:</strong></h2>. <p>• ಕಾರ್ಮಿಕ ಕಾನೂನುಗಳನ್ನು ಪುನರ್ ರೂಪಿಸಲಾಗಿದ್ದು,29 ಚದುರಿ ಹೋಗಿದ್ದ ಕಾನೂನುಗಳನ್ನು ಒಗ್ಗೂಡಿಸಿ ನಾಲ್ಕು ಆಧುನಿಕ ಸಂಹಿತೆಗಳನ್ನಾಗಿ ರೂಪಿಸಲಾಗಿದೆ.</p><p>• ವ್ಯವಹಾರ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುವ ಜೊತೆಗೆ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕಾರ್ಮಿಕ ಚೌಕಟ್ಟನ್ನು ಭಾರತ ಸೃಷ್ಟಿಸಿದೆ.</p><p>• ಈ ಸುಧಾರಣೆಗಳು ನ್ಯಾಯಯುತ ವೇತನ, ಸಕಾಲಿಕ ವೇತನ ಪಾವತಿ, ಸುಗಮ ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ಸ್ಥಳಗಳ ಮೇಲೆ ಕೇಂದ್ರೀಕರಿಸಿವೆ.</p><p>• ಇವು ಉದ್ಯೋಗಿಗಳ ವಲಯದಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತವೆ.</p><p>• ಗುತ್ತಿಗೆ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರನ್ನು ಇಎಸ್ಐಸಿ ಮತ್ತು ಇಪಿಎಫ್ಒ ವ್ಯಾಪ್ತಿಗೆ ತರಲಾಗಿದ್ದು, ಔಪಚಾರಿಕ ಉದ್ಯೋಗಿ ವಲಯದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.</p><h2> <strong>ಭಾರತೀಯ ಉತ್ಪನ್ನಗಳಿಗೆ ವೈವಿಧ್ಯಮಯ ಮತ್ತು ವಿಸ್ತೃತ ಮಾರುಕಟ್ಟೆಗಳು:</strong></h2>. <p>• ನ್ಯೂಜಿಲೆಂಡ್, ಓಮನ್ ಮತ್ತು ಬ್ರಿಟನ್ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇವು ಹೂಡಿಕೆಯನ್ನು ಹೆಚ್ಚಿಸಲಿವೆ, ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲಿವೆ ಮತ್ತು ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಲಿವೆ. ಜಾಗತಿಕ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ನಂಬಿಕಸ್ಥ ಮತ್ತು ಸ್ಪರ್ಧಾತ್ಮಕ ಪಾಲುದಾರನಾಗಿ ಇವು ಬಲಪಡಿಸುತ್ತವೆ.</p><p>• ಸ್ವಿಟ್ಜರ್ಲೆಂಡ್, ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್ಸ್ಟೈನ್ ದೇಶಗಳನ್ನು ಒಳಗೊಂಡಿರುವ' ಯುರೋಪಿಯನ್ ಫ್ರೀ ಟ್ರೇಡ್ ಅಸೋಸಿಯೇಷನ್' ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದವು ಕಾರ್ಯರೂಪಕ್ಕೆ ಬಂದಿದೆ. ಇದು ಅಭಿವೃದ್ಧಿ ಹೊಂದಿದ ಯುರೋಪಿಯನ್ ಆರ್ಥಿಕತೆಗಳೊಂದಿಗೆ ಭಾರತದ ಮೊದಲ ಮುಕ್ತ ವ್ಯಾಪಾರ ಒಪ್ಪಂದವಾಗಿದೆ.</p><p><strong>ಪರಮಾಣು ಇಂಧನ ಸುಧಾರಣೆಗಳು:</strong></p><p>• <strong>ಶಾಂತಿ (SHANTI)</strong> ಕಾಯ್ದೆಯು ಭಾರತದ ಶುದ್ಧ ಇಂಧನ ಮತ್ತು ತಂತ್ರಜ್ಞಾನದ ಪಯಣದಲ್ಲಿ ಒಂದು ಪರಿವರ್ತನೆಯ ಹೆಜ್ಜೆಯಾಗಿದೆ.</p><p>• ಇದು ಪರಮಾಣು ವಿಜ್ಞಾನ ಮತ್ತು ತಂತ್ರಜ್ಞಾನದ ಸುರಕ್ಷಿತ, ಸುಭದ್ರ ಮತ್ತು ಜವಾಬ್ದಾರಿಯುತ ವಿಸ್ತರಣೆಗೆ ಬಲವಾದ ಚೌಕಟ್ಟನ್ನು ಖಚಿತಪಡಿಸುತ್ತದೆ.</p><p>• ಡೇಟಾ ಸೆಂಟರ್ ಗಳು, ಸುಧಾರಿತ ಉತ್ಪಾದನೆ, ಗ್ರೀನ್ ಹೈಡ್ರೋಜನ್ ಮತ್ತು ಉನ್ನತ ತಂತ್ರಜ್ಞಾನದ ಕೈಗಾರಿಕೆಗಳಿಗೆ ವಿದ್ಯುತ್ ನೀಡುವ ಮೂಲಕ, ಕೃತಕ ಬುದ್ಧಿಮತ್ತೆ ಯುಗದ ಹೆಚ್ಚುತ್ತಿರುವ ಇಂಧನ ಬೇಡಿಕೆಗಳನ್ನು ಪೂರೈಸಲು ಇದು ಭಾರತವನ್ನು ಶಕ್ತಗೊಳಿಸುತ್ತದೆ.</p><p>• ಆರೋಗ್ಯ ರಕ್ಷಣೆ, ಕೃಷಿ, ಆಹಾರ ಭದ್ರತೆ,ಜಲ ನಿರ್ವಹಣೆ, ಕೈಗಾರಿಕೆ, ಸಂಶೋಧನೆ ಮತ್ತು ಪರಿಸರ ಸುಸ್ಥಿರತೆಯಲ್ಲಿ ಪರಮಾಣು ತಂತ್ರಜ್ಞಾನಗಳ ಶಾಂತಿಯುತ ಅನ್ವಯವನ್ನು ಇದು ಉತ್ತೇಜಿಸುತ್ತದೆ, ಇದು ಎಲ್ಲರನ್ನು ಒಳಗೊಂಡ ಬೆಳವಣಿಗೆ ಮತ್ತು ಸುಧಾರಿತ ಜೀವನಮಟ್ಟಕ್ಕೆ ಬೆಂಬಲ ನೀಡುತ್ತದೆ.</p><p>• ಖಾಸಗಿ ವಲಯದ ಭಾಗವಹಿಸುವಿಕೆ, ನಾವೀನ್ಯತೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಹೊಸ ಹಾದಿಗಳನ್ನು ತೆರೆಯುತ್ತದೆ. ಮುಂಚೂಣಿ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಇಂಧನ ಪರಿಹಾರಗಳಲ್ಲಿ ಭಾರತದ ಯುವಜನರು ಮುನ್ನಡೆ ಸಾಧಿಸಲು ಅವಕಾಶಗಳನ್ನು ಸೃಷ್ಟಿಸುತ್ತದೆ.</p><p>ಹೂಡಿಕೆದಾರರು, ನಾವೀನ್ಯಕಾರರು ಮತ್ತು ಸಂಸ್ಥೆಗಳು ಭಾರತದೊಂದಿಗೆ ಕೈಜೋಡಿಸಲು, ಹೂಡಿಕೆಮಾಡಲು, ಹೊಸತನವನ್ನು ಅನ್ವೇಷಿಸಲು ಹಾಗೂ ಸ್ವಚ್ಛ, ಸ್ಥಿತಿಸ್ಥಾಪಕ ಮತ್ತು ಭವಿಷ್ಯದ ಸವಾಲುಗಳಿಗೆಸನ್ನದ್ಧವಾದ ಇಂಧನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಇದು ಅತ್ಯಂತ ಸೂಕ್ತ ಸಮಯವಾಗಿದೆ.</p><h2><strong>ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಒಂದು ಮೈಲಿಗಲ್ಲು ಸುಧಾರಣೆ: </strong></h2><p>• <strong>ವಿಕಸಿತ ಭಾರತ- ಜಿ ರಾಮ್ ಜಿ ಕಾಯ್ದೆ, 2025:</strong> ಉದ್ಯೋಗ ಖಾತ್ರಿ ಚೌಕಟ್ಟಿನ ಅಡಿಯಲ್ಲಿ ಉದ್ಯೋಗ ಖಾತರಿಯನ್ನು 100 ದಿನಗಳಿಂದ <strong>125 ದಿನಗಳಿಗೆ</strong> ಹೆಚ್ಚಿಸಲಾಗಿದೆ.</p><p>• ಇದು ಹಳ್ಳಿಯ ಮೂಲಸೌಕರ್ಯ ಮತ್ತು ಜೀವನೋಪಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಹೂಡಿಕೆ ಹಾಗೂ ವೆಚ್ಚಕ್ಕೆ ಕಾರಣವಾಗಲಿದೆ.</p><p>• ಗ್ರಾಮೀಣ ಕೆಲಸವನ್ನು ಹೆಚ್ಚಿನ ಆದಾಯ ಮತ್ತು ಉತ್ತಮ ಆಸ್ತಿಗಳನ್ನು ಖಚಿತಪಡಿಸಿಕೊಳ್ಳುವ ಒಂದು ಮಾರ್ಗವನ್ನಾಗಿ ಮಾಡುವುದು ಇದರ ಗುರಿಯಾಗಿದೆ.</p><h2><strong>ಶಿಕ್ಷಣ ಸುಧಾರಣೆಗಳು: </strong></h2><p>• ಸಂಸತ್ತಿನಲ್ಲಿ ಈ ಸಂಬಂಧಿತ ಮಸೂದೆಯನ್ನು ಮಂಡಿಸಲಾಗಿದೆ.</p><p>• ಏಕೀಕೃತ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯನ್ನು ಸ್ಥಾಪಿಸಲಾಗುವುದು.</p><p>• ಯುಜಿಸಿ, ಎಐಸಿಟಿಇ, ಎನ್ಸಿಟಿಇಯಂತಹ ಒಂದಕ್ಕೊಂದು ಸಂಬಂಧಿಸಿದ ವಿವಿಧ ಸಂಸ್ಥೆಗಳ ಬದಲಿಗೆ <strong>'ವಿಕಸಿತ ಭಾರತ ಶಿಕ್ಷಣ ಅಧಿಷ್ಠಾನ'</strong> ಎಂಬ ಒಂದೇ ಸಂಸ್ಥೆಯನ್ನು ತರಲಾಗುವುದು.</p><p>• ಶೈಕ್ಷಣಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಬಲಪಡಿಸಲಾಗುವುದು ಮತ್ತು ನಾವೀನ್ಯತೆ ಹಾಗೂ ಸಂಶೋಧನೆಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು.</p><p>2025ರ ಸುಧಾರಣೆಗಳ ಮಹತ್ವವು ಕೇವಲ ಅವುಗಳ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಅವುಗಳ ಹಿಂದಿರುವ ಮೂಲತತ್ವದಲ್ಲೂ ಅಡಗಿದೆ. ಆಧುನಿಕ ಪ್ರಜಾಪ್ರಭುತ್ವದ ನೈಜ ಆಶಯದಂತೆ, ನಮ್ಮ ಸರ್ಕಾರವು ನಿಯಂತ್ರಣಕ್ಕಿಂತ ಸಹಯೋಗಕ್ಕೆ ಮತ್ತು ನಿರ್ಬಂಧಗಳಿಗಿಂತ ಸೌಲಭ್ಯ ಒದಗಿಸುವುದಕ್ಕೆಹೆಚ್ಚಿನ ಆದ್ಯತೆ ನೀಡಿದೆ.</p><p>ಸಣ್ಣ ಉದ್ಯಮಿಗಳು, ಯುವ ವೃತ್ತಿಪರರು, ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ವಾಸ್ತವಿಕ ಪರಿಸ್ಥಿತಿಗಳನ್ನು ಗುರುತಿಸಿ, ಅತ್ಯಂತ ಸಹಾನುಭೂತಿಯಿಂದ ಈ ಸುಧಾರಣೆಗಳನ್ನು ರೂಪಿಸಲಾಗಿದೆ. ಇವು ಸಮಾಲೋಚನೆಗಳ ಮೂಲಕ ರೂಪುಗೊಂಡಿವೆ, ದತ್ತಾಂಶಗಳ ಆಧಾರದಮೇಲೆ ಮಾರ್ಗದರ್ಶಿಸಲ್ಪಟ್ಟಿವೆ ಮತ್ತು ಭಾರತದ ಸಾಂವಿಧಾನಿಕ ಮೌಲ್ಯಗಳಲ್ಲಿ ಅಚಲನಂಬಿಕೆಯನ್ನು ಹೊಂದಿವೆ. ನಿಯಂತ್ರಣಾಧಾರಿತ ಆರ್ಥಿಕತೆಯಿಂದ ಹೊರಬಂದು, ಪ್ರಜೆಯನ್ನೇ ಕೇಂದ್ರಬಿಂದುವಾಗಿರಿಸಿಕೊಂಡಿರುವ 'ವಿಶ್ವಾಸ ಆಧಾರಿತ' ವ್ಯವಸ್ಥೆಯತ್ತ ಸಾಗಲು ನಾವು ದಶಕದಿಂದನಡೆಸುತ್ತಿರುವ ಪ್ರಯತ್ನಗಳಿಗೆ ಈ ಸುಧಾರಣೆಗಳು ಹೊಸ ವೇಗವನ್ನು ನೀಡಿವೆ.</p><p>ಈ ಸುಧಾರಣೆಗಳು ಸಮೃದ್ಧ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಗುರಿ ಹೊಂದಿವೆ. 'ವಿಕಸಿತ ಭಾರತ' ನಿರ್ಮಾಣವೇ ನಮ್ಮ ಅಭಿವೃದ್ಧಿ ಪಥದ ಧ್ರುವತಾರೆ. ಮುಂಬರುವ ವರ್ಷಗಳಲ್ಲೂನಾವು ಸುಧಾರಣಾ ಕಾರ್ಯಸೂಚಿಯನ್ನು ಮುಂದುವರೆಸಲಿದ್ದೇವೆ.</p><p>ಭಾರತದ ಈ ಬೆಳವಣಿಗೆಯ ಪಯಣದೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆಂದು ನಾನು ಭಾರತ ಮತ್ತು ವಿದೇಶಗಳಲ್ಲಿರುವ ಎಲ್ಲರನ್ನೂ ವಿನಂತಿಸುತ್ತೇನೆ.</p><p>ಭಾರತದ ಮೇಲೆ ಸದಾ ವಿಶ್ವಾಸವಿಡಿ ಮತ್ತು ನಮ್ಮ ಜನರ ಶಕ್ತಿಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿ!</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>