ಅಲೆಮಾರಿ ಬುಡ್ಗ ಜಂಗಮ ಸಮಾಜದ ಶಂಕರ ಎನ್ನುವವರು ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ, ‘ತಮ್ಮ ಕುಟುಂಬದ ಸದಸ್ಯರಿಗೆ ಹಣದ ಆಸೆ ತೋರಿಸಿ ಮತಾಂತರ ಮಾಡಲಾಗಿದೆ. ಪಾದ್ರಿ ಸತ್ಯನಾರಾಯಣ ಬಲವಂತವಾಗಿ ನನಗೆ ದೀಕ್ಷೆ, ಸ್ನಾನದ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ಇಂದಿನಿಂದ ನೀವು, ನಿಮ್ಮ ಕುಟುಂಬದ ಸದಸ್ಯರು ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂದು ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಸಿದರು. ನೀವು ಯಾವುದೇ ಹಿಂದು ಧರ್ಮದ ದೇವರನ್ನು ಪೂಜೆ ಮಾಡುವಂತಿಲ್ಲ ಎಂದು ಮನೆಯಲ್ಲಿದ್ದ ದೇವರ ಪೋಟೊಗಳನ್ನು ಕಾಲುವೆಯಲ್ಲಿ ಎಸೆದರು. ಹಿಂದೂ ದೇವರ ಪೂಜೆ ಮಾಡಿದರೆ ಕೊಲೆ, ಅತ್ಯಾಚಾರದ ಬೆದರಿಕೆ ಹಾಕಿದ ಪಾದ್ರಿಯ ಕಾರ್ಯದಿಂದ ನಾವೆಲ್ಲಾ ತೊಂದರೆ ಅನುಭವಿಸುತ್ತಿದ್ದೇವೆ. ಮನೆಯ ಸದಸ್ಯರನ್ನು ಚರ್ಚ್ನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು’ ಎಂದು ತಿಳಿಸಿದ್ದಾರೆ.