ಬೆಂಗಳೂರು: ಹಿರಿಯ ಕಾಂಗ್ರೆಸಿಗ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಕುಟುಂಬಸ್ಥರನ್ನು ಇಲ್ಲಿನ ಅವರ ನಿವಾಸದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಬೇಟಿ ಮಾಡಿದ್ದಾರೆ.
ಜಾಫರ್ ಷರೀಫ್ ಅವರು ಅನಾರೋಗ್ಯದಿಂದ ಭಾನುವಾರ(ನ.25) ನಿಧನರಾಗಿದ್ದಾರೆ.
ಕುಟುಂಬದ ಸದಸ್ಯರ ಜತೆ ಕೆಲ ಹೊತ್ತು ಮಾತನಾಡಿದ ಅರುಣ್ ಜೇಟ್ಲಿ ಸಾಂತ್ವನ ಹೇಳಿದ್ದಾರೆ.
ಜಾಫರ್ ಷರೀಫ್ ಅವರು ಇದೇ 23ರ ಶುಕ್ರವಾರ ನಮಾಜ್ ಮಾಡುವ ಸಂದರ್ಭ ಅವರು ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದರು. ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12.30ಕ್ಕೆ ಅವರು ಕೊನೆಯುಸಿರೆಳೆದಿದ್ದರು.
ಷರೀಫ್ ಅವರ ಪತ್ನಿ ಅಮೀನಬಿ ಮತ್ತು ಹಿರಿಯ ಪುತ್ರ ಅಬ್ದುಲ್ ಕರೀಮ್, ಕಿರಿಯ ಪುತ್ರ ಖಾದರ್ ನವಾಜ್ ಷರೀಫ್ ಈ ಹಿಂದೆಯೇ ನಿಧನರಾಗಿದ್ದಾರೆ. ಷರೀಫ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಇಬ್ಬರು ಮೊಮ್ಮಕ್ಕಳಿದ್ದಾರೆ.
Finance Minister Arun Jaitley met the family of late Congress leader CK Jaffer Sharief, today in Bengaluru. Sharief had passed away on November 25. #Karnatakapic.twitter.com/8n10YfZHW7