<figcaption>""</figcaption>.<p>ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚು ಒತ್ತು ನೀಡುತ್ತಾ ಜನಮನ ಗೆದ್ದಿರುವ ‘ಪ್ರಜಾವಾಣಿ’, ಇದೀಗ 151ನೇ ವರ್ಷದ ಗಾಂಧಿ ಜಯಂತಿಯನ್ನು ವಿನೂತನವಾಗಿ ಆಚರಿಸಲು ಹೊರಟಿದೆ.</p>.<p>ಇಂದು (ಅಕ್ಟೋಬರ್ 2) ದಿನವಿಡೀ ಪ್ರಜಾವಾಣಿ ಫೇಸ್ಬುಕ್ ಪುಟದಲ್ಲಿ (https://www.facebook.com/prajavani.net/), ಗಾಂಧಿ ಭಜನ್, ಗಾಂಧಿ ತತ್ವಗಳ ಉಪನ್ಯಾಸ, ವಿಶ್ವಶಾಂತಿಗಾಗಿ ಪ್ರಾರ್ಥನೆ ಹಾಗೂ ರಂಗ ರೂಪಕ -ಈ ನಾಲ್ಕು ಕಾರ್ಯಕ್ರಮಗಳು ಮೂಡಿಬರಲಿವೆ.</p>.<p>ಬೆಳಿಗ್ಗೆ 9:30ಕ್ಕೆ ಗದುಗಿನ ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರಿಂದ ಗಾಂಧೀಜಿಗೆ ಸ್ವರ ನಮನ ಕಾರ್ಯಕ್ರಮ ನಡೆಯಲಿದ್ದು, ಹಿಂದೂಸ್ತಾನಿ ಗಾಯಕ ಅಂಬರೀಷ್ ಕೊಂಡಗೂಳಿ ಸಹಕರಿಸಲಿದ್ದಾರೆ. ಸಂತೋಷ್ ಕೋಡ್ಲಿ ತಬಲಾ ನುಡಿಸಲಿದ್ದಾರೆ.</p>.<p>ಬೆಳಿಗ್ಗೆ 11:15ರಿಂದ ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಅವರಿಂದ ‘ತತ್ವ; ವ್ಯಕ್ತಿತ್ವ- ಗಾಂಧೀಜಿ ಜೀವನದಲ್ಲಿ ಪ್ರತಿಫಲನಗೊಂಡಂತೆ’ ಒಂದು ಗಂಟೆ ಉಪನ್ಯಾಸ ಕಾರ್ಯಕ್ರಮವು ಫೇಸ್ಬುಕ್ ಲೈವ್ ಮೂಲಕ ಮೂಡಿಬರಲಿದೆ.</p>.<p>ಸಂಜೆ 5.30ರಿಂದ 7ರವರೆಗೆ ಅಂತರರಾಷ್ಟ್ರೀಯ ಗಾಯಕಿ, ಪುಣೆಯ ಪಿ. ನಂದಿನಿ ರಾವ್ ಗುಜರ್ ಅವರಿಂದ ಕನ್ನಡ-ಹಿಂದಿ ಭಜನ್ ಸಹಿತ ‘ವಿಶ್ವ ಶಾಂತಿಗಾಗಿ ಪ್ರಾರ್ಥನೆ’ ಲೈವ್ ಕಾರ್ಯಕ್ರಮ ನಡೆಯಲಿದೆ.</p>.<p>ರಾತ್ರಿ 7ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೊಳುವಾರು ಮಹಮದ್ ಕುಂಞಿ ಅವರ ಕಥೆ ಆಧಾರಿತ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಎಂಬ ರಂಗ ರೂಪಕವು ಎನ್.ಆರ್. ವಿಶುಕುಮಾರ್ ಪರಿಕಲ್ಪನೆಯಲ್ಲಿ, ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರಸ್ತುತಿಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<p>ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚು ಒತ್ತು ನೀಡುತ್ತಾ ಜನಮನ ಗೆದ್ದಿರುವ ‘ಪ್ರಜಾವಾಣಿ’, ಇದೀಗ 151ನೇ ವರ್ಷದ ಗಾಂಧಿ ಜಯಂತಿಯನ್ನು ವಿನೂತನವಾಗಿ ಆಚರಿಸಲು ಹೊರಟಿದೆ.</p>.<p>ಇಂದು (ಅಕ್ಟೋಬರ್ 2) ದಿನವಿಡೀ ಪ್ರಜಾವಾಣಿ ಫೇಸ್ಬುಕ್ ಪುಟದಲ್ಲಿ (https://www.facebook.com/prajavani.net/), ಗಾಂಧಿ ಭಜನ್, ಗಾಂಧಿ ತತ್ವಗಳ ಉಪನ್ಯಾಸ, ವಿಶ್ವಶಾಂತಿಗಾಗಿ ಪ್ರಾರ್ಥನೆ ಹಾಗೂ ರಂಗ ರೂಪಕ -ಈ ನಾಲ್ಕು ಕಾರ್ಯಕ್ರಮಗಳು ಮೂಡಿಬರಲಿವೆ.</p>.<p>ಬೆಳಿಗ್ಗೆ 9:30ಕ್ಕೆ ಗದುಗಿನ ಸಂಗೀತ ಸಂಯೋಜಕ ರಾಘವ ಕಮ್ಮಾರ ಅವರಿಂದ ಗಾಂಧೀಜಿಗೆ ಸ್ವರ ನಮನ ಕಾರ್ಯಕ್ರಮ ನಡೆಯಲಿದ್ದು, ಹಿಂದೂಸ್ತಾನಿ ಗಾಯಕ ಅಂಬರೀಷ್ ಕೊಂಡಗೂಳಿ ಸಹಕರಿಸಲಿದ್ದಾರೆ. ಸಂತೋಷ್ ಕೋಡ್ಲಿ ತಬಲಾ ನುಡಿಸಲಿದ್ದಾರೆ.</p>.<p>ಬೆಳಿಗ್ಗೆ 11:15ರಿಂದ ವಿಜಯಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದಜಿ ಅವರಿಂದ ‘ತತ್ವ; ವ್ಯಕ್ತಿತ್ವ- ಗಾಂಧೀಜಿ ಜೀವನದಲ್ಲಿ ಪ್ರತಿಫಲನಗೊಂಡಂತೆ’ ಒಂದು ಗಂಟೆ ಉಪನ್ಯಾಸ ಕಾರ್ಯಕ್ರಮವು ಫೇಸ್ಬುಕ್ ಲೈವ್ ಮೂಲಕ ಮೂಡಿಬರಲಿದೆ.</p>.<p>ಸಂಜೆ 5.30ರಿಂದ 7ರವರೆಗೆ ಅಂತರರಾಷ್ಟ್ರೀಯ ಗಾಯಕಿ, ಪುಣೆಯ ಪಿ. ನಂದಿನಿ ರಾವ್ ಗುಜರ್ ಅವರಿಂದ ಕನ್ನಡ-ಹಿಂದಿ ಭಜನ್ ಸಹಿತ ‘ವಿಶ್ವ ಶಾಂತಿಗಾಗಿ ಪ್ರಾರ್ಥನೆ’ ಲೈವ್ ಕಾರ್ಯಕ್ರಮ ನಡೆಯಲಿದೆ.</p>.<p>ರಾತ್ರಿ 7ರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೊಳುವಾರು ಮಹಮದ್ ಕುಂಞಿ ಅವರ ಕಥೆ ಆಧಾರಿತ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಎಂಬ ರಂಗ ರೂಪಕವು ಎನ್.ಆರ್. ವಿಶುಕುಮಾರ್ ಪರಿಕಲ್ಪನೆಯಲ್ಲಿ, ಡಾ.ಶ್ರೀಪಾದ ಭಟ್ ನಿರ್ದೇಶನದಲ್ಲಿ ಪ್ರಸ್ತುತಿಯಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>