<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಒಂದೇ ಕುಟುಂಬದ ನಾಲ್ಕು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾದರು.</p>.<p>ಬಾಗವ್ವ (6), ಸುಪ್ರೀತಾ (5), ಮಾಳಪ್ಪ (4), ರಾಜಶ್ರೀ (2.5) ಮೃತರು. ಇವರೆಲ್ಲರೂ ಕರೆಪ್ಪ ಜಕ್ಕನ್ನವರ–ಮಹಾದೇವಿ ದಂಪತಿಯ ಮಕ್ಕಳು.</p>.<p>‘ಮಕ್ಕಳು ಗ್ರಾಮದ ಮನೆಯಿಂದ ಅಜ್ಜ-ಅಜ್ಜಿ ಇದ್ದ ತೋಟದ ಮನೆ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಮಾಳಪ್ಪ ಕೈಲಿದ್ದ ಮೊಬೈಲ್ ಫೋನ್ ಕೈ ಜಾರಿ ಹೊಂಡಕ್ಕೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಒಬ್ಬರ ನಂತರ ಒಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.</p>.<p>‘ಅಜ್ಜಿ ಲಕ್ಕವ್ವ ನೀರು ತರಲೆಂದು ಕೃಷಿ ಹೊಂಡಕ್ಕೆ ಬಂದಾಗ, ಮಕ್ಕಳು ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಗೋಕಾಕ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ಸಿಪಿಐ ಗೋಪಾಲ ರಾಠೋಡ ಸ್ಥಳ ಪರಿಶೀಲನೆ ನಡೆಸಿದರು.</p>.<p>ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ (ಬೆಳಗಾವಿ ಜಿಲ್ಲೆ):</strong> ತಾಲ್ಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಒಂದೇ ಕುಟುಂಬದ ನಾಲ್ಕು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವಿಗೀಡಾದರು.</p>.<p>ಬಾಗವ್ವ (6), ಸುಪ್ರೀತಾ (5), ಮಾಳಪ್ಪ (4), ರಾಜಶ್ರೀ (2.5) ಮೃತರು. ಇವರೆಲ್ಲರೂ ಕರೆಪ್ಪ ಜಕ್ಕನ್ನವರ–ಮಹಾದೇವಿ ದಂಪತಿಯ ಮಕ್ಕಳು.</p>.<p>‘ಮಕ್ಕಳು ಗ್ರಾಮದ ಮನೆಯಿಂದ ಅಜ್ಜ-ಅಜ್ಜಿ ಇದ್ದ ತೋಟದ ಮನೆ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಮಾಳಪ್ಪ ಕೈಲಿದ್ದ ಮೊಬೈಲ್ ಫೋನ್ ಕೈ ಜಾರಿ ಹೊಂಡಕ್ಕೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಒಬ್ಬರ ನಂತರ ಒಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.</p>.<p>‘ಅಜ್ಜಿ ಲಕ್ಕವ್ವ ನೀರು ತರಲೆಂದು ಕೃಷಿ ಹೊಂಡಕ್ಕೆ ಬಂದಾಗ, ಮಕ್ಕಳು ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>ಗೋಕಾಕ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ಸಿಪಿಐ ಗೋಪಾಲ ರಾಠೋಡ ಸ್ಥಳ ಪರಿಶೀಲನೆ ನಡೆಸಿದರು.</p>.<p>ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>