<p><strong>ಬೆಳಗಾವಿ:</strong>ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆ ಅವರನ್ನು ತನಿಖೆಗಾಗಿ ಬೆಳಗಾವಿಗೆ ಬುಧವಾರ ರಾತ್ರಿ ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು ಕರೆತಂದಿದ್ದಾರೆ.</p>.<p>ಗುಂಡು ಹೊಡೆಯುವ ತರಬೇತಿಯನ್ನು ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಪಡೆದಿದ್ದಾಗಿ ಪರಶುರಾಮ ತನಿಖೆಯ ವೇಳೆ ಬಾಯ್ಬಿಟ್ಟಿದ್ದ.ಆ ಸ್ಥಳಗಳ ಪರಿಶೀಲನೆಗಾಗಿ ಎಸ್ಐಟಿ ಅಧಿಕಾರಿಗಳು ಪರಶುರಾಮನನ್ನು ಕರೆತಂದಿದ್ದಾರೆ.ಗುರುವಾರ ದಿನವಿಡೀ ಅಂತಹ ಪ್ರದೇಶಗಳ ಪರಿಶೀಲನೆ ನಡೆಸಿ ವಾಪಸ್ಸಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಆರೋಪಿಯನ್ನು ಜಿಲ್ಲೆಗೆ ಕರೆತಂದಿರುವ ಬಗ್ಗೆ ಖಚಿತ ಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ‘ಯಾವ ಯಾವ ಪ್ರದೇಶಗಳಿಗೆ ಅವರನ್ನು ಎಸ್ಐಟಿ ಅಧಿಕಾರಿಗಳು ಕರೆದೊಯ್ಯಲಿದ್ದಾರೆ ಎನ್ನುವುದು ಗೊತ್ತಿಲ್ಲ.ಸ್ಥಳ ಪರಿಶೀಲನೆ ನಡೆಸಿದ ನಂತರ ರಾತ್ರಿ ವಾಪಸ್ ತೆರಳಬಹುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಇನ್ನಷ್ಟು:</strong></p>.<p>*<a href="https://www.prajavani.net/news/article/2018/06/17/580024.html" target="_blank">ಗೌರಿ ಲಂಕೇಶ್ ಹತ್ಯೆಗೆ ‘ಆಪರೇಷನ್ ಆಯಿ’</a></p>.<p>*‘<a href="https://www.prajavani.net/news/article/2018/06/16/579796.html" target="_blank">ಗೌರಿ ಮಾತು ಕೇಳಿದಾಗ ರಕ್ತ ಕುದಿಯಿತು’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong>ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆ ಅವರನ್ನು ತನಿಖೆಗಾಗಿ ಬೆಳಗಾವಿಗೆ ಬುಧವಾರ ರಾತ್ರಿ ವಿಶೇಷ ತನಿಖಾ ದಳದ(ಎಸ್ಐಟಿ) ಅಧಿಕಾರಿಗಳು ಕರೆತಂದಿದ್ದಾರೆ.</p>.<p>ಗುಂಡು ಹೊಡೆಯುವ ತರಬೇತಿಯನ್ನು ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಪಡೆದಿದ್ದಾಗಿ ಪರಶುರಾಮ ತನಿಖೆಯ ವೇಳೆ ಬಾಯ್ಬಿಟ್ಟಿದ್ದ.ಆ ಸ್ಥಳಗಳ ಪರಿಶೀಲನೆಗಾಗಿ ಎಸ್ಐಟಿ ಅಧಿಕಾರಿಗಳು ಪರಶುರಾಮನನ್ನು ಕರೆತಂದಿದ್ದಾರೆ.ಗುರುವಾರ ದಿನವಿಡೀ ಅಂತಹ ಪ್ರದೇಶಗಳ ಪರಿಶೀಲನೆ ನಡೆಸಿ ವಾಪಸ್ಸಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಆರೋಪಿಯನ್ನು ಜಿಲ್ಲೆಗೆ ಕರೆತಂದಿರುವ ಬಗ್ಗೆ ಖಚಿತ ಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ‘ಯಾವ ಯಾವ ಪ್ರದೇಶಗಳಿಗೆ ಅವರನ್ನು ಎಸ್ಐಟಿ ಅಧಿಕಾರಿಗಳು ಕರೆದೊಯ್ಯಲಿದ್ದಾರೆ ಎನ್ನುವುದು ಗೊತ್ತಿಲ್ಲ.ಸ್ಥಳ ಪರಿಶೀಲನೆ ನಡೆಸಿದ ನಂತರ ರಾತ್ರಿ ವಾಪಸ್ ತೆರಳಬಹುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಇನ್ನಷ್ಟು:</strong></p>.<p>*<a href="https://www.prajavani.net/news/article/2018/06/17/580024.html" target="_blank">ಗೌರಿ ಲಂಕೇಶ್ ಹತ್ಯೆಗೆ ‘ಆಪರೇಷನ್ ಆಯಿ’</a></p>.<p>*‘<a href="https://www.prajavani.net/news/article/2018/06/16/579796.html" target="_blank">ಗೌರಿ ಮಾತು ಕೇಳಿದಾಗ ರಕ್ತ ಕುದಿಯಿತು’</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>