<figcaption>""</figcaption>.<p><strong>ಬೆಂಗಳೂರು:</strong> ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುದಾನ ಹಾಗೂ ಜಿಎಸ್ಟಿ ನಷ್ಟ ಪರಿಹಾರವು ಸಕಾಲಕ್ಕೆ ಬಾರದೇ ಇರುವುದರಿಂದ ರಾಜ್ಯದ ಬಡವರ ಹಾಗೂ ಮಹಿಳಾಪರ ಕಲ್ಯಾಣ ಕಾರ್ಯಕ್ರಮಗಳಿಗೆ ಗರ ಬಡಿದಂತಾಗಿದೆ.</p>.<p>ರಾಜ್ಯ ಸರ್ಕಾರದ 24 ಇಲಾಖೆಗಳಲ್ಲಿ ಕೇಂದ್ರದ ಹಣಕಾಸು ನೆರವಿನ ಯೋಜನೆಗಳು ಚಾಲ್ತಿಯಲ್ಲಿದ್ದು, ಈ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಬಂದಿಲ್ಲ. ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆಯಾಗಿತ್ತು, ಡಿಸೆಂಬರ್ ಮಧ್ಯಭಾಗದವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಬಗ್ಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿರುವ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದ್ದರೆ, ಇನ್ನೊಂದೆಡೆ ಕೇಂದ್ರದ ಅನುದಾನವೂ ನಿರೀಕ್ಷಿತ ಮಟ್ಟದಲ್ಲಿ ಬಾರದೇ ಇರುವುದರಿಂದಾಗಿ ಹಣ ಹೊಂದಿಸುವ ಇಕ್ಕಟ್ಟು ಹಣಕಾಸು ಇಲಾಖೆ ಅಧಿಕಾರಿಗಳದ್ದಾಗಿದೆ.</p>.<p><strong>ಬಡವರ ಕಲ್ಯಾಣಕ್ಕೆ ಗ್ರಹಣ:</strong>ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಲ್ಲಿ ಬಡವರಿಗೆ ವಸತಿ, ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಬಡವರ ಪರ ಯೋಜನೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.</p>.<p>ವಸತಿ ಇಲಾಖೆ ವ್ಯಾಪ್ತಿಯಲ್ಲಿರುವ ಕೊಳಚೆ ನಿರ್ಮೂಲನೆ, ಬಸವ, ವಾಜಪೇಯಿ, ಪ್ರಧಾನಮಂತ್ರಿ ಆವಾಸ್ ಸೇರಿದಂತೆ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಯಡಿ ₹1,551 ಕೋಟಿ ಅನುದಾನ ಬರಬೇಕಾಗಿತ್ತು. ಆದರೆ, ಈ ಯೋಜನೆಗಳಿಗೆ ಬಂದಿದ್ದು ₹10 ಕೋಟಿ ಮಾತ್ರ.</p>.<p>ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ₹292 ಕೋಟಿ ಬರಬೇಕಾಗಿದ್ದು, ₹25.95 ಕೋಟಿಯಷ್ಟೇ ಬಂದಿದೆ. ಉದ್ಯೋಗ ಸೃಷ್ಟಿಗೆ<br />ನೆರವಾಗುವ ಕೌಶಲಾಭಿವೃದ್ಧಿ ಇಲಾಖೆಗೆ ₹492 ಕೋಟಿ ಅನುದಾನ ಹಂಚಿಕೆಯಾಗಿದ್ದರೆ, ಬಿಡುಗಡೆಯಾಗಿರುವುದು ಕೇವಲ ₹18ಕೋಟಿ. ಬಡ ಮಹಿಳೆಯರು ಮತ್ತು ಮಕ್ಕಳನ್ನು ಕೇಂದ್ರಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಸಮಗ್ರ ಶಿಶು ಅಭಿವೃದ್ಧಿ, ಸ್ತ್ರೀಶಕ್ತಿ ಯೋಜನೆಗಳಿಗೆ ₹1,887 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಈವರೆಗೆಬಂದಿರುವ ಹಣ ಕೇವಲ ₹81 ಕೋಟಿ.</p>.<p><strong>ಜಲಸಂಪನ್ಮೂಲ ಇಲಾಖೆಗಿಲ್ಲ ಅನುದಾನ:</strong> ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಇದಕ್ಕೆ ಅನುದಾನ ನೀಡುವ ಭರವಸೆಯನ್ನು ಬಜೆಟ್ ಪೂರ್ವದಲ್ಲೇ ಕೇಂದ್ರ ಸರ್ಕಾರ ನೀಡಿರುತ್ತದೆ. ಈ ಭರವಸೆ ಆಧರಿಸಿ ರಾಜ್ಯ ಬಜೆಟ್ ಮಂಡಿಸುವಾಗ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗುತ್ತದೆ.</p>.<p>24 ಇಲಾಖೆಗಳ ಪೈಕಿ ಕೆಲವು ಇಲಾಖೆಗಳಿಗೆ ನಿರೀಕ್ಷಿತ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಹೆಚ್ಚು ಮೊತ್ತದ ಅನುದಾನದ ಭರವಸೆಯಲ್ಲಿದ್ದ ಇಲಾಖೆಗಳಿಗೆ ನಿರಾಸೆಯಾಗಿದೆ.</p>.<p>ಸಮಾಜ ಕಲ್ಯಾಣ ಇಲಾಖೆಗೆ ₹415 ಕೋಟಿಯ ಬದಲು ₹196 ಕೋಟಿ ಬಂದಿದೆ. ಜಲಸಂಪನ್ಮೂಲ ಇಲಾಖೆಗೆ ₹457 ಕೋಟಿ ಬರಬೇ<br />ಕಾಗಿದ್ದರೂ ಈವರೆಗೆ ನಯಾಪೈಸೆಯೂ ಬಂದಿಲ್ಲ. ಲೋಕೋಪಯೋಗಿ ಇಲಾಖೆ ₹528 ಕೋಟಿ ನಿರೀಕ್ಷಿಸಿ<br />ದ್ದರೆ ಈವರೆಗೆ ಬಂದಿರುವುದು ₹103 ಕೋಟಿ. ಆರೋಗ್ಯ ಇಲಾಖೆಗೆ ₹1,213<br />ಕೋಟಿ ಪೈಕಿ ₹710 ಕೋಟಿ ಬಿಡುಗಡೆಯಾಗಿದೆ.</p>.<p><strong>ಬಾರದ ಜಿಎಸ್ಟಿ ನಷ್ಟ</strong>: ಜಿಎಸ್ಟಿ ಪರಿಹಾರ ರೂಪದಲ್ಲಿ ₹17,249 ಕೋಟಿ ನಿರೀಕ್ಷಿಸಲಾಗಿದೆ ಎಂದು ಬಜೆಟ್ ಅಂದಾಜಿನಲ್ಲಿ ಹೇಳಲಾಗಿದೆ.</p>.<p>ಸೆಪ್ಟೆಂಬರ್ನಿಂದೀಚೆಗೆ ಜಿಎಸ್ಟಿ ನಷ್ಟ ಪರಿಹಾರ ಬಂದಿಲ್ಲ. ಈ ಅವಧಿಯಲ್ಲಿ ಗರಿಷ್ಠ ಮೊತ್ತದ ಜಿಎಸ್ಟಿ ಸಂಗ್ರಹವಾಗಲಿದ್ದು, ಅದಕ್ಕೆ ಅನುಗುಣವಾಗಿ ನೀಡಬೇಕಾದ ಪರಿಹಾರ ಮೊತ್ತವೂ ಹೆಚ್ಚಾಗಿರುತ್ತದೆ. 2018ರಲ್ಲಿ ಸೆಪ್ಟೆಂಬರ್– ಡಿಸೆಂಬರ್ನವರೆಗೆ ಪ್ರತಿ ತಿಂಗಳು ಸರಾಸರಿ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ಪರಿಹಾರ ಬಂದಿತ್ತು. ಈ ವರ್ಷ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದೆ ಎಂದುಕೊಂಡರೂ ನಾಲ್ಕು ತಿಂಗಳಿನಲ್ಲಿ ಕನಿಷ್ಠವೆಂದರೂ ₹12 ಸಾವಿರ ಕೋಟಿಯಾದರೂ ಬರಬೇಕಾಗಿದೆ ಎಂದು ಹಣಕಾಸು ಇಲಾಖೆಯಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಕೇಂದ್ರದಿಂದ ನಿರೀಕ್ಷಿಸಲಾಗಿರುವ ಅನುದಾನದ ವಿವರ</strong></p>.<p>₹39,806 ಕೋಟಿ - ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು</p>.<p>₹16,645 ಕೋಟಿ -ಕೇಂದ್ರ ಸರ್ಕಾರದ ಅನುದಾನದ ಮೊತ್ತ</p>.<p>₹17,249 ಕೋಟಿ -ಜಿಎಸ್ಟಿ ನಷ್ಟ ಪರಿಹಾರ ಮೊತ್ತ</p>.<p><strong>ಪ್ರಧಾನಮಂತ್ರಿ 15 ಅಂಶ ಕಾರ್ಯಕ್ರಮ (₹ ಕೋಟಿಗಳಲ್ಲಿ)</strong></p>.<p>ಯೋಜನೆ; ಅನುದಾನ; ಬಿಡುಗಡೆ</p>.<p>ಕೊಳಚೆ ನಿರ್ಮೂಲನೆ;75.00;0.00</p>.<p>ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ);500.00;0.00</p>.<p>ಬಸವ ವಸತಿ;60.70;0.00</p>.<p>ಪ್ರಧಾನಮಂತ್ರಿ ಆವಾಸ್(ನಗರ);250.00;10.00</p>.<p>ವಾಜಪೇಯಿ ವಸತಿ;125.00;0.00</p>.<p><br />ಸಮಗ್ರ ಶಿಕ್ಷಣ ಕರ್ನಾಟಕ;238.00;17.85</p>.<p>ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ;54.00.8.10</p>.<p><br />ಉದ್ಯೋಗ ತರಬೇತಿ;220.31;16.52</p>.<p>ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್; 150.00;0.09</p>.<p>ಕೌಶಲಾಭಿವೃದ್ಧಿ ಮಿಷನ್;108.53;2.17</p>.<p>ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್;14.00;0.00</p>.<p><br />ಭಾಗ್ಯಲಕ್ಷ್ಮೀ;309.42;0.00</p>.<p>ಸಮಗ್ರ ಶಿಶು ಅಭಿವೃದ್ಧಿ ಯೋಜನೆ;1547.45;80.64</p>.<p>ಸ್ತ್ರೀಶಕ್ತಿ;10.79;0.50</p>.<p>ಅಲ್ಪಸಂಖ್ಯಾತರ ಕಲ್ಯಾಣ;1,131.55;775.39</p>.<p><br />ಒಟ್ಟು: 5,335.75; 911.26</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p><strong>ಬೆಂಗಳೂರು:</strong> ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಅನುದಾನ ಹಾಗೂ ಜಿಎಸ್ಟಿ ನಷ್ಟ ಪರಿಹಾರವು ಸಕಾಲಕ್ಕೆ ಬಾರದೇ ಇರುವುದರಿಂದ ರಾಜ್ಯದ ಬಡವರ ಹಾಗೂ ಮಹಿಳಾಪರ ಕಲ್ಯಾಣ ಕಾರ್ಯಕ್ರಮಗಳಿಗೆ ಗರ ಬಡಿದಂತಾಗಿದೆ.</p>.<p>ರಾಜ್ಯ ಸರ್ಕಾರದ 24 ಇಲಾಖೆಗಳಲ್ಲಿ ಕೇಂದ್ರದ ಹಣಕಾಸು ನೆರವಿನ ಯೋಜನೆಗಳು ಚಾಲ್ತಿಯಲ್ಲಿದ್ದು, ಈ ಯೋಜನೆಗಳಿಗೆ ನಿರೀಕ್ಷಿತ ಅನುದಾನ ಬಂದಿಲ್ಲ. ಯಾವ ಇಲಾಖೆಗೆ ಎಷ್ಟು ಅನುದಾನ ಹಂಚಿಕೆಯಾಗಿತ್ತು, ಡಿಸೆಂಬರ್ ಮಧ್ಯಭಾಗದವರೆಗೆ ಎಷ್ಟು ಅನುದಾನ ಬಿಡುಗಡೆಯಾಗಿದೆ ಎಂಬ ಬಗ್ಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಿದ್ಧಪಡಿಸಿರುವ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.</p>.<p>ಆರ್ಥಿಕ ಹಿಂಜರಿತದಿಂದಾಗಿ ತೆರಿಗೆ ಸಂಗ್ರಹದಲ್ಲಿ ಹಿನ್ನಡೆಯಾಗಿದ್ದರೆ, ಇನ್ನೊಂದೆಡೆ ಕೇಂದ್ರದ ಅನುದಾನವೂ ನಿರೀಕ್ಷಿತ ಮಟ್ಟದಲ್ಲಿ ಬಾರದೇ ಇರುವುದರಿಂದಾಗಿ ಹಣ ಹೊಂದಿಸುವ ಇಕ್ಕಟ್ಟು ಹಣಕಾಸು ಇಲಾಖೆ ಅಧಿಕಾರಿಗಳದ್ದಾಗಿದೆ.</p>.<p><strong>ಬಡವರ ಕಲ್ಯಾಣಕ್ಕೆ ಗ್ರಹಣ:</strong>ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದಲ್ಲಿ ಬಡವರಿಗೆ ವಸತಿ, ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಈ ಆರ್ಥಿಕ ವರ್ಷದಲ್ಲಿ ಬಡವರ ಪರ ಯೋಜನೆಗಳಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ.</p>.<p>ವಸತಿ ಇಲಾಖೆ ವ್ಯಾಪ್ತಿಯಲ್ಲಿರುವ ಕೊಳಚೆ ನಿರ್ಮೂಲನೆ, ಬಸವ, ವಾಜಪೇಯಿ, ಪ್ರಧಾನಮಂತ್ರಿ ಆವಾಸ್ ಸೇರಿದಂತೆ ಬಡವರಿಗೆ ಮನೆಗಳನ್ನು ಕಟ್ಟಿಕೊಡುವ ಯೋಜನೆಯಡಿ ₹1,551 ಕೋಟಿ ಅನುದಾನ ಬರಬೇಕಾಗಿತ್ತು. ಆದರೆ, ಈ ಯೋಜನೆಗಳಿಗೆ ಬಂದಿದ್ದು ₹10 ಕೋಟಿ ಮಾತ್ರ.</p>.<p>ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕೆ ₹292 ಕೋಟಿ ಬರಬೇಕಾಗಿದ್ದು, ₹25.95 ಕೋಟಿಯಷ್ಟೇ ಬಂದಿದೆ. ಉದ್ಯೋಗ ಸೃಷ್ಟಿಗೆ<br />ನೆರವಾಗುವ ಕೌಶಲಾಭಿವೃದ್ಧಿ ಇಲಾಖೆಗೆ ₹492 ಕೋಟಿ ಅನುದಾನ ಹಂಚಿಕೆಯಾಗಿದ್ದರೆ, ಬಿಡುಗಡೆಯಾಗಿರುವುದು ಕೇವಲ ₹18ಕೋಟಿ. ಬಡ ಮಹಿಳೆಯರು ಮತ್ತು ಮಕ್ಕಳನ್ನು ಕೇಂದ್ರಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ. ಸಮಗ್ರ ಶಿಶು ಅಭಿವೃದ್ಧಿ, ಸ್ತ್ರೀಶಕ್ತಿ ಯೋಜನೆಗಳಿಗೆ ₹1,887 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಈವರೆಗೆಬಂದಿರುವ ಹಣ ಕೇವಲ ₹81 ಕೋಟಿ.</p>.<p><strong>ಜಲಸಂಪನ್ಮೂಲ ಇಲಾಖೆಗಿಲ್ಲ ಅನುದಾನ:</strong> ರಾಜ್ಯ ಹಾಗೂ ಕೇಂದ್ರದ ಸಹಭಾಗಿತ್ವದಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಇದಕ್ಕೆ ಅನುದಾನ ನೀಡುವ ಭರವಸೆಯನ್ನು ಬಜೆಟ್ ಪೂರ್ವದಲ್ಲೇ ಕೇಂದ್ರ ಸರ್ಕಾರ ನೀಡಿರುತ್ತದೆ. ಈ ಭರವಸೆ ಆಧರಿಸಿ ರಾಜ್ಯ ಬಜೆಟ್ ಮಂಡಿಸುವಾಗ ಇಲಾಖೆಗಳಿಗೆ ಹಣ ಹಂಚಿಕೆ ಮಾಡಲಾಗುತ್ತದೆ.</p>.<p>24 ಇಲಾಖೆಗಳ ಪೈಕಿ ಕೆಲವು ಇಲಾಖೆಗಳಿಗೆ ನಿರೀಕ್ಷಿತ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ, ಹೆಚ್ಚು ಮೊತ್ತದ ಅನುದಾನದ ಭರವಸೆಯಲ್ಲಿದ್ದ ಇಲಾಖೆಗಳಿಗೆ ನಿರಾಸೆಯಾಗಿದೆ.</p>.<p>ಸಮಾಜ ಕಲ್ಯಾಣ ಇಲಾಖೆಗೆ ₹415 ಕೋಟಿಯ ಬದಲು ₹196 ಕೋಟಿ ಬಂದಿದೆ. ಜಲಸಂಪನ್ಮೂಲ ಇಲಾಖೆಗೆ ₹457 ಕೋಟಿ ಬರಬೇ<br />ಕಾಗಿದ್ದರೂ ಈವರೆಗೆ ನಯಾಪೈಸೆಯೂ ಬಂದಿಲ್ಲ. ಲೋಕೋಪಯೋಗಿ ಇಲಾಖೆ ₹528 ಕೋಟಿ ನಿರೀಕ್ಷಿಸಿ<br />ದ್ದರೆ ಈವರೆಗೆ ಬಂದಿರುವುದು ₹103 ಕೋಟಿ. ಆರೋಗ್ಯ ಇಲಾಖೆಗೆ ₹1,213<br />ಕೋಟಿ ಪೈಕಿ ₹710 ಕೋಟಿ ಬಿಡುಗಡೆಯಾಗಿದೆ.</p>.<p><strong>ಬಾರದ ಜಿಎಸ್ಟಿ ನಷ್ಟ</strong>: ಜಿಎಸ್ಟಿ ಪರಿಹಾರ ರೂಪದಲ್ಲಿ ₹17,249 ಕೋಟಿ ನಿರೀಕ್ಷಿಸಲಾಗಿದೆ ಎಂದು ಬಜೆಟ್ ಅಂದಾಜಿನಲ್ಲಿ ಹೇಳಲಾಗಿದೆ.</p>.<p>ಸೆಪ್ಟೆಂಬರ್ನಿಂದೀಚೆಗೆ ಜಿಎಸ್ಟಿ ನಷ್ಟ ಪರಿಹಾರ ಬಂದಿಲ್ಲ. ಈ ಅವಧಿಯಲ್ಲಿ ಗರಿಷ್ಠ ಮೊತ್ತದ ಜಿಎಸ್ಟಿ ಸಂಗ್ರಹವಾಗಲಿದ್ದು, ಅದಕ್ಕೆ ಅನುಗುಣವಾಗಿ ನೀಡಬೇಕಾದ ಪರಿಹಾರ ಮೊತ್ತವೂ ಹೆಚ್ಚಾಗಿರುತ್ತದೆ. 2018ರಲ್ಲಿ ಸೆಪ್ಟೆಂಬರ್– ಡಿಸೆಂಬರ್ನವರೆಗೆ ಪ್ರತಿ ತಿಂಗಳು ಸರಾಸರಿ ₹3 ಸಾವಿರ ಕೋಟಿಯಿಂದ ₹4 ಸಾವಿರ ಕೋಟಿ ಪರಿಹಾರ ಬಂದಿತ್ತು. ಈ ವರ್ಷ ಆರ್ಥಿಕ ಹಿಂಜರಿತದ ಹೊಡೆತ ಬಿದ್ದಿದೆ ಎಂದುಕೊಂಡರೂ ನಾಲ್ಕು ತಿಂಗಳಿನಲ್ಲಿ ಕನಿಷ್ಠವೆಂದರೂ ₹12 ಸಾವಿರ ಕೋಟಿಯಾದರೂ ಬರಬೇಕಾಗಿದೆ ಎಂದು ಹಣಕಾಸು ಇಲಾಖೆಯಅಧಿಕಾರಿಯೊಬ್ಬರು ತಿಳಿಸಿದರು.</p>.<p><strong>ಕೇಂದ್ರದಿಂದ ನಿರೀಕ್ಷಿಸಲಾಗಿರುವ ಅನುದಾನದ ವಿವರ</strong></p>.<p>₹39,806 ಕೋಟಿ - ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು</p>.<p>₹16,645 ಕೋಟಿ -ಕೇಂದ್ರ ಸರ್ಕಾರದ ಅನುದಾನದ ಮೊತ್ತ</p>.<p>₹17,249 ಕೋಟಿ -ಜಿಎಸ್ಟಿ ನಷ್ಟ ಪರಿಹಾರ ಮೊತ್ತ</p>.<p><strong>ಪ್ರಧಾನಮಂತ್ರಿ 15 ಅಂಶ ಕಾರ್ಯಕ್ರಮ (₹ ಕೋಟಿಗಳಲ್ಲಿ)</strong></p>.<p>ಯೋಜನೆ; ಅನುದಾನ; ಬಿಡುಗಡೆ</p>.<p>ಕೊಳಚೆ ನಿರ್ಮೂಲನೆ;75.00;0.00</p>.<p>ಪ್ರಧಾನಮಂತ್ರಿ ಆವಾಸ್ (ಗ್ರಾಮೀಣ);500.00;0.00</p>.<p>ಬಸವ ವಸತಿ;60.70;0.00</p>.<p>ಪ್ರಧಾನಮಂತ್ರಿ ಆವಾಸ್(ನಗರ);250.00;10.00</p>.<p>ವಾಜಪೇಯಿ ವಸತಿ;125.00;0.00</p>.<p><br />ಸಮಗ್ರ ಶಿಕ್ಷಣ ಕರ್ನಾಟಕ;238.00;17.85</p>.<p>ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ;54.00.8.10</p>.<p><br />ಉದ್ಯೋಗ ತರಬೇತಿ;220.31;16.52</p>.<p>ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್; 150.00;0.09</p>.<p>ಕೌಶಲಾಭಿವೃದ್ಧಿ ಮಿಷನ್;108.53;2.17</p>.<p>ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್;14.00;0.00</p>.<p><br />ಭಾಗ್ಯಲಕ್ಷ್ಮೀ;309.42;0.00</p>.<p>ಸಮಗ್ರ ಶಿಶು ಅಭಿವೃದ್ಧಿ ಯೋಜನೆ;1547.45;80.64</p>.<p>ಸ್ತ್ರೀಶಕ್ತಿ;10.79;0.50</p>.<p>ಅಲ್ಪಸಂಖ್ಯಾತರ ಕಲ್ಯಾಣ;1,131.55;775.39</p>.<p><br />ಒಟ್ಟು: 5,335.75; 911.26</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>