<p><strong>ವಿಜಯಪುರ</strong>: ಕೋವಿಡ್ ಸಂಕಷ್ಟದ ಸಮಯದಲ್ಲೂ ಕನ್ನಡ ಜಾನಪದ ಪರಿಷತ್ ಜಾಲತಾಣದಲ್ಲಿ ನಿರಂತರವಾಗಿ ಜಾನಪದ ಸಾಹಿತ್ಯಕ್ಕೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಗಮನ ಸೆಳೆದಿದೆ.</p>.<p>ಮಾರ್ಚ್ 16ಕ್ಕೆ ಜಾಲತಾಣದಲ್ಲಿ ಆರಂಭವಾದ ಜಾನಪದ ಉಪನ್ಯಾಸ ಕಾರ್ಯಕ್ರಮಗಳು ಜುಲೈ 24ಕ್ಕೆ ಶತಕ ಪೂರೈಸಿದ್ದು, ಇದರ ಸವಿವ ನೆನಪಿಗಾಗಿ ಜುಲೈ 26ರಂದು ರಾಷ್ಟ್ರಮಟ್ಟದ ಪ್ರಥಮ ‘ಜಾಲತಾಣದಲ್ಲಿ ಜಾನಪದ ಸಮ್ಮೇಳನ’ ಆಯೋಜಿಸಿದೆ.</p>.<p>ಕನ್ನಡ ಜಾನಪದ ಪರಿಷತ್, ಜಾನಪದ ಯುವ ಬ್ರಿಗೇಡ್, ವಿಜಯಪುರ ಜಿಲ್ಲಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸಮ್ಮೇಳನ ಉದ್ಘಾಟಿಸುವರು ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ) ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಗದುಗಿನಲ್ಲಿ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ಮಾಡಲಿದ್ದಾರೆ. ನಂತರ ವಿಜಯಪುರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿದ್ರಾಮಯ್ಯ ಪೂಜಾರಿ, ವಿದ್ವಾಂಸರಾದ ಅಂಬಳಿಕೆ ಹಿರಿಯಣ್ಣ ಮತ್ತು ಸೋಮಶೇಖರ ಇಮ್ರಾಪೂರ ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.</p>.<p>ಡಾ. ರಂಗಾರೆಡ್ಡಿ ಕೋಡಿರಾಂಪೂರ ಬೆಂಗಳೂರಿನಲ್ಲಿ ಕೃತಿ ಬಿಡುಗಡೆ ಮಾಡುವರು. ಕೆ.ವಿ. ಖಾದ್ರಿ ನರಸಿಂಹಯ್ಯ, ಡಾ. ನಂಜಯ್ಯ ಹೊಂಗನೂರು, ಡಾ.ಚೆಲುವರಾಜು ಅಮರಯ್ಯ ಸ್ವಾಮಿ ಜಾಲಿಬೆಂಟಿ, ಡಾ.ಎಂ.ಎನ್. ವೆಂಕಟೇಶ ಡಾ.ಮೀರಸಾಬಿಹಳ್ಳಿ ಶಿವಣ್ಣ, ಡಾ.ವೈ.ಎಂ. ಭಜಂತ್ರಿ, ಕಾ ಕವಿತಾ ಕೃಷ್ಣ ಅತಿಥಿ ಭಾಷಣ ಮಾಡುವರು.</p>.<p>ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಬೆಂಗಳೂರಿನಲ್ಲಿ ಅಧ್ಯಕ್ಷ ಭಾಷಣ ಮತ್ತು ಸಾನಿಧ್ಯ ವಹಿಸಿರುವ ಇಂಗಳೇಶ್ವರ ಸಿದ್ಧಲಿಂಗ ಸ್ವಾಮೀಜಿ ಅವರು ರಾಯಚೂರಿನಲ್ಲಿ ಆರ್ಶೀವಚನ ನೀಡುವರು.</p>.<p>ಮಧ್ಯಾಹ್ನ 1.30ಕ್ಕೆ ನಡೆಯುವ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ಪ್ರೊ.ಕೆ.ಎಸ್. ಕೌಜಲಗಿ ವಹಿಸಲಿದ್ದು, ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ‘ಜನಪದ ಸಾಹಿತ್ಯದಲ್ಲಿ ಮಹಿಳೆ’, ಡಾ.ಜಿ.ಎಸ್.ದಬಾಲೆ ‘ತತ್ವಪದಗಳ ಪರಂಪರೆ’, ಡಾ.ವಿ.ಎಸ್. ಮಾಳಿ ಜಾನಪದ ತ್ರಿಪದಿಯಲ್ಲಿ ಜೀವನ ಮೌಲ್ಯ ಕುರಿತು ವಿವಿಧ ಸ್ಥಳಗಳಲ್ಲಿ ಮಾತನಾಡಲಿದ್ದಾರೆ.</p>.<p>ಮಧ್ಯಾಹ್ನ 2.5ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಡಾ. ಆನಂದಪ್ಪ ಜೋಗಿ ಅಧ್ಯಕ್ಷತೆ ವಹಿಸಲಿದ್ದು, ಡಾ. ರಂಗಸ್ವಾಮಿ ‘ಜನಪದ ಗೀತೆಗಳ ವಿಭಿನ್ನ ನೆಲೆಗಳು’, ಡಾ. ರತ್ನಾಕರ ಮಲ್ಲಮೂಲೆ ‘ಮಾತೃಪ್ರಧಾನ ಸಂಸ್ಕೃತಿ ಮತ್ತು ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ‘ತುಮಕೂರ ಜಿಲ್ಲೆ ಜಾನಪದ’ ಕುರಿತು ಮಾತನಾಡಲಿದ್ದಾರೆ.</p>.<p>ಸಂಜೆ 4 ಕ್ಕೆ ನಡೆಯುವ ಮೂರನೇ ಗೋಷ್ಠಿಯಲ್ಲಿ ಡಾ.ಕಾವೇರಿ ಪ್ರಕಾಶ ಅಧ್ಯಕ್ಷತೆ ವಹಿಸಲಿದ್ದು, ಡಾ. ಜಯಲಲಿತಾ ‘ದಕ್ಷಿಣ ಭಾರತದ ಜಾನಪದ’, ಡಾ. ಭಾರತಿ ಮರವಂತೆ ’ಜಾನಪದ ಚಿತ್ತಾರಗಳಲ್ಲಿ ರಂಗೋಲಿ’, ಪ್ರೊ.ಶಕುಂತಲಾ ಸಿಂಧೂರ ‘ಕೃಷಿ ಉಪಕರಣ’ ಕುರಿತು ಮಾತನಾಡಲಿದ್ದಾರೆ.</p>.<p>ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ಎಸ್. ಬಾಲಾಜಿ ಅಧ್ಯಕ್ಷತೆಯಲ್ಲಿ ಡಾ.ಅಪ್ಪಗೆರೆ ತಿಮ್ಮರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಕನಕತಾರಾ, ಸೌಮ್ಯ ಟಿಕೆಗೌಡ ಅತಿಥಿಗಳಾಗಿ ಭಾಗವಹಿಸುವರು.</p>.<p>ರಾಜ್ಯದ 30 ಜಿಲ್ಲೆಗಳಲ್ಲಿ 30 ಜನ ಜಾನಪದ ಕಲಾವಿದರ ಸನ್ಮಾನ ಆಯಾ ಜಿಲ್ಲೆಯಲ್ಲಿ ನಡೆಯಲಿದೆ.</p>.<p>ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಇಂಡಿಯ ಗೊಂದಳಿ ಪದ, ಜೈನಾಪುರದ ಹೆಜ್ಜೆಮೇಳ, ಪ್ರಕಾಶ ಚಲವಾದಿಯವರ ಶಹನಾಯ್ ವಾದನ, ಸಾಲೋಟಗಿಯ ಹಂತಿಪದ, ಬಾಗಲಕೋಟೆಯ ಕೆರೂರಿನ ಮಹಿಳಾ ಡೊಳ್ಳು, ಚಾಮರಾಜನಗರದ ಮಹಾಕಾವ್ಯ ಗಾಯನ, ಚಿತ್ರದುರ್ಗದ ಜೋಗಿಪದಗಳ ಕಲಾ ಪ್ರದರ್ಶನ ನಡೆಯಲಿದೆ.</p>.<p>ಈ ಸಮ್ಮೇಳನದಲ್ಲಿ ಕನ್ನಡ ಜಾನಪದ ಪರಿಷತ್ತಿನ 30 ಜಿಲ್ಲಾ ಘಟಕದ ಅಧ್ಯಕ್ಷರು, ಜಾನಪದ ಬ್ರಿಗೇಡ್ನ 30 ಜಿಲ್ಲಾ ಸಂಚಾಲಕರು, 300 ಜನ ಪರಿಷತ್ನ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು, ಒಟ್ಟು ಒಂದು ಸಾವಿರ ಜನರು ಜಾಲತಾಣದಲ್ಲಿ ನಡೆಯುವ ಜಾನಪದ ಸಮ್ಮೇಳನದಲ್ಲಿ ಭಾಗವಹಿಸದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಕೋವಿಡ್ ಸಂಕಷ್ಟದ ಸಮಯದಲ್ಲೂ ಕನ್ನಡ ಜಾನಪದ ಪರಿಷತ್ ಜಾಲತಾಣದಲ್ಲಿ ನಿರಂತರವಾಗಿ ಜಾನಪದ ಸಾಹಿತ್ಯಕ್ಕೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಡಿನ ಗಮನ ಸೆಳೆದಿದೆ.</p>.<p>ಮಾರ್ಚ್ 16ಕ್ಕೆ ಜಾಲತಾಣದಲ್ಲಿ ಆರಂಭವಾದ ಜಾನಪದ ಉಪನ್ಯಾಸ ಕಾರ್ಯಕ್ರಮಗಳು ಜುಲೈ 24ಕ್ಕೆ ಶತಕ ಪೂರೈಸಿದ್ದು, ಇದರ ಸವಿವ ನೆನಪಿಗಾಗಿ ಜುಲೈ 26ರಂದು ರಾಷ್ಟ್ರಮಟ್ಟದ ಪ್ರಥಮ ‘ಜಾಲತಾಣದಲ್ಲಿ ಜಾನಪದ ಸಮ್ಮೇಳನ’ ಆಯೋಜಿಸಿದೆ.</p>.<p>ಕನ್ನಡ ಜಾನಪದ ಪರಿಷತ್, ಜಾನಪದ ಯುವ ಬ್ರಿಗೇಡ್, ವಿಜಯಪುರ ಜಿಲ್ಲಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ನಡೆಯಲಿರುವ ಈ ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸಮ್ಮೇಳನ ಉದ್ಘಾಟಿಸುವರು ಎಂದು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ(ಪಡಗಾನೂರ) ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಅವರು ಗದುಗಿನಲ್ಲಿ ಬೆಳಿಗ್ಗೆ 9ಕ್ಕೆ ಧ್ವಜಾರೋಹಣ ಮಾಡಲಿದ್ದಾರೆ. ನಂತರ ವಿಜಯಪುರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಸಿದ್ರಾಮಯ್ಯ ಪೂಜಾರಿ, ವಿದ್ವಾಂಸರಾದ ಅಂಬಳಿಕೆ ಹಿರಿಯಣ್ಣ ಮತ್ತು ಸೋಮಶೇಖರ ಇಮ್ರಾಪೂರ ಅವರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.</p>.<p>ಡಾ. ರಂಗಾರೆಡ್ಡಿ ಕೋಡಿರಾಂಪೂರ ಬೆಂಗಳೂರಿನಲ್ಲಿ ಕೃತಿ ಬಿಡುಗಡೆ ಮಾಡುವರು. ಕೆ.ವಿ. ಖಾದ್ರಿ ನರಸಿಂಹಯ್ಯ, ಡಾ. ನಂಜಯ್ಯ ಹೊಂಗನೂರು, ಡಾ.ಚೆಲುವರಾಜು ಅಮರಯ್ಯ ಸ್ವಾಮಿ ಜಾಲಿಬೆಂಟಿ, ಡಾ.ಎಂ.ಎನ್. ವೆಂಕಟೇಶ ಡಾ.ಮೀರಸಾಬಿಹಳ್ಳಿ ಶಿವಣ್ಣ, ಡಾ.ವೈ.ಎಂ. ಭಜಂತ್ರಿ, ಕಾ ಕವಿತಾ ಕೃಷ್ಣ ಅತಿಥಿ ಭಾಷಣ ಮಾಡುವರು.</p>.<p>ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ.ಎಸ್.ಬಾಲಾಜಿ ಬೆಂಗಳೂರಿನಲ್ಲಿ ಅಧ್ಯಕ್ಷ ಭಾಷಣ ಮತ್ತು ಸಾನಿಧ್ಯ ವಹಿಸಿರುವ ಇಂಗಳೇಶ್ವರ ಸಿದ್ಧಲಿಂಗ ಸ್ವಾಮೀಜಿ ಅವರು ರಾಯಚೂರಿನಲ್ಲಿ ಆರ್ಶೀವಚನ ನೀಡುವರು.</p>.<p>ಮಧ್ಯಾಹ್ನ 1.30ಕ್ಕೆ ನಡೆಯುವ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ಪ್ರೊ.ಕೆ.ಎಸ್. ಕೌಜಲಗಿ ವಹಿಸಲಿದ್ದು, ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ‘ಜನಪದ ಸಾಹಿತ್ಯದಲ್ಲಿ ಮಹಿಳೆ’, ಡಾ.ಜಿ.ಎಸ್.ದಬಾಲೆ ‘ತತ್ವಪದಗಳ ಪರಂಪರೆ’, ಡಾ.ವಿ.ಎಸ್. ಮಾಳಿ ಜಾನಪದ ತ್ರಿಪದಿಯಲ್ಲಿ ಜೀವನ ಮೌಲ್ಯ ಕುರಿತು ವಿವಿಧ ಸ್ಥಳಗಳಲ್ಲಿ ಮಾತನಾಡಲಿದ್ದಾರೆ.</p>.<p>ಮಧ್ಯಾಹ್ನ 2.5ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಡಾ. ಆನಂದಪ್ಪ ಜೋಗಿ ಅಧ್ಯಕ್ಷತೆ ವಹಿಸಲಿದ್ದು, ಡಾ. ರಂಗಸ್ವಾಮಿ ‘ಜನಪದ ಗೀತೆಗಳ ವಿಭಿನ್ನ ನೆಲೆಗಳು’, ಡಾ. ರತ್ನಾಕರ ಮಲ್ಲಮೂಲೆ ‘ಮಾತೃಪ್ರಧಾನ ಸಂಸ್ಕೃತಿ ಮತ್ತು ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ‘ತುಮಕೂರ ಜಿಲ್ಲೆ ಜಾನಪದ’ ಕುರಿತು ಮಾತನಾಡಲಿದ್ದಾರೆ.</p>.<p>ಸಂಜೆ 4 ಕ್ಕೆ ನಡೆಯುವ ಮೂರನೇ ಗೋಷ್ಠಿಯಲ್ಲಿ ಡಾ.ಕಾವೇರಿ ಪ್ರಕಾಶ ಅಧ್ಯಕ್ಷತೆ ವಹಿಸಲಿದ್ದು, ಡಾ. ಜಯಲಲಿತಾ ‘ದಕ್ಷಿಣ ಭಾರತದ ಜಾನಪದ’, ಡಾ. ಭಾರತಿ ಮರವಂತೆ ’ಜಾನಪದ ಚಿತ್ತಾರಗಳಲ್ಲಿ ರಂಗೋಲಿ’, ಪ್ರೊ.ಶಕುಂತಲಾ ಸಿಂಧೂರ ‘ಕೃಷಿ ಉಪಕರಣ’ ಕುರಿತು ಮಾತನಾಡಲಿದ್ದಾರೆ.</p>.<p>ಸಂಜೆ 5.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ಎಸ್. ಬಾಲಾಜಿ ಅಧ್ಯಕ್ಷತೆಯಲ್ಲಿ ಡಾ.ಅಪ್ಪಗೆರೆ ತಿಮ್ಮರಾಜು ಸಮಾರೋಪ ಭಾಷಣ ಮಾಡಲಿದ್ದಾರೆ. ಡಾ. ಕನಕತಾರಾ, ಸೌಮ್ಯ ಟಿಕೆಗೌಡ ಅತಿಥಿಗಳಾಗಿ ಭಾಗವಹಿಸುವರು.</p>.<p>ರಾಜ್ಯದ 30 ಜಿಲ್ಲೆಗಳಲ್ಲಿ 30 ಜನ ಜಾನಪದ ಕಲಾವಿದರ ಸನ್ಮಾನ ಆಯಾ ಜಿಲ್ಲೆಯಲ್ಲಿ ನಡೆಯಲಿದೆ.</p>.<p>ಸಮ್ಮೇಳನದಲ್ಲಿ ವಿಜಯಪುರ ಜಿಲ್ಲೆಯ ಇಂಡಿಯ ಗೊಂದಳಿ ಪದ, ಜೈನಾಪುರದ ಹೆಜ್ಜೆಮೇಳ, ಪ್ರಕಾಶ ಚಲವಾದಿಯವರ ಶಹನಾಯ್ ವಾದನ, ಸಾಲೋಟಗಿಯ ಹಂತಿಪದ, ಬಾಗಲಕೋಟೆಯ ಕೆರೂರಿನ ಮಹಿಳಾ ಡೊಳ್ಳು, ಚಾಮರಾಜನಗರದ ಮಹಾಕಾವ್ಯ ಗಾಯನ, ಚಿತ್ರದುರ್ಗದ ಜೋಗಿಪದಗಳ ಕಲಾ ಪ್ರದರ್ಶನ ನಡೆಯಲಿದೆ.</p>.<p>ಈ ಸಮ್ಮೇಳನದಲ್ಲಿ ಕನ್ನಡ ಜಾನಪದ ಪರಿಷತ್ತಿನ 30 ಜಿಲ್ಲಾ ಘಟಕದ ಅಧ್ಯಕ್ಷರು, ಜಾನಪದ ಬ್ರಿಗೇಡ್ನ 30 ಜಿಲ್ಲಾ ಸಂಚಾಲಕರು, 300 ಜನ ಪರಿಷತ್ನ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದು, ಒಟ್ಟು ಒಂದು ಸಾವಿರ ಜನರು ಜಾಲತಾಣದಲ್ಲಿ ನಡೆಯುವ ಜಾನಪದ ಸಮ್ಮೇಳನದಲ್ಲಿ ಭಾಗವಹಿಸದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>